ಆ್ಯಪ್ನಗರ

ಪ್ರತಿ ಕೊರೊನಾ ಸಾವು ದಾಖಲಾಗಬೇಕು: ಅಧಿಕಾರಿಗಳಿಗೆ ಅಮಿತ್ ಶಾ ತಾಕೀತು!

ನಿನ್ನೆ(ಭಾನುವಾರ) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಲೆ.ಗ. ಅನಿಲ್ ಬೈಜ್ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜಧಾನಿಯಲ್ಲಿ ಕೊರೊನಾ ವೈರಸ್‌ ಪರಿಣಾಮವಾಗಿ ಸಂಭವಿಸುವ ಎಲ್ಲಾ ಸಾವುಗಳನ್ನು ತಪ್ಪದೇ ದಾಖಲಿಸಬೇಕು ಎಂದು ಸೂಚನೆ ನೀಡಿದರು.

Vijaya Karnataka Web 22 Jun 2020, 11:01 am
Vijaya Karnataka Web Amit shah
ಸಂಗ್ರಹ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೆಚ್ಚಾಗಿರುವ ಕೊರೊನಾ ವೈರಸ್ ಹಾವಳಿಯನ್ನು ತಗ್ಗಿಸಲು ಸರ್ಕಾರ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನಿನ್ನೆ(ಭಾನುವಾರ) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಲೆ.ಗ. ಅನಿಲ್ ಬೈಜ್ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ರಾಜಧಾನಿಯಲ್ಲಿ ಕೊರೊನಾ ವೈರಸ್‌ ಪರಿಣಾಮವಾಗಿ ಸಂಭವಿಸುವ ಎಲ್ಲಾ ಸಾವುಗಳನ್ನು ತಪ್ಪದೇ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಮೃತದೇಹಗಳನ್ನು ಸಂಬಂಧಿಗಳಿಗೆ ಹಸ್ತಾಂತರಿಸಿ: ಆಸ್ಪತ್ರೆಗಳಿಗೆ ಅಮಿತ್ ಶಾ ಸೂಚನೆ!

ಕೊರೊನಾ ಸೋಂಕಿತರ ಚಿಕಿತ್ಸಾ ವಿಧಾನ, ಅವರು ಆಸ್ಪತ್ರೆಗೆ ದಾಖಲಾದ ಸಮಯ, ಆಸ್ಪತ್ರೆಗೆ ಬಂದಾಗ ಅವರ ಆರೋಗ್ಯ ಪರಿಸ್ಥಿತಿ ಹೇಗಿತ್ತು ಎಂಬುದರ ಕುರಿತು ಆರೋಗ್ಯ ಸಿಬ್ಬಂದಿ ಸೂಕ್ತ ದಾಖಲೆಗಳನ್ನು ಹೊಂದಿರಬೇಕು ಎಂದು ಶಾ ಸ್ಪಷ್ಟ ಸೂಚನೆ ನೀಡಿದ್ದಾರೆ.

ಅಲ್ಲದೇ ಕಂಟೈನ್‌ಮಂಟ್ ವಲಯಗಳ ಮರುವಿಂಗಡನೆ ಮಾಡುವುದು ಅತ್ಯವಶ್ಯಕ ಎಂದಿರುವ ಕೇಂದ್ರ ಗೃಹ ಸಚಿವ, ಆರೋಗ್ಯ ಸೇತು ಹಾಗೂ ಇತಿಹಾಸ್ ಆಪ್‌ಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ದಿಲ್ಲಿಯಲ್ಲಿ ಎಲ್ಲರಿಗೂ ಕೊರೊನಾ ಪರೀಕ್ಷೆ - ಸರ್ವಪಕ್ಷ ಸಭೆಯಲ್ಲಿ ಅಮಿತ್‌ ಶಾ ಭರವಸೆ

ಅಮಿತ್ ಶಾ ನೇತೃತ್ವದ ಸಬೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಏಮ್ಸ್ ಮುಖ್ಯಸ್ಥ ಹಾಗೂ ವೈದ್ಯರ ತಂಡ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ