* ಕಂಬಿ ಮೇಲೆ ನರಳಾಡಿ ಪ್ರಾಣಬಿಟ್ಟ ಆನೆ !
ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ಉದ್ಯಾನದಿಂದ ಹೊರ ಬಂದಿದ್ದ ಸಲಗವೊಂದು ಮರಳಿ ಉದ್ಯಾನಕ್ಕೆ ತೆರಳಲು ರೈಲ್ವೆ ಕಂಬಿಯ ತಡೆಗೋಡೆ ದಾಟಲು ಸಾಧ್ಯವಾಗದೆ, ಕಂಬಿಯ ನಡುವೆ ಸಿಲುಕಿ ಅಸ್ವಸ್ಥಗೊಂಡು ಮೃತಪಟ್ಟಿದೆ.
ವೀರನಹೊಸಹಳ್ಳಿ ವಲಯಕ್ಕೆ ಸೇರಿದ ಆರ್ಎಫ್ಒ ವಸತಿ ಗೃಹದ ಹಿಂಭಾಗದ ತಡೆಗೋಡೆ ದಾಟಿ ಒಳ ಪ್ರವೇಶಿಸಲು ಸಾಕಷ್ಟು ಪ್ರಯತ್ನಿಸಿರುವ ಸಲಗ ರೈಲ್ವೆ ಕಂಬಿ ದಾಟಲಾಗದೆ ಉಸಿರಾಟದ ತೊಂದರೆಗೊಳಗಾಗಿ ಪ್ರಾಣಬಿಟ್ಟಿದೆ ಎಂದು ಶಂಕಿಸಲಾಗಿದೆ.
ಸುಮಾರು 42 ವರ್ಷದ ಈ ಸಲಗ ಇತರೆ ಎರಡು ಆನೆಗಳೊಂದಿಗೆ ಗುರುವಾರ ರಾತ್ರಿ ಉದ್ಯಾನದಿಂದ ಹೊರ ದಾಟಿ ಕೋಣನಹೊಸಹಳ್ಳಿ, ಕೊಳುವಿಗೆ, ಮುದಗನೂರು ಬಳಿ ಅಡ್ಡಾಡುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆ ಗಣೇಶ, ಬಲರಾಮ ನೆರವಿನಿಂದ ಶುಕ್ರವಾರ ಬೆಳಗ್ಗೆ ಎರಡು ಕಾಡಾನೆಗಳನ್ನು ಕೊಳವಿಗೆಯ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಗೇಟ್ನಿಂದ ಒಳ ಸೇರಿಸಿದ್ದರು.
ಆದರೆ ಈ ಸಲಗ ಗಾಬರಿಗೊಂಡು ಗುಂಪಿನಿಂದ ಬೇರ್ಪಟ್ಟು ಕೋಣನಹೊಸಹಳ್ಳಿ ಬಳಿಯ ಕೂಟದ ಕಡದ ನೀಲಗಿರಿ ತೋಪಿನಲ್ಲಿ ಸೇರಿಕೊಂಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ಸಾಕಾನೆಗಳಿಗೂ ಹೆದರದೆ ಸೆಡ್ಡು ಹೊಡೆದಿತ್ತು. ಕೊನೆಗೆ ರಾತ್ರಿವೇಳೆ ಕಾಡಿಗಟ್ಟಲು ಸಿಬ್ಬಂದಿ ಯತ್ನ ವಿಫಲವಾಗಿತ್ತು. ಸಾಮಾನ್ಯವಾಗಿ ಆನೆಗಳು ರಾತ್ರಿ ವೇಳೆ ಕಾಡಿಗೆ ಸೇರಿಕೊಳ್ಳುವುದು ವಾಡಿಕೆ. ಅದæೕ ರೀತಿ ಈ ಸಲಗ ವೀರನಹೊಸಹಳ್ಳಿವರೆಗೆ ಬೇಲಿ ಅಂಚಿನಲ್ಲೇ ನಡೆದು ಬಂದು ಕೊನೆಗೆ ಮುಂಜಾನೆ ಉದ್ಯಾನ ಪ್ರವೇಶಿಸಲು ರೈಲ್ವೆ ಕಂಬಿ ಏರಿ ವಿಫಲ ಯತ್ನ ನಡೆಸಿ ಪ್ರಾಣ ಕಳೆದುಕೊಂಡಿದೆ. ಬೇಲಿಗೆ ಸಿಲುಕಿಕೊಂಡ ಆನೆ ಘೀಳಿಡಲೂ ಆಗದೆ ಇಹಲೋಕ ತ್ಯಜಿಸಿದೆ.
ಜನವೋ ಜನ: ಗ್ರಾಮದ ಬಳಿಯೇ ಘಟನೆ ನಡೆದಿರುವುದರಿಂದ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ, ಆನೆಯ ಸಾವಿಗೆ ಮಮ್ಮಲ ಮರುಗಿದರು. ಇದೇ ವೇಳೆ ಸತ್ತ ಆನೆಯೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಉದ್ಯಾನದಿಂದ ಹೊರಬಂದ ಸಲಗವನ್ನು ಮತ್ತೆ ಅರಣ್ಯಕ್ಕೆ ಸೇರಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ನಾರಾಯಣಸ್ವಾಮಿ, ಎ.ಸಿ.ಎಫ್. ಪ್ರಸನ್ನಕುಮಾರ್, ಆರ್ಎಫ್ಒ ಸಂದೀಪ್ ಸೇರಿದಂತೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಆನೆಗೆ ಹಗ್ಗ ಕಟ್ಟಿ ಕೆಳಕ್ಕಿಳಿಸಿದರು. ನಾಗರಹೊಳೆ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಶವಪರೀಕ್ಷೆ ನಡೆಸಿದರು.
ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ಉದ್ಯಾನದಿಂದ ಹೊರ ಬಂದಿದ್ದ ಸಲಗವೊಂದು ಮರಳಿ ಉದ್ಯಾನಕ್ಕೆ ತೆರಳಲು ರೈಲ್ವೆ ಕಂಬಿಯ ತಡೆಗೋಡೆ ದಾಟಲು ಸಾಧ್ಯವಾಗದೆ, ಕಂಬಿಯ ನಡುವೆ ಸಿಲುಕಿ ಅಸ್ವಸ್ಥಗೊಂಡು ಮೃತಪಟ್ಟಿದೆ.
ವೀರನಹೊಸಹಳ್ಳಿ ವಲಯಕ್ಕೆ ಸೇರಿದ ಆರ್ಎಫ್ಒ ವಸತಿ ಗೃಹದ ಹಿಂಭಾಗದ ತಡೆಗೋಡೆ ದಾಟಿ ಒಳ ಪ್ರವೇಶಿಸಲು ಸಾಕಷ್ಟು ಪ್ರಯತ್ನಿಸಿರುವ ಸಲಗ ರೈಲ್ವೆ ಕಂಬಿ ದಾಟಲಾಗದೆ ಉಸಿರಾಟದ ತೊಂದರೆಗೊಳಗಾಗಿ ಪ್ರಾಣಬಿಟ್ಟಿದೆ ಎಂದು ಶಂಕಿಸಲಾಗಿದೆ.
ಸುಮಾರು 42 ವರ್ಷದ ಈ ಸಲಗ ಇತರೆ ಎರಡು ಆನೆಗಳೊಂದಿಗೆ ಗುರುವಾರ ರಾತ್ರಿ ಉದ್ಯಾನದಿಂದ ಹೊರ ದಾಟಿ ಕೋಣನಹೊಸಹಳ್ಳಿ, ಕೊಳುವಿಗೆ, ಮುದಗನೂರು ಬಳಿ ಅಡ್ಡಾಡುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆ ಗಣೇಶ, ಬಲರಾಮ ನೆರವಿನಿಂದ ಶುಕ್ರವಾರ ಬೆಳಗ್ಗೆ ಎರಡು ಕಾಡಾನೆಗಳನ್ನು ಕೊಳವಿಗೆಯ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಗೇಟ್ನಿಂದ ಒಳ ಸೇರಿಸಿದ್ದರು.
ಆದರೆ ಈ ಸಲಗ ಗಾಬರಿಗೊಂಡು ಗುಂಪಿನಿಂದ ಬೇರ್ಪಟ್ಟು ಕೋಣನಹೊಸಹಳ್ಳಿ ಬಳಿಯ ಕೂಟದ ಕಡದ ನೀಲಗಿರಿ ತೋಪಿನಲ್ಲಿ ಸೇರಿಕೊಂಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ಸಾಕಾನೆಗಳಿಗೂ ಹೆದರದೆ ಸೆಡ್ಡು ಹೊಡೆದಿತ್ತು. ಕೊನೆಗೆ ರಾತ್ರಿವೇಳೆ ಕಾಡಿಗಟ್ಟಲು ಸಿಬ್ಬಂದಿ ಯತ್ನ ವಿಫಲವಾಗಿತ್ತು. ಸಾಮಾನ್ಯವಾಗಿ ಆನೆಗಳು ರಾತ್ರಿ ವೇಳೆ ಕಾಡಿಗೆ ಸೇರಿಕೊಳ್ಳುವುದು ವಾಡಿಕೆ. ಅದæೕ ರೀತಿ ಈ ಸಲಗ ವೀರನಹೊಸಹಳ್ಳಿವರೆಗೆ ಬೇಲಿ ಅಂಚಿನಲ್ಲೇ ನಡೆದು ಬಂದು ಕೊನೆಗೆ ಮುಂಜಾನೆ ಉದ್ಯಾನ ಪ್ರವೇಶಿಸಲು ರೈಲ್ವೆ ಕಂಬಿ ಏರಿ ವಿಫಲ ಯತ್ನ ನಡೆಸಿ ಪ್ರಾಣ ಕಳೆದುಕೊಂಡಿದೆ. ಬೇಲಿಗೆ ಸಿಲುಕಿಕೊಂಡ ಆನೆ ಘೀಳಿಡಲೂ ಆಗದೆ ಇಹಲೋಕ ತ್ಯಜಿಸಿದೆ.
ಜನವೋ ಜನ: ಗ್ರಾಮದ ಬಳಿಯೇ ಘಟನೆ ನಡೆದಿರುವುದರಿಂದ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ, ಆನೆಯ ಸಾವಿಗೆ ಮಮ್ಮಲ ಮರುಗಿದರು. ಇದೇ ವೇಳೆ ಸತ್ತ ಆನೆಯೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಉದ್ಯಾನದಿಂದ ಹೊರಬಂದ ಸಲಗವನ್ನು ಮತ್ತೆ ಅರಣ್ಯಕ್ಕೆ ಸೇರಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ನಾರಾಯಣಸ್ವಾಮಿ, ಎ.ಸಿ.ಎಫ್. ಪ್ರಸನ್ನಕುಮಾರ್, ಆರ್ಎಫ್ಒ ಸಂದೀಪ್ ಸೇರಿದಂತೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಆನೆಗೆ ಹಗ್ಗ ಕಟ್ಟಿ ಕೆಳಕ್ಕಿಳಿಸಿದರು. ನಾಗರಹೊಳೆ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಶವಪರೀಕ್ಷೆ ನಡೆಸಿದರು.