ಆ್ಯಪ್ನಗರ

ನಾಲೆಗೆ ಕಾರು ಉರುಳಿ ಮಹಿಳೆ ಸಾವು

​​ಪ್ರವಾಸಿಗರ ಕಾರೊಂದು ರಸ್ತೆ ಪಕ್ಕದ ನಾಲೆಗೆ ಉರುಳಿ ಮಹಿಳೆಯೊಬ್ಬರು ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ. ಬೆಂಗಳೂರಿನ ನಿವಾಸಿ ರಮಾದೇವಿ (33) ಮೃತರು.

Vijaya Karnataka 4 Nov 2019, 5:00 am
ತಲಕಾಡು: ಪ್ರವಾಸಿಗರ ಕಾರೊಂದು ರಸ್ತೆ ಪಕ್ಕದ ನಾಲೆಗೆ ಉರುಳಿ ಮಹಿಳೆಯೊಬ್ಬರು ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ. ಬೆಂಗಳೂರಿನ ನಿವಾಸಿ ರಮಾದೇವಿ (33) ಮೃತರು.
Vijaya Karnataka Web woman dies after roll over car to channel
ನಾಲೆಗೆ ಕಾರು ಉರುಳಿ ಮಹಿಳೆ ಸಾವು


ರಮಾದೇವಿ ಅವರ ಪತಿ ಸುರೇಂದ್ರ ರೆಡ್ಡಿ (38), ಪುತ್ರ ಶುಶಾಂತ್‌ (5), ತಾಯಿ ಶೇಷಮ್ಮ (50), ಸಹೋದರ ಕೃಷ್ಣಾರೆಡ್ಡಿ ಗಾಯಗೊಂಡಿದ್ದಾರೆ. ಶುಶಾಂತ್‌, ಸುರೇಂದ್ರ ಹಾಗೂ ಶೇಷಮ್ಮ ಅವರು ತೀವ್ರ ಗಾಯಗೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ಭಾನುವಾರ ಕಾರಿನಲ್ಲಿ ತಲಕಾಡಿಗೆ ಪ್ರವಾಸಕ್ಕೆ ಅಗಮಿಸಿದ್ದ ಇವರು, ಹಿಂದಿರುಗುವಾಗ ಇಲ್ಲಿನ ಹಳೇ ಬೀದಿ ರಸ್ತೆ ಪಕ್ಕದಲ್ಲಿಹಾದು ಹೋಗಿರುವ ಮಾಧವಮಂತ್ರಿ ನಾಲೆಗೆ ನಿಯಂತ್ರಣ ತಪ್ಪಿ ವಾಹನ ಉರುಳಿದೆ. ಸ್ಥಳೀಯರು ನೀರಿಗಿಳಿದು ಕಾರಿನೊಳಗೆ ಸಿಲುಕಿದ್ದವರನ್ನು ಮೇಲೆತ್ತಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ರಮಾದೇವಿ ಮೈಸೂರಿನ ಆಸ್ಪತ್ರೆಗೆ ಸಾಗಿಸು ವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು ಎಂದು ತಲಕಾಡು ಪೊಲೀಸ್‌ ಠಾಣೆಯ ಪಿಎಸ್‌ಐ ಬಸವರಾಜು ತಿಳಿಸಿದ್ದಾರೆ. ನಡೆದಿದ್ದಿಷ್ಟು: ಮೂಲತಃ ಅಂಧ್ರಪ್ರದೇಶದ ನೆಲ್ಲೂರಿನವರಾದ ಸುರೇಂದ್ರ ರೆಡ್ಡಿಯವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿಕೆಲಸ ಮಾಡುತ್ತಿದ್ದು, ಭಾನುವಾರ ರಜಾ ದಿನವಾದ್ದರಿಂದ ಕುಟುಂಬ ಸಮೇತ ತಲಕಾಡಿಗೆ ಪ್ರವಾಸಕ್ಕೆ ಬಂದಿದ್ದರು.

ಪ್ರವಾಸ ಮುಗಿಸಿ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ. ಮಾನವೀಯತೆ ಮೆರೆದ ಸ್ಥಳೀಯರು: ''ನಿಯಂತ್ರಣ ಸಿಗದೆ ಮೂರು ಬಾರಿ ಪಲ್ಟಿ ಹಾಕಿ ನಾಲೆಗೆ ಉರುಳಿದ ಕಾರನ್ನು ನೋಡಿ ನಾವೆಲ್ಲರೂ ನೀರಿಗಿಳಿದೆವು. ಮಹಿಳೆ ಸೇರಿದಂತೆ ಎಲ್ಲರನ್ನೂ ನೀರಿನಿಂದ ಹೊರ ತೆಗೆದೆವು. ಸ್ವಲ್ಪ ತಡ ಮಾಡಿದ್ದರೂ ಮತ್ತಷ್ಟು ಅನಾಹುತ ಹೆಚ್ಚಾಗುತ್ತಿತ್ತು,'' ಎಂದು ಸ್ಥಳೀಯರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ