ಆ್ಯಪ್ನಗರ

ಖಾತೆಗೆ ನಿತ್ಯವೂ ಹಣ ಜಮಾ ಆಗುತ್ತಿದ್ದರೂ ಒಮ್ಮೆಯೂ ಬ್ಯಾಂಕ್‌ಗೆ ಕಾಲಿಡದ ತಬ್ಲಿಘಿ ಮುಖ್ಯಸ್ಥ

ತಬ್ಲಿಘಿ ಜಮಾತ್‌ ಸಂಘಟನೆಯ ಮತ್ತು ಮುಖ್ಯಸ್ಥ ಮೌಲಾನಾ ಸಾದ್‌ ಹಣಕಾಸಿನ ವ್ಯವಹಾರದ ಬಗ್ಗೆ ಇಡಿ ಮತ್ತು ತೆರಿಗೆ ಇಲಾಖೆ ತನಿಖೆ ನಡೆಸುತ್ತಿದ್ದು, ಮೌಲಾನಾ ಸಾದ್‌ ಅವರ ಹೆಸರಿನಲ್ಲಿ ಖಾತೆ ಇದ್ದರೂ ಒಂದೇ ಒಂದು ದಿನ ಬ್ಯಾಂಕ್ ಗೆ ಹೋಗಿಲ್ಲ ಎಂದು ತಿಳಿದುಬಂದಿದೆ.

Vijaya Karnataka Web 20 Apr 2020, 10:02 am
ಹೊಸದಿಲ್ಲಿ: ತಬ್ಲಿಘಿ ಜಮಾತ್‌ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್‌ ಅವರ ಹಣಕಾಸಿನ ವಹಿವಾಟುಗಳ ಕುರಿತು ಆದಾಯ ತೆರಿಗೆ , ಜಾರಿ ನಿರ್ದೇಶನಾಲಯ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
Vijaya Karnataka Web maulana saad


1973ಕ್ಕಿಂತ ಮೊದಲೇ ತಬ್ಲಿಘಿ ಜಮಾತ್‌ ದಿಲ್ಲಿಯಲ್ಲಿ ಬ್ಯಾಂಕ್‌ ಖಾತೆ ಹೊಂದಿತ್ತು. ಪ್ರತಿದಿನ ನಿರ್ದಿಷ್ಟ ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುತ್ತಿತ್ತು, ಖಾತೆಯಲ್ಲಿರುವ ಈ ಹಣವನ್ನು ನೂರಾರು ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ಮಾಹಿತಿ ನೀಡಿವೆ. ಅಧಿಕಾರಿಗಳು ಯಾವ ಬ್ಯಾಂಕ್‌ನಲ್ಲಿ ಖಾತೆ ಇದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಬ್ಯಾಂಕ್‌ ಖಾತೆ ಮೌಲಾನಾ ಸಾದ್‌ ಅವರ ಹೆಸರಿನಲ್ಲಿದ್ದರೂ ಅವರು ಒಂದು ದಿನವೂ ಬ್ಯಾಂಕ್‌ಗೆ ಹೋಗಲಿಲ್ಲ ಎಂಬುದನ್ನೂ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಕೆಲವು ವಹಿವಾಟುಗಳ ಬಗ್ಗೆ ಸ್ಪಷ್ಟತೆ ಪಡೆಯಲು ಬ್ಯಾಂಕ್‌ ಅಧಿಕಾರಿಗಳು ಮೌಲಾನಾ ಸಾದ್‌ ಅವರನ್ನು ಬ್ಯಾಂಕ್‌ ಶಾಖೆಗೆ ಕರೆಸಲು ಪ್ರಯತ್ನಿಸಿದರೂ ಮೌಲಾನಾ ಸಾದ್‌ ಅವರ ಅವರ ಲೆಕ್ಕ ಪರಿಶೋಧಕರು ವಿವರಣೆ ನೀಡುವ ಜವಾಬ್ದಾರಿ ಹೊತ್ತರು. ಖಾತೆಗೆ ಹಣ ಎಲ್ಲಿಂದ ಬಂತು ಮತ್ತು ಅದನ್ನು ಹೇಗೆ ಖರ್ಚು ಮಾಡಲಾಗಿದೆ ಎಂಬುದರ ಕುರಿತು ತನಿಖೆ ನಡೆದಿದೆ.

ತಬ್ಲಿಘಿ ಜಮಾತ್‌ಗೆ ಹೋಗಿ ಬಂದವರು ಸಹಕರಿಸುತ್ತಿಲ್ಲ,

ಹವಾಲಾ ವಹಿವಾಟು, ತಬ್ಲಿಘಿಯ ಹಣಕಾಸು ವ್ಯವಹಾರ ಮತ್ತು ಮೌಲಾನಾ ಸಾದ್‌ ಅವರ ವೈಯಕ್ತಿಕ ಹಣಕಾಸು ವ್ಯವಹಾರದ ಕುರಿತಾಗಿಯೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂಸ್ಥೆ ವಿರುದ್ಧದ ಆರೋಪಗಳ ಕುರಿತು ಸ್ಪಷ್ಟೀಕರಣ ನೀಡಿರುವ ತಬ್ಲಿಘಿ ಪರ ವಕೀಲ ತೌಸೀಫ್‌ ಖಾನ್‌, ''ನಾವು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇವೆ. ತಬ್ಲಿಘಿ ಜಮಾತ್‌ ವಹಿವಾಟಿನಲ್ಲಿ ಯಾವುದೇ ಅಕ್ರಮವಿಲ್ಲ,'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ