ಆ್ಯಪ್ನಗರ

ಕೊರೊನಾ 'ಕರ್ಫ್ಯೂ': ದಿಲ್ಲಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ!

ಸಿಎಂ ಅರವಿಂದ ಕೇಂಜ್ರಿವಾಲ್‌ ಸರಕಾರದ ನೂತನ ಘೋಷಣೆಯಿಂದ ಶಹೀನ್‌ ಬಾಗ್‌ನಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಮೇಲೆ ನೇರ ಪರಿಣಾಮ ಬೀರಲಿದೆ. ನೂತನ ಘೋಷಣೆ ಪ್ರತಿಭಟನಾಕಾರರಿಗೂ ಅನ್ವಯಿಸಲಿದೆ.

Vijaya Karnataka Web 17 Mar 2020, 8:52 am
ಹೊಸದಿಲ್ಲಿ: ಕೊರೊನಾ ಹಬ್ಬುವಿಕೆ ಆತಂಕದ ಹಿನ್ನೆಲೆಯಲ್ಲಿ ಧಾರ್ಮಿಕ, ಕೌಟುಂಬಿಕ ಅಥವಾ ಸಾಮಾಜಿಕವಾದ ಯಾವುದೇ ಕಾರ್ಯಕ್ರಮಗಳಿದ್ದರೂ ಸರಿಯೇ 50ಕ್ಕೂ ಅಧಿಕ ಮಂದಿ ಸೇರುವಂತಿಲ್ಲ ಎಂದು ದಿಲ್ಲಿ ಸರಕಾರ ಘೋಷಣೆ ಮಾಡಿದೆ.
Vijaya Karnataka Web Arvind Kejriwal
ಸಾಂದರ್ಭಿಕ ಚಿತ್ರ


ಸಿಎಎ, ಎನ್‌ಆರ್‌ಸಿ ವಿರೋಧಿಸಿ ಹಲವು ದಿನಗಳಿಂದ ಶಹೀನ್‌ ಬಾಗ್‌ನಲ್ಲಿ ನಡೆಯುತ್ತಿರುವ ಬೃಹತ್‌ ಪ್ರತಿಭಟನೆಗೂ ನಿರ್ಬಂಧ ಅನ್ವಯಿಸಲಿದೆ ಎಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ದಿಲ್ಲಿಯ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸಿಎಂ ಕೇಜ್ರಿವಾಲ್‌ ಈ ಘೋಷಣೆ ಮಾಡಿದ್ದಾರೆ.

ಇನ್ನೂ ಶಾಪಿಂಗ್‌ ಮಾಲ್‌ಗಳನ್ನು ಬಂದ್‌ ಮಾಡುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಕೂಡ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಂಚತಾರಾ ಹೋಟೆಲ್‌ಗಳಲ್ಲಿ ನಿಗಾ ಕೇಂದ್ರ: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ನಿಲ್ದಾಣದ ಬಳಿಯ ಮೂರು ಪಂಚಾತಾರಾ ಹೋಟೆಲ್‌ಗಳಲ್ಲಿ ಸರಕಾರದ ಸೂಚನೆ ಮೇರೆಗೆ ಪಾವತಿ ಸಹಿತ ನಿಗಾ ಕೊಠಡಿಗಳನ್ನು ಶಂಕಿತ ಸೋಂಕಿತರಿಗಾಗಿ ಸ್ಥಾಪಿಸಲಾಗಿದೆ. ಮೂರು ಹೋಟೆಲ್‌ಗಳಿಂದ ಒಟ್ಟು 182 ಕೊಠಡಿಗಳನ್ನು ವಿದೇಶಕ್ಕೆ ಪ್ರಯಾಣಿಸುವವರಿಗಾಗಿ ಮೀಸಲಿರಿಸಲಾಗಿದೆ. ಅವರು ಶುಲ್ಕ ಪಾವತಿಸಿ ನಿಗಾ ಕೊಠಡಿಯಲ್ಲಿ ತಂಗಬಹುದಾಗಿದೆ.

ಕೊರೊನಾ ಅಪ್ಡೇಟ್‌: ವಿಶ್ವಾದ್ಯಂತ 6 ಸಾವಿರ ದಾಟಿದ ಸಾವಿನ ಸಂಖ್ಯೆ, ರಾಷ್ಟ್ರದಲ್ಲಿ 119 ಸೋಂಕಿತರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ