ಆ್ಯಪ್ನಗರ

ನಾವು ಹೋಗಿದ್ದು ಇಟಲಿಗಲ್ಲ, ನೆದರ್‌ಲ್ಯಾಂಡ್‌ಗೆ

​ಮಧುಚಂದ್ರಕ್ಕಾಗಿ ನಾವು ಇಟಲಿಗೆ ಹೋಗಿದ್ದೆವು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾವು ಹೋಗಿದ್ದು ಇಟಲಿಗಲ್ಲ, ನೆದರ್‌ಲ್ಯಾಂಡ್‌ಗೆ ಎಂದು ತಾರಾ ದಂಪತಿ ಚಂದನ್‌ಶೆಟ್ಟಿ ಹಾಗೂ ನಿವೇದಿತಾಗೌಡ ಸ್ಪಷ್ಟಪಡಿಸಿದ್ದಾರೆ.

Vijaya Karnataka 15 Mar 2020, 5:00 am
ಮಂಡ್ಯ: ಮಧುಚಂದ್ರಕ್ಕಾಗಿ ನಾವು ಇಟಲಿಗೆ ಹೋಗಿದ್ದೆವು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾವು ಹೋಗಿದ್ದು ಇಟಲಿಗಲ್ಲ, ನೆದರ್‌ಲ್ಯಾಂಡ್‌ಗೆ ಎಂದು ತಾರಾ ದಂಪತಿ ಚಂದನ್‌ಶೆಟ್ಟಿ ಹಾಗೂ ನಿವೇದಿತಾಗೌಡ ಸ್ಪಷ್ಟಪಡಿಸಿದ್ದಾರೆ.
Vijaya Karnataka Web chandan shetty nivedita gwda


ಬೆಂಗಳೂರಿನಿಂದ ಮೈಸೂ ರಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿರಕ್ಕೆ ಶನಿವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೆಲವು ಕಿಡಿಗೇಡಿಗಳು ನಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪ್‌ ಹಬ್ಬಿಸಿ ಇಟಲಿಗೆ ಹೋಗಿದ್ದಾರೆ ಎಂದು ಯೂಟ್ಯೂಬ್‌ನಲ್ಲಿ ಹರಿಯ ಬಿಟ್ಟಿದ್ದಾರೆ. ಇದರಿಂದ ಅವರಿಗೇನು ಉಪ ಯೋಗವೋ ಗೊತ್ತಿಲ್ಲ,'' ಎಂದು ಚಂದನ್‌ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

''ಚೀನಾದಲ್ಲಿಮಾತ್ರ ಕೊರೊನಾ ಭೀತಿ ಇದ್ದರಿಂದ ನಾವು ನೆದರ್‌ಲ್ಯಾಂಡ್‌ಗೆ ಮಾ.3ರಂದು ಹೋಗಿದ್ದೆವು. ಅಲ್ಲಿಗೆ ಹೋದಾಗ ಕೊರೊನಾ ಭೀತಿ ಇರಲಿಲ್ಲ. ಅಲ್ಲಿಯ ಜನತೆ ಯಾರೂ ಮಾಸ್ಕ್‌ ಹಾಕಿಕೊಂಡು ಓಡಾಡುತ್ತಿರಲಿಲ್ಲ. ಪಕ್ಕದ ಇಟಲಿಯಲ್ಲಿ ಮಾತ್ರ ಕೊರೊನಾ ಭೀತಿಯಿತ್ತು. ಇದರಿಂದ ಮಾ.6ರಂದೇ ನಾವು ಭಾರತಕ್ಕೆ ವಾಪಸಾದೆವು,''ಎಂದು ತಿಳಿಸಿದರು.

''ನಾವು ರಕ್ತ ಪರೀಕ್ಷೆ ಸೇರಿದಂತೆ ಎಲ್ಲರೀತಿಯ ಆರೋಗ್ಯ ತಪಾಸಣೆ ಮಾಡಿಸಿದ್ದು, ಆರೋಗ್ಯ ವಾಗಿಯೇ ಇದ್ದೇವೆ. ಇಲ್ಲೂ ಸಹ ಯಾವುದೇ ರೀತಿಯ ಆರೋಗ್ಯ ತಪಾಸಣೆಗೆ ನಾವು ಸಿದ್ಧರಿದ್ದೇವೆ. ಕೊರೊನಾ ಭೀತಿ ಕಳೆದ ಮೇಲೆ ನಾವು ಮತ್ತೆ ಹೋಗುತ್ತೇವೆ. ಹನಿಮೂನ್‌ ಪ್ರವಾಸ ಅರ್ಧಕ್ಕೆ ನಿಂತಿದ್ದಕ್ಕೆ ಬೇಸರವಿದೆ. ಬೇಸರಕ್ಕಿಂತಲೂ ಹೆಚ್ಚಾಗಿ ಆರೋಗ್ಯ ಮುಖ್ಯ,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ