ಆ್ಯಪ್ನಗರ

ಪೊಲೀಸ್‌ ಇಲಾಖೆಯಲ್ಲಿ 'ಸ್ತ್ರೀ ಶಕ್ತಿ' ಹೆಚ್ಚಲಿ: ಎಡಿಜಿಪಿ ಹರಿಶೇಖರನ್‌

ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ, ಪ್ರಕರಣಗಳನ್ನು ದಾಖಲಿಸುವಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ. ಮಹಿಳಾ ಪೊಲೀಸ್‌ ಆಗಿ ಇಲಾಖೆಗೆ ಸೇರಿದವರಿಗೆ ಮುಂದೆ ಅಧಿಕಾರಿಯಾಗುವ ಅವಕಾಶವಿದೆ.

Vijaya Karnataka 22 Oct 2021, 7:09 pm
ಮೈಸೂರು: ಪೊಲೀಸ್‌ ಇಲಾಖೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದರೆ ಯಾವುದೇ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಾರೆ ಎಂದು ತರಬೇತಿ ವಿಭಾಗದ ಎಡಿಜಿಪಿ ಪಿ. ಹರಿಶೇಖರನ್‌ ಅಭಿಪ್ರಾಯಪಟ್ಟರು.
Vijaya Karnataka Web ಪೊಲೀಸ್‌
ಪೊಲೀಸ್‌


ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್‌ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದಿರುವ 3ನೇ ತಂಡದ ಮಹಿಳಾ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡಿದರು.

''ಯಾವುದೇ ಅಪರಾಧ ಪತ್ತೆಗೂ ಆದ್ಯತೆ ನೀಡುವುದರೊಂದಿಗೆ ಠಾಣೆಯ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಾರೆ. ಆದ್ದರಿಂದ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು''ಎಂದು ಮನವಿ ಮಾಡಿದರು.

ಮೈಸೂರಿನಲ್ಲಿ ಭಾರೀ ಮಳೆ: ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂ ಕುಸಿತ

''ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ, ಪ್ರಕರಣಗಳನ್ನು ದಾಖಲಿಸುವಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ. ದೂರುಗಳು ಬಂದಾಗ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಮಹಿಳಾ ಪೊಲೀಸ್‌ ಆಗಿ ಇಲಾಖೆಗೆ ಸೇರಿದವರಿಗೆ ಮುಂದೆ ಅಧಿಕಾರಿಯಾಗುವ ಅವಕಾಶವಿದೆ''ಎಂದು ಸಲಹೆ ನೀಡಿದರು.

ಚಾಮುಂಡಿಬೆಟ್ಟ ಮತ್ತೊಂದು ಕೊಡಗು ಆಗದಿರಲಿ; ಭೂಕುಸಿತಕ್ಕೆ ಮಳೆಯೇ ಕಾರಣ!

ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲ ಸಿಎಆರ್‌ ಡಿಸಿಪಿ ಶಿವರಾಜು, ಕೆಪಿಎ ನಿರ್ದೇಶಕ ವಿಪುಲ್‌ಕುಮಾರ್‌, ಉಪನಿರ್ದೇಶಕಿ ಡಾ. ಸುಮನ್‌ ಡಿ.ಪನ್ನೇಕರ್‌, ಡಿಸಿಪಿಗಳಾದ ಪ್ರದೀಪ್‌ ಗುಂಟಿ, ಗೀತಾ ಪ್ರಸನ್ನ, ಮಹಿಳಾ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ.ಧರಣಿದೇವಿ ಮಾಲಗತ್ತಿ, ಎಸ್ಪಿ ಆರ್‌.ಚೇತನ್‌, ಹೆಚ್ಚುವರಿ ಎಸ್ಪಿ ಆರ್‌.ಶಿವಕುಮಾರ್‌, ಅಶ್ವಾರೋಹಿ ದಳದ ಕಮಾಂಡೆಂಟ್‌ ನಾಗರಾಜ್‌ ಇದ್ದರು.

ತಾತ್ವಿಕ ಪಾಟೀಲ್‌ಗೆ ಸರ್ವೋತ್ತಮ ಪ್ರಶಸ್ತಿ

3ನೇ ತಂಡದಲ್ಲಿ ಒಟ್ಟು 168 ಮಹಿಳಾ ಪೊಲೀಸ್‌ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ. ಈ ಪೈಕಿ ಕಲಬುರಗಿ ಜಿಲ್ಲೆಗೆ ನೇಮಕವಾಗಿರುವ ಬಿ. ತಾತ್ವಿಕ ಪಾಟೀಲ್‌ ಸರ್ವೋತ್ತಮ ಪ್ರಶಸ್ತಿ ಪಡೆದಿದ್ದಾರೆ.

ಒಳಾಂಗಣ ಪ್ರಶಸ್ತಿ- ಉಡುಪಿಯ ಬಿ.ಆರ್‌. ರಮ್ಯಾ (ಪ್ರ), ಬೆಂಗಳೂರು ನಗರದ ಸುನಿತಾ ಹೊಸಮನಿ (ದ್ವಿ) ಮತ್ತು ತುಮಕೂರಿನ ಎಚ್‌.ಇ. ರೇಣುಕಮ್ಮ(ತೃ).

ಹೊರಾಂಗಣ ಪ್ರಶಸ್ತಿ- ಕಲಬುರಗಿಯ ಬಿ. ತಾತ್ವಿಕ ಪಾಟೀಲ್‌ (ಪ್ರ), ನಳಿನಿ ಕುಮಾರಿ ಕುಲಕರ್ಣಿ (ದ್ವಿ), ಉಡುಪಿಯ ಬಿ.ಎಸ್‌. ದೀಕ್ಷಿತಾ ಮತ್ತು ಶೋಭಾ (ತೃ).

ರೈಫಲ್‌ ಶೂಟಿಂಗ್‌ ಪ್ರಶಸ್ತಿ- ಬೆಳಗಾವಿಯ ಸುಧಾ (ಪ್ರ), ಉಡುಪಿಯ ಜಿ. ನೇತ್ರಾವತಿ (ದ್ವಿ) ಮತ್ತು ಬೆಂಗಳೂರು ನಗರದ ಸಲೀಮಾ ರೋಣದ (ತೃ).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ