ಆ್ಯಪ್ನಗರ

ಟ್ರ್ಯಾಕ್ಟರ್ ಪರೇಡ್ ದಾರಿ ತಪ್ಪೋದು ಬೇಡ, ವದಂತಿಗೆ ಕಿವಿಗೊಡಬೇಡಿ: ರೈತರಿಗೆ ಯೋಗೇಂದ್ರ ಯಾದವ್ ಮನವಿ

'ರೈತರು ತಮ್ಮ ಪ್ರತಿಭಟನೆಯ ಹಾದಿ ತಪ್ಪಿಸಲು ಯತ್ನಿಸುವವರಿಂದ ದೂರ ಇರಬೇಕು. ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿ ಕೊಡಬೇಡಿ, ರೈತರ ಹೋರಾಟವನ್ನು ಹಾಳುಗಡವುವ ಯಾವುದೇ ಪ್ರಯತ್ನಕ್ಕೂ ಕೈಹಾಕಬೇಡಿ' - ಯೋಗೇಂದ್ರ ಯಾದವ್

Vijaya Karnataka Web 26 Jan 2021, 5:48 pm

ಹೈಲೈಟ್ಸ್‌:

  • ಪ್ರತಿಭಟನೆ ಹಾದಿ ತಪ್ಪಲು ಬಿಡಬೇಡಿ ಎಂದು ಯಾದವ್ ಕರೆ
  • ಟ್ರ್ಯಾಕ್ಟರ್‌ ಪರೇಡ್‌ ನಡೆಸುವ ನಿಗದಿತ ಮಾರ್ಗ ತಪ್ಪಿಸಿಕೊಳ್ಳಬೇಡಿ
  • ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಕರೆ ನೀಡಿದ ಯೋಗೇಂದ್ರ ಯಾದವ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸ ದಿಲ್ಲಿ: ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿರುವ ರೈತರು ಯಾವುದೇ ಕಾರಣಕ್ಕೂ ನಿಗದಿತ ಮಾರ್ಗವನ್ನು ಬಿಟ್ಟು ಬೇರೆಲ್ಲೂ ಹೋಗಬೇಡಿ ಎಂದು ರೈತ ಮುಖಂಡ ಯೋಗೇಂದ್ರ ಯಾದವ್ ರೈತರಿಗೆ ಕರೆ ನೀಡಿದ್ದಾರೆ. ಜೊತೆಯಲ್ಲೇ ಪ್ರತಿಭಟನೆ ಹಾದಿ ತಪ್ಪಲು ಬಿಡಬೇಡಿ ಎಂದೂ ಯಾದವ್ ಮನವಿ ಮಾಡಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ರೈತರು ದಿಲ್ಲಿಯ ನಾಲ್ಕೂ ಗಡಿಗಳಲ್ಲಿ ಧರಣಿ ಕುಳಿತಿದ್ದರು. ಇದೀಗ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್‌ ನಡೆಸಲು ಮುಂದಾಗುವ ವೇಳೆ ಪೊಲೀಸರ ಜೊತೆ ಘರ್ಷಣೆ ನಡೆದಿದೆ. ಹಲವೆಡೆ ಬ್ಯಾರಿಕೇಡ್‌ಗಳನ್ನು ಭೇದಿಸಿ ದಿಲ್ಲಿ ನಗರದೊಳಗೆ ನುಗ್ಗಿದ್ದಾರೆ.

ಕೆಂಪು ಕೋಟೆ ಬಳಿ ಕಲ್ಲು ತೂರಾಟ: ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರ ಹರಸಾಹಸ!
ರೈತರ ಹಿಂಸಾತ್ಮಕ ಪ್ರತಿಭಟನೆಯಿಂದ ರೈತನ ಜೀವಬಲಿ ಕೂಡಾ ಆಗಿದೆ. ಇದೀಗ ರೈತರು ತಮ್ಮ ಟ್ರ್ಯಾಕ್ಟರ್‌ಗಳ ಸಮೇತ ಕೆಂಪು ಕೋಟೆಯನ್ನೇನೋ ತಲುಪಿದ್ದಾರೆ. ಆದ್ರೆ, ರೈತರು ತಮ್ಮ ಪ್ರತಿಭಟನೆಯ ಹಾದಿ ತಪ್ಪಿಸಲು ಯತ್ನಿಸುವವರಿಂದ ದೂರ ಇರಬೇಕು ಎಂದು ಯೋಗೇಂದ್ರ ಯಾದವ್ ಕರೆ ನೀಡಿದ್ದಾರೆ.

ದಿಲ್ಲಿ ರೈತ ದಂಗೆಯಲ್ಲಿ ಜೀವ ಬಲಿ: ರಸ್ತೆ ಬದಿಯಲ್ಲಿ ಹೆಣವಾಗಿ ಸಿಕ್ಕ ಅನ್ನದಾತ..
ಸಂಯುಕ್ತ ಕಿಸಾನ್ ಮೋರ್ಚಾ ಪರವಾಗಿ ರೈತರಿಗೆ ಮನವಿ ಮಾಡಿಕೊಂಡಿರುವ ಯೋಗೇಂದ್ರ ಯಾದವ್, ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿ ಕೊಡಬೇಡಿ ಎಂದೂ ಮನವಿ ಮಾಡಿಕೊಂಡಿದ್ದಾರೆ. ರೈತರ ಹೋರಾಟವನ್ನು ಹಾಳುಗಡವುವ ಯಾವುದೇ ಪ್ರಯತ್ನಕ್ಕೂ ಕೈಹಾಕಬೇಡಿ ಎಂದು ಯಾದವ್ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ