ಹೊಸದಿಲ್ಲಿ: ಕಳೆದ ವರ್ಷ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಜೈಷ್ ಉಗ್ರರನ್ನು ಬೇಟೆಯಾಡುವ ವೇಳೆ ಹುತಾತ್ಮರಾಗಿದ್ದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರಪತ್ನಿ ನಿತಿಕಾ ಕೌಲ್ ಸೇನೆ ಸೇರಲು ಸಿದ್ಧರಾಗಿದ್ದಾರೆ. 28 ವರ್ಷದ ಕೌಲ್ ಅವರು ಸದ್ಯ ಎಸ್ಎಸ್ಸಿ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದಾರೆ. ಮೆರಿಟ್ ಲಿಸ್ಟ್ ಎದುರು ನೋಡುತ್ತಿರುವ ಅವರು ಶೀಘ್ರವೇ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ''ನನ್ನ ಪತಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸುವ ಮಾರ್ಗ ಇದೊಂದೇ ಎಂದು ನನಗೆ ಅನಿಸಿತು. ಆದರೆ ನಾನು ಈ ಹಿಂದೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸೇನೆಯಲ್ಲಿನ ಸೇವೆಗೆ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟ ಎನಿಸಬಹುದು,'' ಎಂದು ಕೌಲ್ ಪ್ರತಿಕ್ರಿಯಿಸಿದ್ದಾರೆ.
2018ರ ಏಪ್ರಿಲ್ನಲ್ಲಿ ವಿಭೂತಿ ಮತ್ತು ನಿತಿಕಾ ಅವರ ವಿವಾಹವಾಗಿತ್ತು.
ಎಕೆ 47 ಬುಲೆಟ್ಗೂ ಜಗ್ಗದ ಹೆಲ್ಮೆಟ್ ತಯಾರಿಸಿದ ಸೇನಾಧಿಕಾರಿ..! ಡಿಫೆನ್ಸ್ ಎಕ್ಸ್ಪೊದಲ್ಲಿ ಶಹಬ್ಬಾಸ್ಗಿರಿ
ಪಿಒಕೆಯಲ್ಲಿ ಉಗ್ರರು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಸದ್ಯ ಪಾಕ್ ಪೋಷಿತ ಉಗ್ರರು ಭಾರಿ ಪ್ರಮಾಣದಲ್ಲಿ ಜಮಾವಣೆಯಾಗಿದ್ದಾರೆ. ಕದನವಿರಾಮ ಉಲ್ಲಂಘನೆ ಮೂಲಕ ಉಗ್ರರನ್ನು ಭಾರತದೊಳಗೆ ನುಸುಳಿಸುವ ಪಾಕಿಸ್ತಾನ ಸೇನೆಯ ಎಲ್ಲ ಯತ್ನಗಳನ್ನು ನಾವು ವಿಫಲಗೊಳಿಸುತ್ತಿದ್ದೇವೆ ಎಂದು ಕಾಶ್ಮೀರದಲ್ಲಿ ಸೇನಾ ನೆಲೆಯ 15 ಕೋರ್ ಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ಸೈನಿಕನ ತ್ಯಾಗ: ತನ್ನದೇ ವಿವಾಹಕ್ಕೆ ಬರಲಾಗದೆ ವೀರ ಯೋಧರೊಬ್ಬರ ವಿವಾಹ ಮುಂದೂಡಿಕೆ
2018ರ ಏಪ್ರಿಲ್ನಲ್ಲಿ ವಿಭೂತಿ ಮತ್ತು ನಿತಿಕಾ ಅವರ ವಿವಾಹವಾಗಿತ್ತು.
ಎಕೆ 47 ಬುಲೆಟ್ಗೂ ಜಗ್ಗದ ಹೆಲ್ಮೆಟ್ ತಯಾರಿಸಿದ ಸೇನಾಧಿಕಾರಿ..! ಡಿಫೆನ್ಸ್ ಎಕ್ಸ್ಪೊದಲ್ಲಿ ಶಹಬ್ಬಾಸ್ಗಿರಿ
ಪಿಒಕೆಯಲ್ಲಿ ಉಗ್ರರು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಸದ್ಯ ಪಾಕ್ ಪೋಷಿತ ಉಗ್ರರು ಭಾರಿ ಪ್ರಮಾಣದಲ್ಲಿ ಜಮಾವಣೆಯಾಗಿದ್ದಾರೆ. ಕದನವಿರಾಮ ಉಲ್ಲಂಘನೆ ಮೂಲಕ ಉಗ್ರರನ್ನು ಭಾರತದೊಳಗೆ ನುಸುಳಿಸುವ ಪಾಕಿಸ್ತಾನ ಸೇನೆಯ ಎಲ್ಲ ಯತ್ನಗಳನ್ನು ನಾವು ವಿಫಲಗೊಳಿಸುತ್ತಿದ್ದೇವೆ ಎಂದು ಕಾಶ್ಮೀರದಲ್ಲಿ ಸೇನಾ ನೆಲೆಯ 15 ಕೋರ್ ಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ಸೈನಿಕನ ತ್ಯಾಗ: ತನ್ನದೇ ವಿವಾಹಕ್ಕೆ ಬರಲಾಗದೆ ವೀರ ಯೋಧರೊಬ್ಬರ ವಿವಾಹ ಮುಂದೂಡಿಕೆ