ಆ್ಯಪ್ನಗರ

ದಿಲ್ಲಿಯಲ್ಲಿ 21 ಸಾವಿರ ಗಡಿ ದಾಟಿದ ಕೊರೊನಾ: ನಿಯಂತ್ರಣಕ್ಕೆ ಬರದ ಸೋಂಕು

ದಿಲ್ಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21 ಸಾವಿರ ಗಡಿ ದಾಟಿದ್ದು, ಕೊರೊನಾ ನಿಯಂತ್ರಣ ಕೈ ಮೀರಿದೆ. ಭಾನುವಾರ ಗರಿಷ್ಠ 1,295 ಪ್ರಕರಣ, ಸೋಮವಾರ 990 ಹಾಗೂ ಮಂಗಳವಾರ 900 ಕ್ಕೂ ಹೆಚ್ಚು ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ.

Vijaya Karnataka Web 2 Jun 2020, 5:53 pm
ಹೊಸದಿಲ್ಲಿ: ದಿಲ್ಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21 ಸಾವಿರ ಗಡಿ ದಾಟಿದ್ದು, ಕೊರೊನಾ ನಿಯಂತ್ರಣ ಕೈ ಮೀರಿದೆ. ಭಾನುವಾರ ಗರಿಷ್ಠ 1,295 ಪ್ರಕರಣ, ಸೋಮವಾರ 990 ಹಾಗೂ ಮಂಗಳವಾರ 900 ಕ್ಕೂ ಹೆಚ್ಚು ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ.
Vijaya Karnataka Web test kit


ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 12 ಜನರು ಸಾವನ್ನಪ್ಪಿದ್ದಾರೆ. ಇದೇ ಸಂದರ್ಭದಲ್ಲಿ ವರದಿಯಾಗದ 38 ಸಾವುಗಳು ಸಹ ಪತ್ತೆಯಾಗಿದ್ದು, ಒಟ್ಟು ಸಾವು 523 ಕ್ಕೆ ತಲುಪಿದೆ ಎಂದು ಸರಕಾರ ಅಂಕಿ ಅಂಶಗಳು ತಿಳಿಸಿವೆ. ಪ್ರಸ್ತುತ 11,565 ಸಕ್ರಿಯ ಪ್ರಕರಣಗಳಿವೆ ಎಂದು ದಿಲ್ಲಿ ಸರಕಾರ ವರದಿ ಬಿಡಿಗಡೆ ಮಾಡಿದೆ.

21 ಸಾವಿರ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಹೆಚ್ಚು ಹಾನಿಗೊಳಗಾದ ರಾಜ್ಯಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ಮೂರನೇ ಸ್ಥಾನ ತಲುಪಿದ್ದು ವಿಪರ್ಯಾಸ. ಕಳೆದ 24 ಗಂಟೆಗಳಲ್ಲಿ 268 ಜನರನ್ನು ಗುಣಪಡಿಸಲಾಗಿದೆ.

ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಯಶಸ್ವಿ! ಹುಬ್ಬಳ್ಳಿ ಕಿಮ್ಸ್‌ ವೈದ್ಯರ ಸಾಧನೆ!

ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಸಿಗದ ಹಿನ್ನೆಲೆ ದಿಲ್ಲಿಯಲ್ಲಿ ಕೇಂದ್ರ ಸರಕಾರ ಅತೀ ಬಿಗುವಿನ ಲಾಕ್ ಡೌನ್ ಜಾರಿಗೊಳಿಸಿದೆ ಲಾಕ್‌ ಡೌನ್ ನಿಯಮಗಳನ್ನು ಸರಳಗೊಳಿಸುವಂತೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರವನ್ನು ಒತ್ತಾಯಿಸುತ್ತಿದ್ದರು. ಇದರ ಭಾಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಅಂಗಡಿಗಳು ಮತ್ತು ಸಲೂನ್ ತೆರೆಯುವುದಾಗಿ ಘೋಷಿಸಿದ್ದಾರೆ. ಮಾಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ದೇವಸ್ಥಾನಗಳನ್ನು ತೆರೆದಿಲ್ಲ.‌

ಚಂಡಮಾರುತ ಮುನ್ನೆಚ್ಚರಿಕೆ: ಕೊಡಗು ಜಿಲ್ಲೆಗೆ 25 ಮಂದಿಯ ಎನ್‌ಡಿಆರ್‌ಎಫ್‌ ತುಕಡಿ ಆಗಮನ

ಕೊರೊನಾ ಪ್ರಕರಣಗಳ ಆತಂಕದ ಮಧ್ಯೆ ದಿಲ್ಲಿ ಸರಕಾರ ತನ್ನ ಗಡಿಯನ್ನು ಜೂನ್ 8 ರ ವರೆಗೆ ಸೀಲ್ ಡೌನ್ ಗೊಳಿಸಿದೆ. ಅಗತ್ಯ ಸೇವೆಗಳನ್ನು ಒದಗಿಸುವ ಮತ್ತು ಸರ್ಕಾರದಿಂದ ಅನುಮೋದಿತ ಎಲೆಕ್ಟ್ರಾನಿಕ್ ಪಾಸ್ ಹೊಂದಿರುವ ಜನರಿಗೆ ಮಾತ್ರ ದಿಲ್ಲಿ ಪ್ರವೇಶಿಸಲು ಅವಕಾಶವ ನೀಡಿದೆ. ಸರಕಾರಿ ನೌಕರರಿಗೆ ಯಾವುದೇ ಅನುಮತಿ ಅವಶ್ಯಕತೆ ಇರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ