ಆ್ಯಪ್ನಗರ

ಕೆಲಸ ಮಾಡಿದ್ದೇವೆ ಕೂಲಿ ಕೊಡಿ

ನಾವು ನುಡಿದಂತೆ ನಡೆದಿದ್ದೇವೆ, ಕೆಲಸವನ್ನೂ ಮಾಡಿದ್ದೇವೆ, ನಿಮ್ಮಿಂದ ಸಾಕಷ್ಟು ಕೂಲಿಯನ್ನೂ ನಿರೀಕ್ಷಿಸುತ್ತಿದ್ದೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನು ಕೋರಿದರು.

ವಿಕ ಸುದ್ದಿಲೋಕ 1 Jun 2017, 9:00 am
ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ‘ಚುನಾವಣೆ ಪ್ರಚಾರ’
Vijaya Karnataka Web work done giv us payment
ಕೆಲಸ ಮಾಡಿದ್ದೇವೆ ಕೂಲಿ ಕೊಡಿ


ಹುಣಸೂರು/ ಪಿರಿಯಾಪಟ್ಟಣ: ನಾವು ನುಡಿದಂತೆ ನಡೆದಿದ್ದೇವೆ, ಕೆಲಸವನ್ನೂ ಮಾಡಿದ್ದೇವೆ, ನಿಮ್ಮಿಂದ ಸಾಕಷ್ಟು ಕೂಲಿಯನ್ನೂ ನಿರೀಕ್ಷಿಸುತ್ತಿದ್ದೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನು ಕೋರಿದರು.

ಹುಣಸೂರಲ್ಲಿ ಬುಧವಾರ ವಿವಿಧ ಕಾಮಗಾರಿಗಳ ಉದ್ಘಾಟಿಸಿದ ಬಳಿಕ, ತಾವು ಮಾತನಾಡುತ್ತಿರುವುದು 2018ರ ವಿಧಾನ ಸಭೆ ಚುನಾವಣೆಗೆ ಪ್ರಚಾರವೇನೋ ಎಂಬ ಧಾಟಿಯಲ್ಲಿ ಮಾತನಾಡಿದರು.

‘‘ಈ ನಿಮ್ಮ ಶಾಸಕ ಎಚ್‌.ಪಿ.ಮಂಜುನಾಥ ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾನೆ. ಆತನಿಗೂ ಕೂಲಿ ಕೊಡಿ. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾ ವಣೆಯಲ್ಲಿ, ಅಲ್ಲಿನ ಜನತೆ ನಾವು ಕೇಳಿದ ಕೂಲಿಗಿಂತ ನಿರೀಕ್ಷೆಗೂ ಮೀರಿ ಗೆಲುವು ತಂದುಕೊಟ್ಟಿದ್ದಾರೆ,’’ಎಂದು ಸಂತಸ ವ್ಯಕ್ತಪಡಿಸಿದರು.

‘‘ಕಳೆದ 35 ವರ್ಷಗಳಿಂದ ಹುಣಸೂರಿನೊಂದಿಗೆ ತಮಗೆ ಅವಿನಾಭಾವ ಸಂಬಂಧವಿದ್ದು, ನಿಮ್ಮ ಪ್ರೀತಿ ಅಭಿಮಾನಕ್ಕೆ ಮಾರು ಹೋಗಿದ್ದೇನೆ. ಎಲ್ಲ ಚುನಾವಣೆ ಯಲ್ಲೂ ಬೆಂಬಲಿಸಿದ್ದೀರಾ, ನನ್ನ ಕೋರಿಕೆಗೆ ಆಶೀರ್ವದಿ ಸಿದ್ದೀರಿ. ನಿಮ್ಮ ಋುಣ ಸಾಕಷ್ಟಿದೆ. ನನ್ನ ಮೇಲಿಟ್ಟಿರುವ ಪ್ರೀತಿ,ವಿಶ್ವಾಸ, ಅಭಿಮಾನವನ್ನು ಈ ಮಂಜುನಾಥನ ಮೇಲೂ ಇಡಿ. ಮಂಜುನಾಥ್‌ ಒಬ್ಬ ಕ್ರಿಯಾಶೀಲ ಶಾಸಕ. ಇಂಥ ಜನಪರ ಕೆಲಸ ಮಾಡುವವರು ಶಾಸಕರಾಗಿರಬೇಕು. ಇಂಥ ಜನಪ್ರತಿನಿಧಿಗೆ ನಿಮ್ಮ ಆಶೀರ್ವಾದವಿರಲಿ,’’ಎಂದು ಕೋರಿದರು.

ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್‌ ಕೂಡ ತಮ್ಮ ಭಾಷಣದಲ್ಲಿ ಸ್ಥಳೀಯ ಶಾಸಕರ ಕ್ರಿಯಾಶೀಲತೆಯನ್ನು ಪ್ರಶಂಸಿಸಿ, ಮುಂಬರುವ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮೋದಿ ಜಿಎಸ್‌ಟಿ ವಿರೋಧಿಸಿದ್ದರು: ಇದಕ್ಕೂ ಮುನ್ನ ಪಿರಿಯಾಪಟ್ಟಣ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡುವ ಮುನ್ನ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘‘ದೇಶದೆಲ್ಲೆಡೆ ಏಕರೂಪ ತೆರಿಗೆ ಪದ್ಧತಿ ಜಾರಿಗೊಳಿಸುವ ಸಂಬಂಧ ಜಿಎಸ್‌ಟಿ ಜಾರಿಗೆ ರಾಜ್ಯ ಸರಕಾರ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದೆ. ಯುಪಿಎ ಸರಕಾರದ ಅವಧಿಯಲ್ಲಿ ಜಿಎಸ್‌ಟಿ ಬಿಲ್‌ ಜಾರಿಗೊಳಿಸುವ ಸಂಬಂಧ ಪ್ರಸ್ತಾವನೆ ಸಿದ್ಧಗೊಳಿಸಲಾಗಿತ್ತು. ಇದೀಗ ಜಿಎಸ್‌ಟಿಗೆ ಹಲವಾರು ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ನೇತೃತ್ವದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ನಡೆಯಲಿದೆ. ದೇಶದ ಎಲ್ಲ ರಾಜ್ಯಗಳ ಸದಸ್ಯರು ಸಭೆಯಲ್ಲಿ ಈ ಕುರಿತು ತಮ್ಮ ನಿಲುವು ವ್ಯಕ್ತಪಡಿಸಬೇಕಿದೆ, ಈ ಹಿಂದೆ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದರು. ಪ್ರಧಾನ ಮಂತ್ರಿಯಾದ ಬಳಿಕ ಅವರೇ ಈ ಕಾನೂನನ್ನು ಜಾರಿಗೆ ತರುವ ಮೂಲಕ ಯೋಜನೆಯ ಗೌರವವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ,’’ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪ್ರತಿಕಿಯಿಸಿದ ಅವರು, ‘‘ಜನತೆಯ ಆಹಾರ ಪದ್ಧತಿ ಮೇಲೆ ಕೇಂದ್ರ ಸರಕಾರ ಆಕ್ರಮಣವೆಸಗಿದಂತಾಗಿದೆ. ಕೇಂದ್ರದ ನೂತನ ಅಧಿಸೂಚನೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ರಾಜ್ಯ ಸರಕಾರ ಈಗಾಗಲೇ 1964 ಕಾನೂನನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ರಾಜ್ಯ ಕಾನೂನು ಇಲಾಖೆಗೆ ಪರಿಶೀಲಿಸಲು ಸೂಚಿಸಲಾಗಿದೆ,’’ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ