ಆ್ಯಪ್ನಗರ

ಸಂಪ್‌ ಗಿಳಿದರಷ್ಟೇ ಮಕ್ಕಳಿಗೆ ಕುಡಿವ ನೀರು !

ಮೋಟಾರ್‌ ದುರಸ್ತಿಗೆ ಮುಂದಾಗದ ಶಿಕ್ಷಣ ಇಲಾಖೆ / ಕೆ.ಆರ್‌.ನಗರದ ತಂದ್ರೆ ಶಾಲೆಯಲ್ಲಿ ಮಕ್ಕಳ ಜೀವದೊಂದಿಗೆ ಚೆಲ್ಲಾಟ !

Vijaya Karnataka 26 Dec 2017, 5:00 am

ಕೃಷ್ಣರಾಜನಗರ (ಮೈಸೂರು): ಶಿಕ್ಷಣ ಸಚಿವರ ಜಿಲ್ಲೆಯ ಶಾಲೆಯಲ್ಲಿಯೇ ಬಿಸಿಯೂಟದ ಬಳಿಕ ಕುಡಿಯುವ ನೀರಿಗಾಗಿ ಮಕ್ಕಳು ಸಂಪ್‌ಗೆ ಇಳಿಯಬೇಕಾದ ದುಸ್ಥಿತಿ ಬಂದಿದ್ದು, ಕೆಟ್ಟಿರುವ ಮೋಟಾರ್‌ ದುರಸ್ತಿಗೊಳಿಸದ ಶಿಕ್ಷಣ ಇಲಾಖೆ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ !

ಏಳು ದಶಕಗಳ ಹಿಂದೆ ನಿರ್ಮಾಣಗೊಂಡ ತಾಲೂಕಿನ ತಂದ್ರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮೋಟಾರ್‌ ಕೆಟ್ಟು ಹಲವು ತಿಂಗಳೇ ಕಳೆದಿದ್ದರೂ ದುರಸ್ತಿಗೊಳಿಸದ ಕಾರಣ ಮಕ್ಕಳು ಸಂಪ್‌ಗೆ ಇಳಿಯಬೇಕಾಗಿದೆ. ಇಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೆ ಇದಕ್ಕೆ ಯಾರು ಹೊಣೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟ ಮಾಡುವ ಮಕ್ಕಳು ಶಾಲಾವರಣದಲ್ಲಿರುವ ಸಂಪ್‌ಗೆ ಇಳಿದು ನೀರು ಪಡೆಯಬೇಕಾಗಿದೆ. ಇಲ್ಲಿ ಸಂಪ್‌ನ ಮುಚ್ಚಳ ತುಕ್ಕು ಹಿಡಿದು ಅದೆಷ್ಟೋ ದಿನಗಳಾಗಿದೆ. ಈ ತುಕ್ಕು ಹಿಡಿದ ಕಬ್ಬಿಣದ ತುಂಡುಗಳು ಸಂಪ್‌ನಲ್ಲಿ ಬೀಳುವುದರಿಂದ ಈ ನೀರನ್ನು ಕುಡಿಯುವ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ನಾಯಿಗಳ ಕಾಟ: ಶಾಲಾವರಣದಲ್ಲಿ ಮಧ್ಯಾಹ್ನ ಮಕ್ಕಳು ಊಟಕ್ಕೆ ಕುಳಿತರೆ ಇಲ್ಲಿ ನಾಯಿಗಳ ಹಿಂಡು ಗುಂಪು ಗುಂಪಾಗಿ ಆಗಮಿಸುತ್ತವೆ. ಇದರಿಂದ ಮಕ್ಕಳು ಮಧ್ಯಾಹ್ನದ ಊಟವನ್ನು ಬಿಟ್ಟು ನಾಯಿಗಳನ್ನು ಓಡಿಸುವುದನ್ನೇ ಕಾಯಕ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಕಟ್ಟಡವೂ ಶಿಥಿಲ: ಶಾಲೆಯ ಸುತ್ತಲೂ ಗಿಡಗಂಟಿಗಳು ಬೆಳೆದು ಇಡೀ ಶಾಲೆಯ ಪರಿಸರ ಹಾಳಾಗಿದೆ. ಇರುವ ಕಟ್ಟಡಗಳಲ್ಲಿ ಮೂರು ಕಟ್ಟಡಗಳು ಶಿಥಿಲಗೊಂಡು ಬೀಳುವ ಹಂತ ತಲುಪಿವೆ. ಈಗಾಗಲೆ ಒಂದು ಕಟ್ಟಡದ ಚಾವಣಿ ನೆಲಕ್ಕೊರಗಿದ್ದು ಮಕ್ಕಳು ಭಯದ ನಡುವೆ ಪಾಠ ಕೇಳುವಂತಾಗಿದೆ. ಇನ್ನು ಕಟ್ಟಡ ಪಾಳು ಬಿದ್ದಿದ್ದು ಸಂಜೆಯಾದರೆ ಪುಂಡ ಪೋಕರಿಗಳ ತಾಣವಾಗಿ ಮಾರ್ಪಾಡಾಗುತ್ತದೆ. ಶಾಲಾ ಕೊಠಡಿಯಲ್ಲಿ ಗಾರೆ ನೆಲ ಹಾಳಾಗಿ ಹಳ್ಳಬಿದ್ದಿದೆ. ಹಲವು ಬಾರಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ಮತ್ತೆ ಮತ್ತೆ ಕಿತ್ತು ಹೋಗುವುದರಿಂದ ಮಕ್ಕಳು ಎಡವಿ ಬಿದ್ದು ಗಾಯಗೊಳ್ಳುವಂತಾಗಿದೆ.

ಶಿಕ್ಷ ಣ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷ ಣವನ್ನು ಉತ್ತಮ ಪರಿಸರದೊಂದಿಗೆ ನೀಡುವಂತಾಗಲಿ ಎನ್ನುವುದು ಸಾರ್ವಜನಿಕರ ಒತ್ತಾಯ.

ಹಲವು ದಶಕಗಳಿಂದ ಶಾಲೆ ಉತ್ತಮವಾಗಿ ನಡೆಯುತ್ತಿದ್ದು, ಇತ್ತೀಚೆಗೆ ಶಾಲಾ ವಾತಾವರಣ ಹಾಳಾಗಿದೆ. ಇದರಿಂದ ಮಕ್ಕಳ ಶಿಕ್ಷ ಣದ ಮೇಲೆ ದುಷ್ಪರಿಣಾಮ ಬೀರಲು ಕಾರಣವಾಗಿದೆ. ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಂಡು ಶಾಲೆಯ ಕಟ್ಟಡವನ್ನು ದುರಸ್ತಿಗೊಳಿಸಿ, ಪರಿಸರ ಉತ್ತಮಪಡಿಸಿ ಮಕ್ಕಳಿಗೆ ರಕ್ಷ ಣೆ ನೀಡಲು ಕ್ರಮಕೈಗೊಳ್ಳಲಿ.

Vijaya Karnataka Web water to drink as babies as debus in sump
ಸಂಪ್‌ ಗಿಳಿದರಷ್ಟೇ ಮಕ್ಕಳಿಗೆ ಕುಡಿವ ನೀರು !

-ಧರ್ಮ ತಂದ್ರೆ.

ಸರಕಾರಿ ಶಾಲೆ ಎಂದರೆ ಈಗಾಗಲೆ ಪೋಷಕರು ಒಂದು ಹೆಜ್ಜೆ ಹಿಂದೆ ಇಡುವಂತಾಗಿದೆ. ಇಂಥÜ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಸರಕಾರಿ ಶಾಲೆಯ ಪರಿಸ್ಥಿತಿಯನ್ನು ಸರಿಪಡಿಸುವ ಬಗ್ಗೆ ಮುಂದಾಗದಿರುವುದು ವಿಷಾದದ ವಿಚಾರ. ಇನ್ನಾದರೂ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ನೂತನ ಕಟ್ಟಡವನ್ನು ನಿರ್ಮಿಸಲು ಕ್ರಮಕೈಗೊಳ್ಳಬೇಕಿದೆ.
-ಗಿರೀಶ್‌ ತಂದ್ರೆ.

ಶಾಲೆಯ ಕಟ್ಟಡ ನಿರ್ಮಾಣಕ್ಕೆ ಈಗಾಗಲೆ ವರದಿ ನೀಡಲಾಗಿದೆ. ಮಕ್ಕಳು ನೀರಿಗಾಗಿ ಸಂಪ್‌ಗೆ ಇಳಿಯುವ ಬಗ್ಗೆ ಹಾಗೂ ಶಾಲಾವರಣದಲ್ಲಿ ನಾಯಿಗಳ ಹಾವಳಿ ತಡೆಯುವ ಬಗ್ಗೆ ಶಾಲಾವರಣ ಮತ್ತು ಮಕ್ಕಳ ಸುರಕ್ಷ ತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಈಗಾಗಲೆ ಸೂಚಿಸಿದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಪ್ರಭಾರ ಮುಖ್ಯ ಶಿಕ್ಷ ಕರಿಗೆ ನೋಟಿಸ್‌ ನೀಡಿ ಎಸ್‌ಡಿಎಂಸಿಯವರಿಗೆ ಸೂಚನೆ ನೀಡಲಾಗುವುದು.
-ರಾಜು ಕ್ಷೇತ್ರ ಶಿಕ್ಷ ಣಾಧಿಕಾರಿ, ಕೃಷ್ಣರಾಜನಗರ ತಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ