ಆ್ಯಪ್ನಗರ

ಆಪ್ ಶಾಸಕನ ಕಿರುಕುಳ ಆರೋಪ: ದೆಹಲಿಯ ಡಾಕ್ಟರ್ ನೇಣಿಗೆ ಶರಣು!

ಆಪ್ ಶಾಸಕನ ಕಿರುಕುಳದಿಂದ ಬೇಸತ್ತು ದೆಹಲಿಯ ವೈದ್ಯನೋರ್ವ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ನೀರು ಸರಬರಾಜು ವ್ಯವಹಾರದಲ್ಲಿ ಕಮಿಷನ್‌ ಬೇಕೆಂದು ಆಪ್ ಶಾಸಕ ಪ್ರಕಾಶ್ ಜರ್ವಾಲ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ವೈದ್ಯ ರಾಜೇಂದ್ರ ಸಿಂಗ್ ತಮ್ಮ ಡೆತ್ ನೋಟ್‌ನಲ್ಲಿ ಆಪಾದಿಸಿದ್ದಾರೆ.

Vijaya Karnataka Web 19 Apr 2020, 1:04 pm
ನವದೆಹಲಿ: ದೆಹಲಿಯಲ್ಲಿ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಆಪ್ ಶಾಸಕನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web suicide.
ಸಾಂದರ್ಭಿಕ ಚಿತ್ರ


ಇಲ್ಲಿನ ನೆಬ್ ಸರಾಯಿ ಪ್ರದೇಶದ ವೈದ್ಯ ರಾಜೇಂದ್ರ ಸಿಂಗ್ ನೀರು ಸರಬರಾಜು ಟ್ಯಾಂಕರ್ ವ್ಯವಹಾರವನ್ನೂ ನಡೆಸುತ್ತಿದ್ದು, ಈ ವ್ಯವಹಾರದಲ್ಲಿ ತಮಗೆ ಕಮಿಷನ್ ಬೇಕೆಂದು ಆಪ್ ಶಾಸಕ ಪ್ರಕಾಶ್ ಜರ್ವಾಲ್ ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಮುಂಬಯಿ: ಕೊರೊನಾ ಸೋಂಕಿತ 29 ವರ್ಷದ ಮಹಿಳೆ ಆತ್ಮಹತ್ಯೆ

ಈ ಕುರಿತು ತಮ್ಮ ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿರುವ ರಾಜೇಂದ್ರ ಸಿಂಗ್, ನೀರು ಸರಬರಾಜು ವ್ಯವಹಾರದಲ್ಲಿ ಗಳಿಸಿದ ಹಣದಲ್ಲಿ ತಮಗೆ ಕಮಿಷನ್ ಬೇಕೆಂದು ಆಪ್ ಶಾಸಕ ಪ್ರಕಾಶ್ ಜರ್ವಾಲ್ ಹಾಗೂ ಅವರ ಸಹಾಯಕ ಕಪಿಲ್ ನಾಗರ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆಪಾದಿಸಿದ್ದಾರೆ.

ದೆಹಲಿಯ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿರುವ ರಾಜೇಂದ್ರ ಸಿಂಗ್ ಅವರ ಡೈರಿಯಲ್ಲೂ ಶಾಸಕ ಪ್ರಕಾಶ್ ಜರ್ವಾಲ್ ಹಾಗೂ ಕಪಿಲ್ ನಾಗರ್ ಅವರ ನಿರಂತರ ಕಿರುಕುಳದ ಕುರಿತು ಹಲವು ಬಾರಿ ಉಲ್ಲೇಖವಿರುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಭೀತಿಯಿಂದ ಆಂಧ್ರದಲ್ಲಿ ಬೆಂಕಿ ಹಚ್ಚಿಕೊಂಡು ದಂಪತಿ ಆತ್ಮಹತ್ಯೆ

ಸದ್ಯ ರಾಜೇಂದ್ರ ಸಿಂಗ್ ಅವರ ಡೆತ್ ನೋಟ್ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ