ಆ್ಯಪ್ನಗರ

ದಿಲ್ಲಿ ಗಲಭೆ: ಪೊಲೀಸ್‌ ಪೇದೆ ರತನ್‌ಲಾಲ್‌ ಮೇಲೆ ಉದ್ರಿಕ್ತರು ಯಾವ ರೀತಿ ಹಲ್ಲೆ ಮಾಡಿದ್ದಾರೆ ವಿಡಿಯೋ ನೋಡಿ

ಪ್ರತಿಭಟನಾಕಾರರು ಪೊಲೀಸರ ಮೇಲೆ ನಿರಂತರವಾಗಿ ಕಲ್ಲು ತೂರಾಟ ನಡೆಸಿದ್ದು, ದೊಣ್ಣೆಗಳಿಂದ ಥಳಿಸಿದ್ದಾರೆ ಎಂಬ ವರದಿಗಳು ಬಂದಿತ್ತು. ಈಗ ಈ ಹಲ್ಲೆಯ ದೃಶ್ಯಗಳ ವಿಡಿಯೋ ಈಗ ಬಿಡುಗಡೆಯಾಗಿದೆ.

Vijaya Karnataka Web 5 Mar 2020, 4:24 pm
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಪೊಲೀಸ್‌ ಪೇದೆ ರತನ್‌ಲಾಲ್‌ ಹತ್ಯೆಗೀಡಾಗಿದ್ದರು. ಅಲ್ಲದೇ ಪೊಲೀಸ್‌ ವರಿಷ್ಠಾಧಿಕಾರಿಗಳ ಮೇಲೆ ಉದ್ರಿಕ್ತ ಪ್ರತಿಭಟನಾಕಾರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಭಾರಿ ಸುದ್ದಿಯಾಗಿತ್ತು.
Vijaya Karnataka Web ಕಪಿಲ್‌ ಮಿಶ್ರಾ ಟ್ವೀಟ್‌
ಕಪಿಲ್‌ ಮಿಶ್ರಾ ಟ್ವೀಟ್‌


ಪ್ರತಿಭಟನಾಕಾರರು ಪೊಲೀಸರ ಮೇಲೆ ನಿರಂತರವಾಗಿ ಕಲ್ಲು ತೂರಾಟ ನಡೆಸಿದ್ದು, ದೊಣ್ಣೆಗಳಿಂದ ಥಳಿಸಿದ್ದಾರೆ ಎಂಬ ವರದಿಗಳು ಬಂದಿತ್ತು. ಈಗ ಈ ಹಲ್ಲೆಯ ದೃಶ್ಯಗಳ ವಿಡಿಯೋ ಬಿಡುಗಡೆಯಾಗಿದೆ.

ಗಲಭೆಕೋರರಿಂದ ಹಲ್ಲೆಗೀಡಾಗಿ ತೀವ್ರ ಗಾಯಗೊಂಡು ರತನ್‌ ಲಾಲ್‌ ಹುತಾತ್ಮರಾದರು. ಡಿಸಿಪಿ ಅಮಿತ್‌ ವರ್ಮಾ, ಎಸಿಪಿ ಅನೂಜ್‌ ಕೂಡ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದರು.


ಇವರ ಮೇಲೆ ಪ್ರತಿಭಟನಕಾರರು ಯಾವ ರೀತಿಯ ಹಲ್ಲೆ ನಡೆಸಿದ್ದಾರೆ ಎಂಬುದು ವಿಡಿಯೋ ದೃಶ್ಯಗಳಲ್ಲಿ ಬಹಿರಂಗವಾಗಿದೆ.

ಬಿಜೆಪಿಯ ಕಪಿಲ್‌ ಮಿಶ್ರಾ ಈ ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ. ಚಾಂದ್‌ಭಾಗ್‌ನಲ್ಲಿ ಪೊಲೀಸರ ಗುಂಪನ್ನು ಮಹಿಳೆಯರು ಸೇರಿದಂತೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿತು, ದೊಣ್ಣೆಗಳಿಂದ ದಾಳಿ ನಡೆಸಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ