ಆ್ಯಪ್ನಗರ

ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್ ವಿಚಾರಣೆಗೆ ಅಸ್ತು ಎಂದ ದೆಹಲಿ ಸರ್ಕಾರ!

ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಉಮರ್ ಖಾಲಿದ್ ವಿರುದ್ಧ ಕಾನೂನು ಕ್ರಮ ಜರುಗಿಸಲು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಹಸಿರು ನಿಶಾನೆ ತೋರಿದೆ. ಉಮರ್ ಖಾಲಿದ್ ವಿರುದ್ಧದ ನ್ಯಾಯಾಂಗ ವಿಚರಣೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

Vijaya Karnataka Web 6 Nov 2020, 10:00 pm
ಹೊಸದಿಲ್ಲಿ: ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಉಮರ್ ಖಾಲಿದ್ ವಿರುದ್ಧ ಕಾನೂನು ಕ್ರಮ ಜರುಗಿಸಲು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಹಸಿರು ನಿಶಾನೆ ತೋರಿದೆ.
Vijaya Karnataka Web Umar Khalid
ಸಂಗ್ರಹ ಚಿತ್ರ


ಈ ವರ್ಷದ ಫೆಬ್ರವರಿಯಲ್ಲಿ ಭುಗಿಲೆದ್ದ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ, ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಮಾಜಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು ಬಂಧಿಸಿದ್ದರು.

ದೆಹಲಿ ಗಲಭೆ: ಅಕ್ಟೋಬರ್ 22ರವರೆಗೂ ಉಮರ್ ಖಾಲಿದ್ ಗೆ ನ್ಯಾಯಾಂಗ ಬಂಧನ!

ಇದೀಗ ಉಮರ್ ಖಾಲಿದ್ ವಿರುದ್ಧದ ವಿಚರಣೆಗೆ ಆಪ್ ಸರ್ಕಾರ ಸೈ ಎಂದಿದ್ದು, ಉಮರ್ ಖಾಲಿದ್ ವಿರುದ್ಧದ ನ್ಯಾಯಾಂಗ ವಿಚರಣೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

ಜಾಮಿಯಾ ವಿದ್ಯಾರ್ಥಿ ಮತ್ತು ಆರ್‌ಜೆಡಿ ಯುವ ಘಟಕದ ಅಧ್ಯಕ್ಷ ಮೀರನ್ ಹೈದರ್, ಜೆಸಿಸಿ ಮಾಧ್ಯಮ ಸಂಯೋಜಕ ಸಫೂರಾ ಜರ್ಗರ್ ಮತ್ತು ಈಶಾನ್ಯ ದೆಹಲಿಯ ಭಜನ್‌ಪುರದ ನಿವಾಸಿ ಡ್ಯಾನಿಶ್ ಅವರೊಂದಿಗೆ ಖಾಲೀದ್ ವಿರುದ್ಧ ಈಗಾಗಲೇ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೆಹಲಿ ಗಲಭೆ ಪ್ರಕರಣ: ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನ!

ಇಷ್ಟೇ ಅಲ್ಲದೇ ಕಳೇದ ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿದ್ದಾಗ, ಬೀದಿಗಳಿದು ಹೋರಾಟ ಮಾಡುವಂತೆ ಜನರನ್ನು ಪ್ರಚೋದಿಸಿರುವ ಆರೋಪವೂ ಉಮರ್ ಖಾಲಿದ್ ಮೇಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ