ಆ್ಯಪ್ನಗರ

Ghaziabad Gang-rape: ಗ್ಯಾಂಗ್‌ರೇಪ್ ಘಟನೆಯೇ ಕಟ್ಟುಕಥೆ: ಆರೋಪಿಗಳನ್ನು ಸಿಲುಕಿಸಲು ಮಹಿಳೆ ಹೆಣೆದಿದ್ದ ಸಂಚು

Ghaziabad Gang-rape: ಗಾಜಿಯಾಬಾದ್‌ನಲ್ಲಿ ನಡೆದಿದೆ ಎಂದು ಆರೋಪಿಸಲಾಗಿದ್ದ ದಿಲ್ಲಿ ಮಹಿಳೆಯ 'ನಿರ್ಭಯ' ಮಾದರಿ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣ ಸಂಪೂರ್ಣ ಕಟ್ಟುಕಥೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನು ಸಿಲುಕಿಸಲು ಮಹಿಳೆ ಈ ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 21 Oct 2022, 12:38 pm

ಹೈಲೈಟ್ಸ್‌:

  • ಗಾಜಿಯಾಬಾದ್‌ನಲ್ಲಿ ದಿಲ್ಲಿ ಮಹಿಳೆಯ ಗ್ಯಾಂಗ್‌ರೇಪ್ ಪ್ರಕರಣ
  • ಐದು ಮಂದಿ ಅಪಹರಿಸಿ, ಅತ್ಯಾಚಾರ ಎಸಗಿದ್ದಾಗಿ ಮಹಿಳೆ ದೂರು
  • ಆಸ್ತಿ ವಿವಾದ ಕಾರಣದಿಂದ ಐದು ಮಂದಿಯನ್ನು ಸಿಲುಕಿಸಲು ಸಂಚು
  • ಅತ್ಯಾಚಾರ ಪ್ರಕರಣ ಸ್ನೇಹಿತರ ಜತೆ ಸೇರಿ ಸಂಚು ಹೆಣೆದಿದ್ದ ಮಹಿಳೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ghaziabad
ಹೊಸದಿಲ್ಲಿ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದ್ದ ದಿಲ್ಲಿ ಮಹಿಳೆಯ 'ಸಾಮೂಹಿಕ ಅತ್ಯಾಚಾರ' ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ವಾಸ್ತವವಾಗಿ ಅಲ್ಲಿ ಗ್ಯಾಂಗ್‌ರೇಪ್‌ ಅಥವಾ ಹಲ್ಲೆಯಂತಹ ಯಾವ ಕೃತ್ಯವೂ ನಡೆದಿರಲಿಲ್ಲ. ಇದೆಲ್ಲವೂ ಮಹಿಳೆ ಹೆಣೆದ ಕಟ್ಟುಕಥೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಜಿಯಾಬಾದ್‌ನಲ್ಲಿ ಬರ್ಥಡೇ ಪಾರ್ಟಿ ಮುಗಿಸಿಕೊಂಡು ದಿಲ್ಲಿಗೆ ಮರಳಲು ಬಸ್‌ಗೆ ಕಾಯುತ್ತಿದ್ದ 40 ವರ್ಷದ ಮಹಿಳೆಯನ್ನು ಕಾರ್‌ನಲ್ಲಿ ಬಂದ ಐವರು ದುಷ್ಕರ್ಮಿಗಳು ಅಪಹರಿಸಿದ್ದರು. ಆಕೆ ಮೇಲೆ ಎರಡು ದಿನ ಸಾಮೂಹಿಕ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿದ್ದರು ಎಂದು ದೂರು ನೀಡಲಾಗಿತ್ತು.
Ghaziabad Gang-rape: ಗಾಜಿಯಾಬಾದ್‌ನಲ್ಲಿ ನಿರ್ಭಯಾ ಮಾದರಿ ಕೃತ್ಯ: ದಿಲ್ಲಿ ಮಹಿಳೆ ಮೇಲೆ ಗ್ಯಾಂಗ್‌ರೇಪ್, ಚಿತ್ರಹಿಂಸೆ

ನಿರ್ಭಯಾ ಮಾದರಿಯಲ್ಲಿ ಕೃತ್ಯ ನಡೆದಿದ್ದು, ಆಕೆಯ ಗುಪ್ತಾಂಗಕ್ಕೆ ರಾಡ್ ಹಾಕಲಾಗಿತ್ತು. ಆಕೆ ಸ್ಥಿತಿ ಗಂಭೀರವಾಗಿದ ಎಂದು ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಹೇಳಿದ್ದರು.

ಆದರೆ ಇದೆಲ್ಲವೂ ಶುದ್ಧ ಸುಳ್ಳು ಎಂದು ಗಾಜಿಯಾಬಾದ್ ಪೊಲೀಸರು ಹೇಳಿದ್ದಾರೆ. ತಾನು ಆಸ್ತಿ ವಿವಾದ ಹೊಂದಿದ್ದ ವ್ಯಕ್ತಿಗಳನ್ನು ಸಿಲುಕಿಸಲು ಮಹಿಳೆ ಈ ಕಥೆ ಸೃಷ್ಟಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹುಡುಗರೂ ಸುರಕ್ಷಿತರಲ್ಲ! ದಿಲ್ಲಿಯಲ್ಲಿ 12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ, ಭೀಕರ ಹಲ್ಲೆ

"ತನ್ನನ್ನು ಅಪಹರಿಸಿದ ಐವರು ಅತ್ಯಾಚಾರ ಮಾಡಿದ್ದರು ಎಂದು ಆಕೆ ಹೇಳಿದ್ದ ಎರಡು ದಿನ, ಆಕೆ ತಮ್ಮ ಇಬ್ಬರು ಸ್ನೇಹಿತರ ಜತೆಗೆ ಇದ್ದರು" ಎಂದು ಉತ್ತರ ಪ್ರದೇಶದ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಪ್ರವೀಣ್ ಕುಮಾರ್ ಗುರುವಾರ ತಿಳಿಸಿದ್ದಾರೆ.

ಮಹಿಳೆಯ ಕೈಕಾಲುಗಳನ್ನು ಕಟ್ಟಿ ಗೋಣಿ ಚೀಲದ ಒಳಗೆ ಹಾಕಲಾಗಿತ್ತು. ರಸ್ತೆ ಬದಿಯಲ್ಲಿ ಆಕೆ ಪತ್ತೆಯಾಗಿದ್ದರು. ಅವರ ಗುಪ್ತಾಂಗಗಳಿಗೆ ಕಬ್ಬಿಣದ ರಾಡನ್ನು ತುರುಕಲಾಗಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದ ಸ್ವಾತಿ ಮಳಿವಾಲ್, ವರದಿ ನೀಡುವಂತೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದರು.


ಐವರು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು, ಇದರಲ್ಲಿ ಆಸ್ತಿ ವಿವಾದದ ಆಯಾಮವೂ ಇದೆ ಎಂದು ಹೇಳಿದ್ದರು. ದಿಲ್ಲಿಯ ಜಿಟಿಬಿ ಆಸ್ಪತ್ರೆ ವೈದ್ಯರು, ಮಹಿಳೆಯ ದೇಹದ ಒಳಗೆ ಯಾವುದೇ ಗಾಯವಾಗಿರುವುದನ್ನು ನಿರಾಕರಿಸಿದ್ದರು.
Delhi Gangrape: ರೈಲ್ವೆ ನಿಲ್ದಾಣದಲ್ಲಿ ಉದ್ಯೋಗಿಗಳಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಆಸ್ತಿ ವಿವಾದದ ಬಗ್ಗೆ ತಿಳಿದಿದ್ದ ಪೊಲೀಸರು, ಆ ಆಯಮದಿಂದಲೂ ತನಿಖೆ ನಡೆಸಿದ್ದರು. ಗಾಜಿಯಾಬಾದ್ ಮತ್ತು ದಿಲ್ಲಿಯನ್ನು ಸಂಪರ್ಕಿಸುವ ಆಶ್ರಮ ರಸ್ತೆ ಸಮೀಪ ಮಹಿಳೆ ಪತ್ತೆಯಾದ್ದರು. ಆಕೆಯ ಸ್ನೇಹಿತರೊಬ್ಬರ ಫೋನ್ ಅದೇ ಸ್ಥಳದಲ್ಲಿ ಸ್ವಿಚ್ ಆಫ್ ಆಗಿದ್ದನ್ನು ಮೊಬೈಲ್ ಸಿಗ್ನಲ್ ಟ್ರ್ಯಾಕಿಂಗ್ ಸಾಬೀತುಪಡಿಸಿತ್ತು.

"ಅತ್ಯಾಚಾರ ಪ್ರಕರಣಕ್ಕೆ ಹೆಚ್ಚಿನ ಪ್ರಚಾರ ನೀಡಲು, ಮಹಿಳೆಯ ಇಬ್ಬರು ಸ್ನೇಹಿತರಲ್ಲಿ ಒಬ್ಬಾತ, ವ್ಯಕ್ತಿಯೊಬ್ಬರಿಗೆ ಪೇಟಿಎಂ ಮೂಲಕ ಹಣ ಕಳುಹಿಸಿರುವುದು ಪತ್ತೆಯಾಗಿದೆ. ಆ ಸ್ನೇಹಿತನ ಮೇಲೆ ಈಗಾಗಲೇ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

"ಐವರು ವ್ಯಕ್ತಿಗಳನ್ನು ಅತ್ಯಾಚಾರ ಪ್ರಕರಣ ದಾಖಲಿಸುವ ಮೂಲಕ ಅದರಲ್ಲಿ ಸಿಲುಕಿಸಲು ಈ ದೂರಿನ ಸಂಚು ನಡೆದಿತ್ತು. ಮಹಿಳೆ ತನ್ನ ಸ್ನೇಹಿತರ ಜತೆ ತೆರಳಿದ ಮತ್ತು ಅವರ ಜತೆ ಎರಡು ದಿನ ಕಳೆಯಲು ಬಳಸಿದ್ದ ಕಾರನ್ನು ನಾವು ವಶಪಡಿಸಿಕೊಂಡಿದ್ದೇವೆ" ಎಂದಿದ್ದಾರೆ.
Delhi Gang Rape: ದಿಲ್ಲಿಯಲ್ಲಿ ಭೀಕರ ಕೃತ್ಯ: ಚಲಿಸುವ ಕಾರಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಚಿತ್ರೀಕರಣ

ಬಾಯ್ಬಿಟ್ಟ ಆರೋಪಿ
ಆಜಾದ್ ಎಂಬ ಸ್ನೇಹಿತನ ಜತೆಗೂಡಿ ಮಹಿಳೆ ಈ ಸಂಚು ರೂಪಿಸಿದ್ದರು. ಆಜಾದ್ ಜತೆಗೆ ಆತನ ಸಹವರ್ತಿಗಳಾದ ಗೌರವ್ ಮತ್ತು ಅಫ್ಜಲ್ ಎಂಬುವವರನ್ನು ಬಂಧಿಸಲಾಗಿದೆ. ಆಜಾದ್‌ನ ಮೊಬೈಲ್ ಫೋನ್, ಮಹಿಳೆ ಸಿಕ್ಕ ಸ್ಥಳದಲ್ಲಿ ಸ್ವಿಚ್ ಆಫ್ ಆಗಿದ್ದನ್ನು ತಿಳಿದ ಪೊಲೀಸರು, ಆತನನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಬಾಯ್ಬಿಟ್ಟಿದ್ದಾನೆ.

ಮಹಿಳೆ ಬುಧವಾರ ಪತ್ತೆಯಾದಾಗ, ಮೊದಲು ಗಾಜಿಯಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಮೀರತ್‌ಗೆ ಸಾಗಿಸಲು ಸೂಚಿಸಲಾಗಿತ್ತು. ಈ ಎರಡೂ ಕಡೆ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಆಕೆ ನಿರಾಕರಿಸಿದ್ದರು. ಆಕೆಯ ಒತ್ತಾಯದಂತೆ ದಿಲ್ಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ದಾಖಲಿಸಿದ ಅತ್ಯಾಚಾರ ದೂರು ಸುಳ್ಳು ಎಂದು ಪೊಲೀಸರು ಹೇಳಿದ ಬಳಿಕ ಸ್ವಾತಿ ಮಳಿವಾಲ್ ಅಥವಾ ಸಂತ್ರಸ್ತೆ ಕಡೆಯಿಂದ ಯಾವುದೇ ಹೇಳಿಕೆ ಬಂದಿಲ್ಲ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ