ಮೈಸೂರು : ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರಕಾರ ಕೆಎಸ್ಐಸಿ ವತಿಯಿಂದ ರಾಜ್ಯಾದ್ಯಂತ 14 ಸಾವಿರ ರೂ. ಬೆಲೆ ಬಾಳುವ 5 ಸಾವಿರ ಮೈಸೂರು ಸಿಲ್ಕ್ ಸೀರೆಗಳನ್ನು 4,725 ರೂ.ಗಳ ಬಂಪರ್ ರಿಯಾಯಿತಿ ದರದಲ್ಲಿ ನೀಡಿದೆ. ಲಕ್ಕಿ ಡಿಪ್ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದರಿಂದ ಸೀರೆ ಸಿಕ್ಕವರು ಸಂತೋಷಪಟ್ಟರೆ, ಸಿಗದವರು ನಿರಾಸೆಗೊಂಡರು.
ಕಳೆದ ತಿಂಗಳು ಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದಾಗಿ ರೇಷ್ಮೆ ಸಚಿವ ಸಾ.ರಾ. ಮಹೇಶ್ ಘೋಷಣೆ ಮಾಡಿದ್ದರು. ಆದರೆ ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಎದುರಾದ ಕಾರಣ ವಿತರಣೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಸದ್ದಿಲ್ಲದೆ ಮಹಿಳೆಯರಿಗೆ ಸೀರೆ ವಿತರಿಸುವಂತೆ ಸರಕಾರ ಸೂಚಿಸಿದೆ. ಅದರಂತೆ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ ಮಂಗಳವಾರ ಬೆಳ್ಳಗ್ಗೆ 11 ಗಂಟೆಯಿಂದಲೆ ಸೀರೆ ವಿತರಣೆಗೆ ಫಲಾಣುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿತು. ಸೀರೆ ಅಗತ್ಯವಿರುವವರಿಂದ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನ ಚೀಟಿಗಳನ್ನು ಲಕ್ಕಿ ಡಿಪ್ ಮುಖಾಂತರ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಅಂತೆಯೆ ರಾಜ್ಯದ ಐದು ಕೇಂದ್ರಗಳಲ್ಲಿ ಸೀರೆ ಕೊಳ್ಳುವ ಮಹಿಳೆಯರಿಂದ ಆಧಾರ್ ಪಡೆದು ನೋಂದಣಿ ಕಾರ್ಯ ಆರಂಭಿಸಲಾಯಿತು.
ಮಹಿಳೆಯರ ಲಗ್ಗೆ: ಕೆಎಸ್ಐಸಿ ಇಂತಹದೊಂದು ಬಂಪರ್ ಆಫರ್ ನೀಡುತ್ತಿರುವ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಸಾವಿರಾರು ಮಹಿಳೆಯರು ಮೈಸೂರಿನ ಮೃಗಾಲಯದ ಸಮೀಪ ಇರುವ ಮೈಸೂರು ಸಿಲ್ಕ್ ಕೇಂದ್ರದತ್ತ ಧಾವಿಸಿದರು. ಹೀಗೆ ಒಬ್ಬರಿಂದೊಬ್ಬರಿಗೆ ಮಾಹಿತಿ ಹರಡುತ್ತಲೇ, ಕೇಂದ್ರದ ಎದುರಿನ ಮಹಿಳೆಯರ ಸಾಲು ಬೆಳೆಯುತ್ತ ಹೋಯಿತು. ಕೇಂದ್ರದ ಸಿಬ್ಬಂದಿ ಸರದಿಯಲ್ಲಿ ಸಾಲು ಗಟ್ಟಿ ನಿಂತಿದ್ದ ಮಹಿಳೆಯರಿಂದ ಮಧ್ಯಾಹ್ನ 3ರವರೆಗೂ ನೋಂದಣಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಪರಸ್ಪರ ನೂಕುನುಗ್ಗುಲು ಉಂಟಾಯಿತು.
ಇಲಾಖಾಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ 3 ಸಾವಿರ, ಚನ್ನಪಟ್ಟಣದಲ್ಲಿ 1 ಸಾವಿರ, ದಾವಣಗೆರೆಯಲ್ಲಿ 500, ಬೆಳಗಾವಿಯಲ್ಲಿ 500 ಸೀರೆಗಳು ಸೇರಿ ಒಟ್ಟು 5 ಸಾವಿರ ಸೀರೆಗಳನ್ನು 5 ಸಾವಿರ ಮಂದಿ ಮಹಿಳೆಯರಿಗೆ ವಿತರಿಸಿದೆ. ಸೀರೆ ನಿಗದಿತ ಮೊತ್ತ 14 ಸಾವಿರ ರೂ. ಇದ್ದು, ಸರಕಾರ ಅದನ್ನು 4,725 ರೂ.ಗೆ ರಿಯಾಯಿತಿಯಲ್ಲಿ ವಿತರಿಸಿದೆ.
ಸಿಎಂ ವಿತರಣೆ: ಸೀರೆ ಖರೀದಿಸುವ ಉದ್ದೇಶದಿಂದ ಮಧ್ಯಾಹ್ನ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ನಿಂತಿದ್ದ ಮಹಿಳೆಯರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೀರೆ ವಿತರಿಸಿ ಗೌರಿ ಹಬ್ಬದ ಶುಭಾಶಯ ಕೋರಿದರು. ಅಲ್ಲದೆ, ಎರಡು ಬಾರಿ ಸೀರೆ ಕೊಡುವುದಾಗಿ ಹೇಳಿ ವಿತರಿಸಲು ಆಗದಿರುವುದಕ್ಕೆ ಕ್ಷಮೆ ಕೋರಿದರು.
ಇದೇ ವೇಳೆ ರೇಷ್ಮೆ ಸಚಿವ ಸಾ.ರಾ.ಮಹೇಶ್ ಮಾತನಾಡಿ, ''ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು, ಎಷ್ಟೇ ಕಷ್ಟವಾದರೂ ಮಹಿಳೆಯರಿಗೆ ಬೇಸರ ಮಾಡದೆ ಗೌರಿ ಹಬ್ಬಕ್ಕೆ ಸೀರೆ ನೀಡಿ ಎಂದು ಹೇಳಿದ್ದರು. ಅವರ ಆಶಯದದಂತೆ ಸೀರೆ ನೀಡುತ್ತಿದ್ದೇವೆ. ಇಂದು ನೋಂದಾಯಿಸಿಕೊಂಡಿರುವ ಎಲ್ಲರಿಗೂ ಸೀರೆ ವಿತರಿಸುತ್ತೇವೆ,'' ಎಂದು ಭರವಸೆ ನೀಡಿದರು.
ಹಳೆ ಸೀರೆ, ಶೇಖರಣೆಗೊಂಡಿರುವ ಸೀರೆಯನ್ನು ವಿತರಿಸಲಾಗುತ್ತಿದೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ ಅವರು, ವರ್ಷದಲ್ಲಿ 70 ಸಾವಿರ ಸೀರೆಗಳನ್ನು ಮಾತ್ರ ಕೆಎಸ್ಐಸಿ ವಿತರಿಸಿದ್ದು, ಶುದ್ಧ ರೇಷ್ಮೆಯ ನೇಯ್ಗೆಯ ಸೀರೆಗಳನ್ನೇ ನೀಡಲಾಗುತ್ತಿದೆ,'' ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಕೆಎಸ್ಐಸಿ ಜನರಲ್ ಮ್ಯಾನೇಜರ್ ಕೃಷ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.
ಕಳೆದ ತಿಂಗಳು ಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದಾಗಿ ರೇಷ್ಮೆ ಸಚಿವ ಸಾ.ರಾ. ಮಹೇಶ್ ಘೋಷಣೆ ಮಾಡಿದ್ದರು. ಆದರೆ ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಎದುರಾದ ಕಾರಣ ವಿತರಣೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಸದ್ದಿಲ್ಲದೆ ಮಹಿಳೆಯರಿಗೆ ಸೀರೆ ವಿತರಿಸುವಂತೆ ಸರಕಾರ ಸೂಚಿಸಿದೆ. ಅದರಂತೆ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ ಮಂಗಳವಾರ ಬೆಳ್ಳಗ್ಗೆ 11 ಗಂಟೆಯಿಂದಲೆ ಸೀರೆ ವಿತರಣೆಗೆ ಫಲಾಣುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿತು. ಸೀರೆ ಅಗತ್ಯವಿರುವವರಿಂದ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನ ಚೀಟಿಗಳನ್ನು ಲಕ್ಕಿ ಡಿಪ್ ಮುಖಾಂತರ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಅಂತೆಯೆ ರಾಜ್ಯದ ಐದು ಕೇಂದ್ರಗಳಲ್ಲಿ ಸೀರೆ ಕೊಳ್ಳುವ ಮಹಿಳೆಯರಿಂದ ಆಧಾರ್ ಪಡೆದು ನೋಂದಣಿ ಕಾರ್ಯ ಆರಂಭಿಸಲಾಯಿತು.
ಮಹಿಳೆಯರ ಲಗ್ಗೆ: ಕೆಎಸ್ಐಸಿ ಇಂತಹದೊಂದು ಬಂಪರ್ ಆಫರ್ ನೀಡುತ್ತಿರುವ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಸಾವಿರಾರು ಮಹಿಳೆಯರು ಮೈಸೂರಿನ ಮೃಗಾಲಯದ ಸಮೀಪ ಇರುವ ಮೈಸೂರು ಸಿಲ್ಕ್ ಕೇಂದ್ರದತ್ತ ಧಾವಿಸಿದರು. ಹೀಗೆ ಒಬ್ಬರಿಂದೊಬ್ಬರಿಗೆ ಮಾಹಿತಿ ಹರಡುತ್ತಲೇ, ಕೇಂದ್ರದ ಎದುರಿನ ಮಹಿಳೆಯರ ಸಾಲು ಬೆಳೆಯುತ್ತ ಹೋಯಿತು. ಕೇಂದ್ರದ ಸಿಬ್ಬಂದಿ ಸರದಿಯಲ್ಲಿ ಸಾಲು ಗಟ್ಟಿ ನಿಂತಿದ್ದ ಮಹಿಳೆಯರಿಂದ ಮಧ್ಯಾಹ್ನ 3ರವರೆಗೂ ನೋಂದಣಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಪರಸ್ಪರ ನೂಕುನುಗ್ಗುಲು ಉಂಟಾಯಿತು.
ಇಲಾಖಾಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ 3 ಸಾವಿರ, ಚನ್ನಪಟ್ಟಣದಲ್ಲಿ 1 ಸಾವಿರ, ದಾವಣಗೆರೆಯಲ್ಲಿ 500, ಬೆಳಗಾವಿಯಲ್ಲಿ 500 ಸೀರೆಗಳು ಸೇರಿ ಒಟ್ಟು 5 ಸಾವಿರ ಸೀರೆಗಳನ್ನು 5 ಸಾವಿರ ಮಂದಿ ಮಹಿಳೆಯರಿಗೆ ವಿತರಿಸಿದೆ. ಸೀರೆ ನಿಗದಿತ ಮೊತ್ತ 14 ಸಾವಿರ ರೂ. ಇದ್ದು, ಸರಕಾರ ಅದನ್ನು 4,725 ರೂ.ಗೆ ರಿಯಾಯಿತಿಯಲ್ಲಿ ವಿತರಿಸಿದೆ.
ಸಿಎಂ ವಿತರಣೆ: ಸೀರೆ ಖರೀದಿಸುವ ಉದ್ದೇಶದಿಂದ ಮಧ್ಯಾಹ್ನ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ನಿಂತಿದ್ದ ಮಹಿಳೆಯರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೀರೆ ವಿತರಿಸಿ ಗೌರಿ ಹಬ್ಬದ ಶುಭಾಶಯ ಕೋರಿದರು. ಅಲ್ಲದೆ, ಎರಡು ಬಾರಿ ಸೀರೆ ಕೊಡುವುದಾಗಿ ಹೇಳಿ ವಿತರಿಸಲು ಆಗದಿರುವುದಕ್ಕೆ ಕ್ಷಮೆ ಕೋರಿದರು.
ಇದೇ ವೇಳೆ ರೇಷ್ಮೆ ಸಚಿವ ಸಾ.ರಾ.ಮಹೇಶ್ ಮಾತನಾಡಿ, ''ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು, ಎಷ್ಟೇ ಕಷ್ಟವಾದರೂ ಮಹಿಳೆಯರಿಗೆ ಬೇಸರ ಮಾಡದೆ ಗೌರಿ ಹಬ್ಬಕ್ಕೆ ಸೀರೆ ನೀಡಿ ಎಂದು ಹೇಳಿದ್ದರು. ಅವರ ಆಶಯದದಂತೆ ಸೀರೆ ನೀಡುತ್ತಿದ್ದೇವೆ. ಇಂದು ನೋಂದಾಯಿಸಿಕೊಂಡಿರುವ ಎಲ್ಲರಿಗೂ ಸೀರೆ ವಿತರಿಸುತ್ತೇವೆ,'' ಎಂದು ಭರವಸೆ ನೀಡಿದರು.
ಹಳೆ ಸೀರೆ, ಶೇಖರಣೆಗೊಂಡಿರುವ ಸೀರೆಯನ್ನು ವಿತರಿಸಲಾಗುತ್ತಿದೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ ಅವರು, ವರ್ಷದಲ್ಲಿ 70 ಸಾವಿರ ಸೀರೆಗಳನ್ನು ಮಾತ್ರ ಕೆಎಸ್ಐಸಿ ವಿತರಿಸಿದ್ದು, ಶುದ್ಧ ರೇಷ್ಮೆಯ ನೇಯ್ಗೆಯ ಸೀರೆಗಳನ್ನೇ ನೀಡಲಾಗುತ್ತಿದೆ,'' ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಕೆಎಸ್ಐಸಿ ಜನರಲ್ ಮ್ಯಾನೇಜರ್ ಕೃಷ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.