ಹೊಸ ದಿಲ್ಲಿ: 2020ರಲ್ಲಿ ದಿಲ್ಲಿಯಲ್ಲಿ ನಡೆದ ದಂಗೆಯು ಪೂರ್ವ ನಿಯೋಜಿತ ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿಧ್ವಂಸಕ ಕೃತ್ಯ ಎಸಗಬೇಕು ಹಾಗೂ ಹಾನಿ ಉಂಟು ಮಾಡಬೇಕು ಎಂಬ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ. ಯಾವುದೇ ಒಂದು ಘಟನೆಯಿಂದ ಅಚಾನಕ್ ಆಗಿ ಸಂಭವಿಸಿದ ಕೃತ್ಯ ಇದಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಪ್ರಕರಣದ ಓರ್ವ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಫೆಬ್ರುವರಿ 2020 ರಂದು ನಡೆದ ಗಲಭೆಗೆ ಸಂಚು ರೂಪಿಸಲಾಗಿತ್ತು. ಪ್ಲಾನ್ ಮಾಡಿ ಅದನ್ನು ಜಾರಿಗೆ ತರಲಾಗಿತ್ತು. ಯಾವುದೇ ಒಂದು ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ತತ್ ಕ್ಷಣಕ್ಕೆ ಸೃಷ್ಟಿಯಾದ ಗಲಭೆ ಇದಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ. 3 ದಿನಗಳ ಕಾಲ ನಡೆದ ಗಲಭೆಯಲ್ಲಿ 50 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದನ್ನು ಪರಾಮರ್ಶೆ ನಡೆಸಿತು.
ನ್ಯಾಯಾಲಯಕ್ಕೆ ಲಭ್ಯವಾಗಿರುವ ವಿಡಿಯೋ ದೃಶ್ಯಾವಳಿಗಳನ್ನು ಗಮನಿಸಿದರೆ ಪ್ರತಿಭಟನಾಕಾರರು ದಂಗೆ, ಗಲಭೆ ನಡೆಸುವ ಉದ್ದೇಶದಿಂದಲೇ ದುಷ್ಕೃತ್ಯ ಎಸಗಿದ್ದು ಕಂಡು ಬರುತ್ತಿದೆ. ಸಾಮಾನ್ಯ ಜನಜೀವನ ಹಾಗೂ ಸರ್ಕಾರದ ಕಾರ್ಯನಿರ್ವಹಣೆ ಅಡ್ಡಿ ಉಂಟು ಮಾಡುವ ಯತ್ನ ಇದಾಗಿದೆ ಎಂದು ಹೇಳಿದೆ.
ಸಿಸಿಟಿವಿ ಕ್ಯಾಮರಾಗಳನ್ನು ವ್ಯವಸ್ಥಿತವಾಗಿ ಹಾನಿ ಮಾಡಲಾಗಿದೆ. ಹಲವು ಸಿಸಿಟಿವಿ ಕ್ಯಾಮರಾಗಳ ಸಂಪರ್ಕ ಕಡಿತ ಮಾಡಲಾಗಿದೆ. ಇದೆಲ್ಲವೂ ಪೂರ್ವ ನಿಯೋಜಿತ ಸಂಚಿನ ಭಾಗ. ಕಾನೂನು ಸುವ್ಯವಸ್ಥೆ ಹದಗೆಡಿಸಲು ಮಾಡಿರುವ ಯತ್ನವಿದು ಎಂದು ಜಸ್ಟೀಸ್ ಸುಬ್ರಹ್ಮಣಿಯಂ ಪ್ರಸಾದ್ ಅವರು ಹೇಳಿದ್ದಾರೆ.
ದಂಗೆಕೋರರು ತಮ್ಮ ಕೈನಲ್ಲಿ ದೊಣ್ಣೆ, ಕೋಲು ಹಾಗೂ ಬ್ಯಾಟ್ಗಳನ್ನು ಹಿಡಿದು ಬಂದಿದ್ದರು. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಈ ಸಂದರ್ಭದಲ್ಲಿ ನಿಸ್ಸಹಾಯಕರಾದರು ಎಂದು ಕೋರ್ಟ್ ಹೇಳಿದೆ.
ದಿಲ್ಲಿ ದಂಗೆಯ ಸಂಚುಕೋರ ಮೊಹಮ್ಮದ್ ಇಬ್ರಾಹಿಂಗೆ ಜಾಮೀನು ನಿರಾಕರಿಸುವ ವೇಳೆ ಕಾರಣಗಳನ್ನು ವಿವರಿಸಿದ ಜಸ್ಟೀಸ್ ಪ್ರಸಾದ್ ಅವರು ಸವಿಸ್ತಾರವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಕಳೆದ ವರ್ಷ ಡಿಸೆಂಬರ್ನಲ್ಲಿ ಮೊಹಮ್ಮದ್ ಇಬ್ರಾಹಿಂ ಬಂಧನವಾಗಿತ್ತು. ಹಾಗೆ ನೋಡಿದ್ರೆ, ಈ ಪ್ರಕರಣದ ಮತ್ತೊಬ್ಬ ಆರೋಪಿ ಮೊಹಮ್ಮದ್ ಸಲೀಂ ಖಾನ್ಗೆ ಈಗಾಗಲೇ ಜಾಮೀನು ಸಿಕ್ಕಿದೆ.
ವೈಯಕ್ತಿಕ ಸ್ವಾತಂತ್ರ್ಯವನ್ನು ಬಳಸಿಕೊಂಡು ಯಾರಿಗಾದ್ರೂ ಬೆದರಿಕೆ ಹಾಕೋದು, ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವೋದು ಸಮ್ಮತವಲ್ಲ ಎಂದಿರುವ ನ್ಯಾಯಪೀಠ, ಆರೋಪಿ ಮೊಹಮ್ಮದ್ ಇಬ್ರಾಹಿಂ ಕತ್ತಿಯನ್ನು ಹಿಡಿದು ಜನರನ್ನು ಹೆದರಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಹೇಳಿದೆ.
ದಿಲ್ಲಿ ದಂಗೆ ನಡೆದ ವೇಳೆ ಫೆಬ್ರುವರಿ 24ರಂದು ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಅವರನ್ನು ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಇಬ್ರಾಹಿಂ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಗಲಭೆಕೋರರನ್ನು ಪ್ರಚೋದಿಸಿದ ಎಂಬ ಆರೋಪವಿದೆ. ಆದ್ರೆ, ಆರೋಪಿ ಮೊಹಮ್ಮದ್ ಇಬ್ರಾಹಿಂ ಪರ ವಕೀಲರು ಹೆಡ್ಕಾನ್ಸ್ಟೇಬಲ್ ನಿಧನಕ್ಕೆ ಕತ್ತಿಯಿಂದ ನಡೆದ ದಾಳಿಯೇ ಕಾರಣ ಎಂದು ವಾದಿಸಿದರು.
ಇದೇ ವೇಳೆ ಆರೋಪಿ ಮೊಹಮ್ಮದ್ ಇಬ್ರಾಹಿಂ ಕೂಡಾ ತಾನು ತನ್ನ ಕುಟುಂಬದ ರಕ್ಷಣೆಗಾಗಿ ಕತ್ತಿ ಹಿಡಿದಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದಾನೆ.
ಆದ್ರೆ, ಆರೋಪಿ ಮೊಹಮ್ಮದ್ ಇಬ್ರಾಹಿಂನ ಸ್ಪಷ್ಟೀಕರಣವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಸಾಕ್ಷಿಗಳು ಆರೋಪಿಗೆ ಪೂರಕವಾಗಿಲ್ಲ, ಹೀಗಾಗಿ, ಆತನ ನ್ಯಾಯಾಂಗ ಬಂಧವನ್ನು ವಿಸ್ತರಿಸಬೇಕಾಗಿದೆ ಎಂದಿರುವ ನ್ಯಾಯಪೀಠ, ಆತ ತನ್ನಲ್ಲಿ ಹೊಂದಿದ್ದ ಆಯುಧದಿಂದ ಪ್ರಾಣಿ ಹಾನಿ ಆಗುವ ಸಾಧ್ಯತೆ ಇತ್ತು ಎಂದು ಹೇಳಿದೆ.
ಘಟನೆಯ ಹಿನ್ನೆಲೆ: ಸಿಎಎ ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಈಶಾನ್ಯ ದಿಲ್ಲಿ ಚಾಂದ್ ಭಾಗ್ ಪ್ರದೇಶದಲ್ಲಿ ಗುಂಪೊಂದು ಪೊಲೀಸರ ಮೇಲೆ ದಾಳಿ ನಡೆಸಿತ್ತು. ಈ ವೇಳೆ, ಗಲಭೆ ತಾರಕಕ್ಕೇರಿ ರತನ್ ಸಿಂಗ್ ಸಾವನ್ನಪ್ಪಿದ್ದರು. ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಗಾಯಗೊಂಡಿದ್ದರು.
ನ್ಯಾಯಾಲಯಕ್ಕೆ ಲಭ್ಯವಾಗಿರುವ ವಿಡಿಯೋ ದೃಶ್ಯಾವಳಿಗಳನ್ನು ಗಮನಿಸಿದರೆ ಪ್ರತಿಭಟನಾಕಾರರು ದಂಗೆ, ಗಲಭೆ ನಡೆಸುವ ಉದ್ದೇಶದಿಂದಲೇ ದುಷ್ಕೃತ್ಯ ಎಸಗಿದ್ದು ಕಂಡು ಬರುತ್ತಿದೆ. ಸಾಮಾನ್ಯ ಜನಜೀವನ ಹಾಗೂ ಸರ್ಕಾರದ ಕಾರ್ಯನಿರ್ವಹಣೆ ಅಡ್ಡಿ ಉಂಟು ಮಾಡುವ ಯತ್ನ ಇದಾಗಿದೆ ಎಂದು ಹೇಳಿದೆ.
ಸಿಸಿಟಿವಿ ಕ್ಯಾಮರಾಗಳನ್ನು ವ್ಯವಸ್ಥಿತವಾಗಿ ಹಾನಿ ಮಾಡಲಾಗಿದೆ. ಹಲವು ಸಿಸಿಟಿವಿ ಕ್ಯಾಮರಾಗಳ ಸಂಪರ್ಕ ಕಡಿತ ಮಾಡಲಾಗಿದೆ. ಇದೆಲ್ಲವೂ ಪೂರ್ವ ನಿಯೋಜಿತ ಸಂಚಿನ ಭಾಗ. ಕಾನೂನು ಸುವ್ಯವಸ್ಥೆ ಹದಗೆಡಿಸಲು ಮಾಡಿರುವ ಯತ್ನವಿದು ಎಂದು ಜಸ್ಟೀಸ್ ಸುಬ್ರಹ್ಮಣಿಯಂ ಪ್ರಸಾದ್ ಅವರು ಹೇಳಿದ್ದಾರೆ.
ದಂಗೆಕೋರರು ತಮ್ಮ ಕೈನಲ್ಲಿ ದೊಣ್ಣೆ, ಕೋಲು ಹಾಗೂ ಬ್ಯಾಟ್ಗಳನ್ನು ಹಿಡಿದು ಬಂದಿದ್ದರು. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಈ ಸಂದರ್ಭದಲ್ಲಿ ನಿಸ್ಸಹಾಯಕರಾದರು ಎಂದು ಕೋರ್ಟ್ ಹೇಳಿದೆ.
ದಿಲ್ಲಿ ದಂಗೆಯ ಸಂಚುಕೋರ ಮೊಹಮ್ಮದ್ ಇಬ್ರಾಹಿಂಗೆ ಜಾಮೀನು ನಿರಾಕರಿಸುವ ವೇಳೆ ಕಾರಣಗಳನ್ನು ವಿವರಿಸಿದ ಜಸ್ಟೀಸ್ ಪ್ರಸಾದ್ ಅವರು ಸವಿಸ್ತಾರವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಕಳೆದ ವರ್ಷ ಡಿಸೆಂಬರ್ನಲ್ಲಿ ಮೊಹಮ್ಮದ್ ಇಬ್ರಾಹಿಂ ಬಂಧನವಾಗಿತ್ತು. ಹಾಗೆ ನೋಡಿದ್ರೆ, ಈ ಪ್ರಕರಣದ ಮತ್ತೊಬ್ಬ ಆರೋಪಿ ಮೊಹಮ್ಮದ್ ಸಲೀಂ ಖಾನ್ಗೆ ಈಗಾಗಲೇ ಜಾಮೀನು ಸಿಕ್ಕಿದೆ.
ವೈಯಕ್ತಿಕ ಸ್ವಾತಂತ್ರ್ಯವನ್ನು ಬಳಸಿಕೊಂಡು ಯಾರಿಗಾದ್ರೂ ಬೆದರಿಕೆ ಹಾಕೋದು, ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವೋದು ಸಮ್ಮತವಲ್ಲ ಎಂದಿರುವ ನ್ಯಾಯಪೀಠ, ಆರೋಪಿ ಮೊಹಮ್ಮದ್ ಇಬ್ರಾಹಿಂ ಕತ್ತಿಯನ್ನು ಹಿಡಿದು ಜನರನ್ನು ಹೆದರಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಹೇಳಿದೆ.
ದಿಲ್ಲಿ ದಂಗೆ ನಡೆದ ವೇಳೆ ಫೆಬ್ರುವರಿ 24ರಂದು ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಅವರನ್ನು ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಇಬ್ರಾಹಿಂ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಗಲಭೆಕೋರರನ್ನು ಪ್ರಚೋದಿಸಿದ ಎಂಬ ಆರೋಪವಿದೆ. ಆದ್ರೆ, ಆರೋಪಿ ಮೊಹಮ್ಮದ್ ಇಬ್ರಾಹಿಂ ಪರ ವಕೀಲರು ಹೆಡ್ಕಾನ್ಸ್ಟೇಬಲ್ ನಿಧನಕ್ಕೆ ಕತ್ತಿಯಿಂದ ನಡೆದ ದಾಳಿಯೇ ಕಾರಣ ಎಂದು ವಾದಿಸಿದರು.
ಇದೇ ವೇಳೆ ಆರೋಪಿ ಮೊಹಮ್ಮದ್ ಇಬ್ರಾಹಿಂ ಕೂಡಾ ತಾನು ತನ್ನ ಕುಟುಂಬದ ರಕ್ಷಣೆಗಾಗಿ ಕತ್ತಿ ಹಿಡಿದಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದಾನೆ.
ಆದ್ರೆ, ಆರೋಪಿ ಮೊಹಮ್ಮದ್ ಇಬ್ರಾಹಿಂನ ಸ್ಪಷ್ಟೀಕರಣವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಸಾಕ್ಷಿಗಳು ಆರೋಪಿಗೆ ಪೂರಕವಾಗಿಲ್ಲ, ಹೀಗಾಗಿ, ಆತನ ನ್ಯಾಯಾಂಗ ಬಂಧವನ್ನು ವಿಸ್ತರಿಸಬೇಕಾಗಿದೆ ಎಂದಿರುವ ನ್ಯಾಯಪೀಠ, ಆತ ತನ್ನಲ್ಲಿ ಹೊಂದಿದ್ದ ಆಯುಧದಿಂದ ಪ್ರಾಣಿ ಹಾನಿ ಆಗುವ ಸಾಧ್ಯತೆ ಇತ್ತು ಎಂದು ಹೇಳಿದೆ.
ಘಟನೆಯ ಹಿನ್ನೆಲೆ: ಸಿಎಎ ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಈಶಾನ್ಯ ದಿಲ್ಲಿ ಚಾಂದ್ ಭಾಗ್ ಪ್ರದೇಶದಲ್ಲಿ ಗುಂಪೊಂದು ಪೊಲೀಸರ ಮೇಲೆ ದಾಳಿ ನಡೆಸಿತ್ತು. ಈ ವೇಳೆ, ಗಲಭೆ ತಾರಕಕ್ಕೇರಿ ರತನ್ ಸಿಂಗ್ ಸಾವನ್ನಪ್ಪಿದ್ದರು. ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಗಾಯಗೊಂಡಿದ್ದರು.