ಆ್ಯಪ್ನಗರ

ಜೈಲಿನಲ್ಲಿ ಹಲ್ಲೆ, ಪೊಲೀಸರ ವಿರುದ್ಧ ಕ್ರಮಕ್ಕೆ ನಿರ್ಭಯಾ ಅತ್ಯಾಚಾರಿಯ ಆಗ್ರಹ

ಕಳೆದ ವರ್ಷದ ಜುಲೈ 26 ಮತ್ತು 29 ರಂದು ಜೈಲಿನಲ್ಲಿ ತನ್ನ ಮೇಲೆ ಪೇದೆ ಅನಿಲ್‌ ಕುಮಾರ್‌ ಹಾಗೂ ಇನ್ನೊಬ್ಬ ಪೊಲೀಸ್‌ ಅಧಿಕಾರಿ ಹಲ್ಲೆ ನಡೆಸಿದ್ದಾರೆ. ಇವರಿಬ್ಬರ ವಿರುದ್ಧವೂ ಎಫ್‌ಐಆರ್‌ ದಾಖಲಿಸಬೇಕು ಎಂದು ಗುಪ್ತಾನ ಪರ ವಕೀಲ ಎಪಿ ಸಿಂಗ್‌ ಅರ್ಜಿ ಸಲ್ಲಿಸಿದ್ದಾರೆ.

Agencies 11 Mar 2020, 6:39 pm
ಹೊಸದಿಲ್ಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ವಿನಯ್‌ ಕುಮಾರ್‌ ಗುಪ್ತಾ, ಹಿಂದೆ ಪೂರ್ವ ದಿಲ್ಲಿಯ ಮಂಡೋಲಿ ಕೇಂದ್ರ ಕಾರಾಗೃಹದಲ್ಲಿ ತನ್ನ ವಿರುದ್ಧ ಹಲ್ಲೆ ನಡೆಸಿದ ಪೊಲೀಸರಿಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾನೆ.
Vijaya Karnataka Web Pawan gupat


ಕಳೆದ ವರ್ಷದ ಜುಲೈ 26 ಮತ್ತು 29 ರಂದು ಜೈಲಿನಲ್ಲಿ ತನ್ನ ಮೇಲೆ ಪೇದೆ ಅನಿಲ್‌ ಕುಮಾರ್‌ ಹಾಗೂ ಇನ್ನೊಬ್ಬ ಪೊಲೀಸ್‌ ಅಧಿಕಾರಿ ಹಲ್ಲೆ ನಡೆಸಿದ್ದಾರೆ. ಇವರಿಬ್ಬರ ವಿರುದ್ಧವೂ ಎಫ್‌ಐಆರ್‌ ದಾಖಲಿಸಬೇಕು ಎಂದು ಗುಪ್ತಾನ ಪರ ವಕೀಲ ಎ.ಪಿ.ಸಿಂಗ್‌ ಅರ್ಜಿ ಸಲ್ಲಿಸಿದ್ದಾರೆ.

ಚೀಫ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಅರ್ಜಿಯನ್ನು ಪುರಸ್ಕರಿಸಿದ್ದು ಗುರುವಾರ ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ಮಧ್ಯೆ ನಿರ್ಭಯಾ ಹಂತಕರನ್ನು ಸಂದರ್ಶಿಸಲು ಅವಕಾಶ ನೀಡಬೇಕೆಂಬ ಮಾಧ್ಯಮ ಸಂಸ್ಥೆಯೊಂದರ ಮನವಿಯನ್ನು ಪರಿಶೀಲಿಸುವಂತೆ ದಿಲ್ಲಿ ಹೈಕೋರ್ಟ್‌ ತಿಹಾರ್‌ ಜೈಲು ಆಡಳಿತಕ್ಕೆ ಸೂಚನೆ ನೀಡಿದೆ.

ಮಾರ್ಚ್‌ 20ರಂದು ನೇಣುಗಂಬ ಏರಲಿರುವ ಹಂತಕರಾದ ಮುಕೇಶ್‌ ಕುಮಾರ್‌ ಸಿಂಗ್‌, ಪವನ್‌ ಕುಮಾರ್‌ ಗುಪ್ತಾ, ವಿನಯ್‌ ಶರ್ಮಾ ಹಾಗೂ ಅಕ್ಷಯ್‌ ಕುಮಾರ್‌ ಸಿಂಗ್‌ನನ್ನು ಸಂದರ್ಶಿಸಲು ಅವಕಾಶ ನೀಡುವಂತೆ ತಿಹಾರ್‌ ಜೈಲು ಆಡಳಿತಕ್ಕೆ ನಿರ್ದೇಶಿಸಬೇಕೆಂದು ಕೋರಿ ಮಾಧ್ಯಮ ಸಂಸ್ಥೆಯೊಂದು ಮನವಿ ಸಲ್ಲಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ