ಆ್ಯಪ್ನಗರ

ಬಿಳಿ ಬಾವುಟ ತೋರಿದ ಎಚ್ವಿ: ಸಾರಾ ಸಹಮತ

ಮಾಜಿ ಸಚಿವರಾದ ಅಡಗೂರು ಎಚ್.ವಿಶ್ವನಾಥ್ ಹಾಗೂ ಸಾ.ರಾ.ಮಹೇಶ್ ಅವರು ವೈಯಕ್ತಿಕ ಮಟ್ಟದಲ್ಲಿ ಪರಸ್ಪರ ತಮ್ಮ ಆರೋಪ-ಪ್ರತ್ಯಾರೋಪಗಳನ್ನು ಕೈಬಿಡಲು ನಿರ್ಧರಿಸಿ ರಾಜಿಯಾಗಿದ್ದಾರೆ.

Vijaya Karnataka 25 Sep 2019, 5:00 am
ಮೈಸೂರು: ಮಾಜಿ ಸಚಿವರಾದ ಅಡಗೂರು ಎಚ್.ವಿಶ್ವನಾಥ್ ಹಾಗೂ ಸಾ.ರಾ.ಮಹೇಶ್ ಅವರು ವೈಯಕ್ತಿಕ ಮಟ್ಟದಲ್ಲಿ ಪರಸ್ಪರ ತಮ್ಮ ಆರೋಪ-ಪ್ರತ್ಯಾರೋಪಗಳನ್ನು ಕೈಬಿಡಲು ನಿರ್ಧರಿಸಿ ರಾಜಿಯಾಗಿದ್ದಾರೆ.
Vijaya Karnataka Web white flag hv sara mahesh consent
ಬಿಳಿ ಬಾವುಟ ತೋರಿದ ಎಚ್ವಿ: ಸಾರಾ ಸಹಮತ


ವಿಶ್ವನಾಥ್ ಅವರು ಮಂಗಳವಾರ ಮೊದಲು ಮಾತನಾಡಿ, ವೈಯಕ್ತಿಕ ವಿಚಾರಗಳನ್ನು ಇಬ್ಬರೂ ನಿಲ್ಲಿಸಬೇಕಿದೆ. ಇಬ್ಬರೂ ಗಾಜಿನ ಮನೆಯಲ್ಲಿದ್ದೇವೆ. ಜನರ ಮುಂದೆ ನಾವು ಜಾರಿ ಬೀಳುವುದು ಬೇಡ. ನಾವಿಬ್ಬರೂ ಒಂದೇ ಊರಿನವರು. ಮಹೇಶ್ ಅವರಿಗೆ ಒಳ್ಳೆಯದಾಗಲಿ. ಪರಸ್ಪರ ಈ ರೀತಿ ಮಾತಾಡುವುದು ಬೇಡ ಎಂದಿದ್ದರು. ಇದಕ್ಕೆ ಸ್ಪಂದಿಸಿರುವ ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು, ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತೂ ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕಿಸಿಲ್ಲ. ವಿಶ್ವನಾಥ್ ಅವರು ಎರಡು ಬಾರಿ ತಮ್ಮ ಬಗ್ಗೆ ವೈಯಕ್ತಿಕವಾಗಿ ಟೀಕಿಸಿದಾಗ ತಾವೂ ವೈಯಕ್ತಿಕವಾಗಿ ಮಾತಾಡಬೇಕಾಯಿತು ಎಂದಿದ್ದಾರೆ.

ವಿಶ್ವನಾಥ್ ಹಿರಿಯ ರಾಜಕಾರಣಿ. ನಮ್ಮಂತಹ ಕಿರಿಯರಿಗೆ ಅವರು ಮಾರ್ಗದರ್ಶನ ಮಾಡಬೇಕು. ಹೀಗಿರುವಾಗ ಅವರೇ ನಮ್ಮನ್ನು ವೈಯಕ್ತಿಕವಾಗಿ ಟೀಕಿಸಿದರೆ ಹೇಗೆ? ಸತ್ಯಾಸತ್ಯತೆ ಇಬ್ಬರಿಗೂ ಗೊತ್ತಿದೆ. ನಾವು ಏನು ಮಾಡಿದರೂ ಜನರಿಗೆ ಗೊತ್ತಿರುತ್ತದೆ. ಜನರು ಎಲ್ಲರನ್ನೂ ನೋಡುತ್ತಿರುತ್ತಾರೆ. ವಿಶ್ವನಾಥ್ ಅವರು ಇನ್ನು ಮುಂದೆ ವೈಯಕ್ತಿಕ ಟೀಕೆ ಬೇಡ ಎಂದಿದ್ದಾರೆ. ಇದಕ್ಕೆ ತಮ್ಮ ಸಹಮತವೂ ಇದೆ. ವಿಶ್ವನಾಥ್ ಅವರಿಗೆ ನೋವಾಗಿದ್ದರೆ ಬೇಸರ ಮಾಡಿಕೊಳ್ಳುವುದು ಬೇಡ ಎಂದಿದ್ದಾರೆ ಸಾ.ರಾ.ಮಹೇಶ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ