ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನಿವಾಸವನ್ನು ನವೀಕರಿಸಲು 45 ಕೋಟಿ ರೂಪಾಯಿಗೂ ಅಧಿಕ ತೆರಿಗೆದಾರರ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ. ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಅವರದು ವಿಪರೀತ ಬೂಟಾಟಿಕೆಯ ನಡೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ. ಈ ಆರೋಪಗಳನ್ನು ನಿರಾಕರಿಸಿರುವ ಆಮ್ ಆದ್ಮಿ ಪಕ್ಷ, ಕೇಜ್ರಿವಾಲ್ ಅವರ ನಿವಾಸದ ಚಾವಣಿಯ ಭಾಗಗಳು ಕುಸಿಯುತ್ತಿದ್ದವು ಎಂದು ವಿಡಿಯೋಗಳನ್ನು ಹಂಚಿಕೊಂಡಿದೆ.
ರಾಜಕೀಯ ಪ್ರವೇಶಿಸಿದ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಪ್ರಾಮಾಣಿಕತೆ ಮತ್ತು ಸರಳತೆಯನ್ನು ಪಾಲಿಸುವುದಾಗಿ ಜನರಿಗೆ ಭರವಸೆ ನೀಡಿದ್ದರು. ಆದರೆ ಅವರು ದ್ರೋಹ ಎಸಗಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದರು. ಕೇಜ್ರಿವಾಲ್ ಅವರು 'ವಿಲಾಸಿ ಹಾಗೂ ಐಷಾರಾಮಿ ಜೀವನದ ಆಸೆ ಹೊಂದಿರುವ ಮಹಾರಾಜ' ಎಂದು ಪಾತ್ರಾ ಲೇವಡಿ ಮಾಡಿದರು.
ಈ ಕುರಿತಾದ ಸುದ್ದಿಯನ್ನು ಪ್ರಕಟಿಸದಂತೆ ಮುಚ್ಚಿ ಹಾಕಲು ಕೇಜ್ರಿವಾಲ್ ಅವರು ಮಾಧ್ಯಮಗಳಿಗೆ 20 ರಿಂದ 50 ಕೋಟಿ ರೂ ಆಫರ್ ನೀಡಿದ್ದರು. ಆದರೆ ಮಾಧ್ಯಮಗಳು ಅದನ್ನು ನಿರಾಕರಿಸಿದ್ದರು ಎಂದು ಯಾವುದೇ ದಾಖಲೆ ನೀಡದೆ ಪಾತ್ರಾ ಆರೋಪಿಸಿದರು.
ವಿಯೆಟ್ನಾಂನಿಂದ ತರಿಸಲಾದ ದುಬಾರಿ ಮಾರ್ಬಲ್, ಪೂರ್ವ ವಿನ್ಯಾಸದ ಮರದ ಗೋಡೆಗಳು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಕರ್ಟನ್ಗಳನ್ನು ಅಳವಡಿಸಿರುವ ಕೇಜ್ರಿವಾಲ್ ಅವರ ನವೀಕೃತ ನಿವಾಸದ ಚಿತ್ರಗಳನ್ನು ಅವರು ಪ್ರದರ್ಶಿಸಿದರು. ಕೇವಲ ಒಂದು ಪರದೆಗೇ 7.94 ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗುತ್ತದೆ. ಇದು ನಾಚಿಕೆಗೇಡಿನ ಮಹಾರಾಜನ ಕಥೆಯಾಗಿದೆ ಎಂದು ಪಾತ್ರಾ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಈ ಹಿಂದೆ ಭಾಷಣಗಳಲ್ಲಿ ಕೇಜ್ರಿವಾಲ್ ಅವರು, ರಾಜಕಾರಣಿಗಳು ಐಷಾರಾಮಿ ಬಂಗಲೆಗಳಲ್ಲಿ ವಾಸಿಸುವುದು ಮತ್ತು ಸಾರ್ವಜನಿಕರ ಹಣದಲ್ಲಿ ಇತರೆ ಸೌಲಭ್ಯಗಳನ್ನು ಆನಂದಿಸುವುದನ್ನು ಕಟುವಾಗಿ ಟೀಕಿಸಿದ್ದರು. ತಮಗೆ ನಾಲ್ಕು ಅಥವಾ ಐದು ಕೊಠಡಿಗಳ ಮನೆ ಇದ್ದರೆ ಸಾಕು, ಅದಕ್ಕಿಂತ ದೊಡ್ಡದು ಬೇಕಾಗಿಲ್ಲ ಎಂದು ಹೇಳಿದ್ದರು. ಆದರೆ ಅವರು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಎಲ್ಲ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಕೇಜ್ರಿವಾಲ್ ಅವರು ಸುದ್ದಿಗೋಷ್ಠಿ ನಡೆಸಿದ್ದಂತೆಯೇ, ತಮ್ಮ ಮನೆಯ ನವೀಕರಣದ ಕುರಿತಾದ ಎಲ್ಲ ಪ್ರಶ್ನೆಗಳಿಗೂ ಸುದ್ದಿಗೋಷ್ಠಿಯಲ್ಲಿ ಉತ್ತರ ಕೊಡಲಿ ಎಂದು ಪಾತ್ರಾ ಸವಾಲು ಹಾಕಿದರು.
ಆಮ್ ಆದ್ಮಿ ಪಕ್ಷದ ತಿರುಗೇಟು
"ಸ್ನೇಹಿತ ಡೊನಾಲ್ಡ್ ಟ್ರಂಪ್ (ಅಮೆರಿಕ ಅಧ್ಯಕ್ಷ) ಅವರ ಮೂರು ಗಂಟೆಯ ಭೇಟಿಗಾಗಿ 80 ಕೋಟಿ ರೂ ಖರ್ಚು ಮಾಡಲಾಗಿತ್ತು. ಗುಜರಾತ್ ಮತ್ತು ಮಧ್ಯಪ್ರದೇಶ ಸಿಎಂಗಳು ತಮಗಾಗಿ 200 ಕೋಟಿ ರೂ ಮೌಲ್ಯದ ವಿಮಾನಗಳನ್ನು ಖರೀದಿಸುತ್ತಾರೆ. ಇದರ ಬಗ್ಗೆ ಚರ್ಚೆ ನಡೆಸುವ ಧೈರ್ಯ ಯಾವ ಚಾನೆಲ್ಗೂ ಇಲ್ಲ" ಎಂದು ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಟ್ವಿಟ್ಟರ್ನಲ್ಲಿ ತಿರುಗೇಟು ನೀಡಿದ್ದಾರೆ.
"ಅರವಿಂದ್ ಕೇಜ್ರಿವಾಲ್ ಅವರಿಗೆ 1942ರಲ್ಲಿ ನಿರ್ಮಿಸಲಾದ ಬಂಗಲೆಯನ್ನು ನೀಡಲಾಗಿದೆ. ಇದು 1 ಎಕರೆಗೂ ಚಿಕ್ಕದಾಗಿದೆ. ಅದರ ಚಾವಣಿ ಮೂರು ಬಾರಿ ಕೆಳಗೆ ಬಿದ್ದಿತ್ತು. ಒಂದು ಸಲ ಅವರ ಪೋಷಕರ ಕೊಠಡಿಯ ಚಾವಣಿ ಬಿದ್ದಿತ್ತು. ಇನ್ನೊಮ್ಮೆ ಜನತಾ ದರ್ಬಾರ್ ನಡೆಸುವಲ್ಲಿ ಹಾಗೆ ಆಗಿತ್ತು. 6 ಎಕರೆಯಲ್ಲಿರುವ ಲೆಫ್ಟಿನೆಂಟ್ ಗವರ್ನರ್ ಅವರ ಬಂಗಲೆ ರಿಪೇರಿ ಮತ್ತು ಪೇಂಟಿಂಗ್ಗಾಗಿ ದಿಲ್ಲಿ ಸಿಎಂ ಬಂಗಲೆ ನವೀಕರಣಕ್ಕೆ ಆದ ವೆಚ್ಚಕ್ಕಿಂತಲೂ ಅಧಿಕ ಖರ್ಚಾಗಿದೆ" ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.
ರಾಜಕೀಯ ಪ್ರವೇಶಿಸಿದ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಪ್ರಾಮಾಣಿಕತೆ ಮತ್ತು ಸರಳತೆಯನ್ನು ಪಾಲಿಸುವುದಾಗಿ ಜನರಿಗೆ ಭರವಸೆ ನೀಡಿದ್ದರು. ಆದರೆ ಅವರು ದ್ರೋಹ ಎಸಗಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದರು. ಕೇಜ್ರಿವಾಲ್ ಅವರು 'ವಿಲಾಸಿ ಹಾಗೂ ಐಷಾರಾಮಿ ಜೀವನದ ಆಸೆ ಹೊಂದಿರುವ ಮಹಾರಾಜ' ಎಂದು ಪಾತ್ರಾ ಲೇವಡಿ ಮಾಡಿದರು.
ಈ ಕುರಿತಾದ ಸುದ್ದಿಯನ್ನು ಪ್ರಕಟಿಸದಂತೆ ಮುಚ್ಚಿ ಹಾಕಲು ಕೇಜ್ರಿವಾಲ್ ಅವರು ಮಾಧ್ಯಮಗಳಿಗೆ 20 ರಿಂದ 50 ಕೋಟಿ ರೂ ಆಫರ್ ನೀಡಿದ್ದರು. ಆದರೆ ಮಾಧ್ಯಮಗಳು ಅದನ್ನು ನಿರಾಕರಿಸಿದ್ದರು ಎಂದು ಯಾವುದೇ ದಾಖಲೆ ನೀಡದೆ ಪಾತ್ರಾ ಆರೋಪಿಸಿದರು.
ವಿಯೆಟ್ನಾಂನಿಂದ ತರಿಸಲಾದ ದುಬಾರಿ ಮಾರ್ಬಲ್, ಪೂರ್ವ ವಿನ್ಯಾಸದ ಮರದ ಗೋಡೆಗಳು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಕರ್ಟನ್ಗಳನ್ನು ಅಳವಡಿಸಿರುವ ಕೇಜ್ರಿವಾಲ್ ಅವರ ನವೀಕೃತ ನಿವಾಸದ ಚಿತ್ರಗಳನ್ನು ಅವರು ಪ್ರದರ್ಶಿಸಿದರು. ಕೇವಲ ಒಂದು ಪರದೆಗೇ 7.94 ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗುತ್ತದೆ. ಇದು ನಾಚಿಕೆಗೇಡಿನ ಮಹಾರಾಜನ ಕಥೆಯಾಗಿದೆ ಎಂದು ಪಾತ್ರಾ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಈ ಹಿಂದೆ ಭಾಷಣಗಳಲ್ಲಿ ಕೇಜ್ರಿವಾಲ್ ಅವರು, ರಾಜಕಾರಣಿಗಳು ಐಷಾರಾಮಿ ಬಂಗಲೆಗಳಲ್ಲಿ ವಾಸಿಸುವುದು ಮತ್ತು ಸಾರ್ವಜನಿಕರ ಹಣದಲ್ಲಿ ಇತರೆ ಸೌಲಭ್ಯಗಳನ್ನು ಆನಂದಿಸುವುದನ್ನು ಕಟುವಾಗಿ ಟೀಕಿಸಿದ್ದರು. ತಮಗೆ ನಾಲ್ಕು ಅಥವಾ ಐದು ಕೊಠಡಿಗಳ ಮನೆ ಇದ್ದರೆ ಸಾಕು, ಅದಕ್ಕಿಂತ ದೊಡ್ಡದು ಬೇಕಾಗಿಲ್ಲ ಎಂದು ಹೇಳಿದ್ದರು. ಆದರೆ ಅವರು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಎಲ್ಲ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಕೇಜ್ರಿವಾಲ್ ಅವರು ಸುದ್ದಿಗೋಷ್ಠಿ ನಡೆಸಿದ್ದಂತೆಯೇ, ತಮ್ಮ ಮನೆಯ ನವೀಕರಣದ ಕುರಿತಾದ ಎಲ್ಲ ಪ್ರಶ್ನೆಗಳಿಗೂ ಸುದ್ದಿಗೋಷ್ಠಿಯಲ್ಲಿ ಉತ್ತರ ಕೊಡಲಿ ಎಂದು ಪಾತ್ರಾ ಸವಾಲು ಹಾಕಿದರು.
ಆಮ್ ಆದ್ಮಿ ಪಕ್ಷದ ತಿರುಗೇಟು
"ಸ್ನೇಹಿತ ಡೊನಾಲ್ಡ್ ಟ್ರಂಪ್ (ಅಮೆರಿಕ ಅಧ್ಯಕ್ಷ) ಅವರ ಮೂರು ಗಂಟೆಯ ಭೇಟಿಗಾಗಿ 80 ಕೋಟಿ ರೂ ಖರ್ಚು ಮಾಡಲಾಗಿತ್ತು. ಗುಜರಾತ್ ಮತ್ತು ಮಧ್ಯಪ್ರದೇಶ ಸಿಎಂಗಳು ತಮಗಾಗಿ 200 ಕೋಟಿ ರೂ ಮೌಲ್ಯದ ವಿಮಾನಗಳನ್ನು ಖರೀದಿಸುತ್ತಾರೆ. ಇದರ ಬಗ್ಗೆ ಚರ್ಚೆ ನಡೆಸುವ ಧೈರ್ಯ ಯಾವ ಚಾನೆಲ್ಗೂ ಇಲ್ಲ" ಎಂದು ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಟ್ವಿಟ್ಟರ್ನಲ್ಲಿ ತಿರುಗೇಟು ನೀಡಿದ್ದಾರೆ."ಅರವಿಂದ್ ಕೇಜ್ರಿವಾಲ್ ಅವರಿಗೆ 1942ರಲ್ಲಿ ನಿರ್ಮಿಸಲಾದ ಬಂಗಲೆಯನ್ನು ನೀಡಲಾಗಿದೆ. ಇದು 1 ಎಕರೆಗೂ ಚಿಕ್ಕದಾಗಿದೆ. ಅದರ ಚಾವಣಿ ಮೂರು ಬಾರಿ ಕೆಳಗೆ ಬಿದ್ದಿತ್ತು. ಒಂದು ಸಲ ಅವರ ಪೋಷಕರ ಕೊಠಡಿಯ ಚಾವಣಿ ಬಿದ್ದಿತ್ತು. ಇನ್ನೊಮ್ಮೆ ಜನತಾ ದರ್ಬಾರ್ ನಡೆಸುವಲ್ಲಿ ಹಾಗೆ ಆಗಿತ್ತು. 6 ಎಕರೆಯಲ್ಲಿರುವ ಲೆಫ್ಟಿನೆಂಟ್ ಗವರ್ನರ್ ಅವರ ಬಂಗಲೆ ರಿಪೇರಿ ಮತ್ತು ಪೇಂಟಿಂಗ್ಗಾಗಿ ದಿಲ್ಲಿ ಸಿಎಂ ಬಂಗಲೆ ನವೀಕರಣಕ್ಕೆ ಆದ ವೆಚ್ಚಕ್ಕಿಂತಲೂ ಅಧಿಕ ಖರ್ಚಾಗಿದೆ" ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.