ಆ್ಯಪ್ನಗರ

ಪೊಲೀಸರಿಗೆ ಗನ್ ತೋರಿಸಿದ್ದ ದಿಲ್ಲಿ ಗಲಭೆ ಆರೋಪಿ ಶಾರುಖ್‌ಗೆ ಅದ್ದೂರಿ ಸ್ವಾಗತ ಕೊಟ್ಟ ಸ್ಥಳೀಯರು!

North-east Delhi Riots 2020: 2020ರ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಪೊಲೀಸರಿಗೆ ಗನ್ ತೋರಿಸಿ ಬೆದರಿಸಿದ್ದ ಆರೋಪಿಯನ್ನು ಪೆರೋಲ್ ಮೇಲೆ ಮನೆಗೆ ಕರೆದುಕೊಂಡು ಬಂದಾಗ, ಸ್ಥಳೀಯರು ಭವ್ಯ ಸ್ವಾಗತ ನೀಡಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 27 May 2022, 4:35 pm

ಹೈಲೈಟ್ಸ್‌:

  • 2020ರ ಈಶಾನ್ಯ ದಿಲ್ಲಿ ಹಿಂಸಾಚಾರದಲ್ಲಿ ಬಂಧಿತನಾಗಿದ್ದ ಶಾರುಖ್ ಪಠಾಣ್
  • ಪೊಲೀಸ್ ಸಿಬ್ಬಂದಿಯ ಕಡೆಗೆ ಗನ್ ತೋರಿಸಿ ಬೆದರಿಸಿದ್ದ ಆರೋಪಿ ಶಾರುಖ್
  • ತಂದೆಯ ಅನಾರೋಗ್ಯದ ಕಾರಣ ನಾಲ್ಕು ಗಂಟೆ ಪೆರೋಲ್ ಮೇಲೆ ಬಿಡುಗಡೆ
  • ಮನೆಗೆ ಬಂದ ಶಾರುಖ್ ಪಠಾಣ್‌ಗೆ ಜೈಕಾರ ಹಾಕಿ ಸ್ವಾಗತ ನೀಡಿದ ಜನರು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web north east delhi violence accused gets warm welcome during his home visit on parole
ಪೊಲೀಸರಿಗೆ ಗನ್ ತೋರಿಸಿದ್ದ ದಿಲ್ಲಿ ಗಲಭೆ ಆರೋಪಿ ಶಾರುಖ್‌ಗೆ ಅದ್ದೂರಿ ಸ್ವಾಗತ ಕೊಟ್ಟ ಸ್ಥಳೀಯರು!
ಹೊಸದಿಲ್ಲಿ: ದಿಲ್ಲಿ ಗಲಭೆಯಲ್ಲಿ ಜೈಲು ಪಾಲಾಗಿರುವ ಕಿಡಿಗೇಡಿಗೆ ಸ್ಥಳೀಯರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. 2020ರ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರಿಗೆ ಗನ್ ತೋರಿಸಿದ್ದ ದುಷ್ಕರ್ಮಿಯನ್ನು ಅಲ್ಪ ಕಾಲ ಮನೆಗೆ ಭೇಟಿ ನೀಡಲು ಅವಕಾಶ ಕೊಡಲಾಗಿತ್ತು. ಈ ವೇಳೆ ಆತನಿಗೆ ಅಕ್ಕಪಕ್ಕದ ಮನೆಯವರು ಭವ್ಯ ಸ್ವಾಗತ ನೀಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ನೋಡಲು ಶಾರುಖ್ ಪಠಾಣ್‌ಗೆ ನಾಲ್ಕು ಗಂಟೆಗಳ ಪೆರೋಲ್ ನೀಡಲಾಗಿತ್ತು. ಹೀಗಾಗಿ ಆತ ಸೋಮವಾರ ಮನೆಗೆ ತೆರಳಿದ್ದ.
ದಿಲ್ಲಿ ಗಲಭೆ ಪ್ರಕರಣದಲ್ಲಿ ಮೊದಲ ಶಿಕ್ಷೆ: ವೃದ್ಧೆ ಮನೆಯನ್ನು ದೋಚಿ, ಬೆಂಕಿ ಹಚ್ಚಿದ ಆರೋಪಿಗೆ 5 ವರ್ಷ ಜೈಲು

ಈಶಾನ್ಯ ದಿಲ್ಲಿಯಲ್ಲಿರುವ ಆತನ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕರೆದುಕೊಂಡು ಬರಲಾಗಿತ್ತು. ಆಗ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕೆಲವರು ಆತನನ್ನು ಕಂಡು ಹರ್ಷೋದ್ಗಾರ ಮಾಡಿದರೆ, ಇನ್ನು ಕೆಲವರು ಪೊಲೀಸಗ ಭದ್ರತೆಯನ್ನು ಭೇದಿಸಿ, ಕೈಕುಲುಕಿ ಅಭಿನಂದಿಸಲು ಪ್ರಯತ್ನಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ತಂದೆಯ ಭೇಟಿ ಬಳಿಕ ಆತನನ್ನು ಜೈಲಿಗೆ ವಾಪಸ್ ಕರೆದೊಯ್ಯಲಾಗಿದೆ.


ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆ, ಈಶಾನ್ಯ ದಿಲ್ಲಿಯಲ್ಲಿ ಭಾರಿ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಆರೋಪಿ ಶಾರುಖ್ ಪಠಾಣ್, ಪೊಲೀಸ್ ಸಿಬ್ಬಂದಿಯೊಬ್ಬರ ಕಡೆ ಗನ್ ತೋರಿಸಿ ಬೆದರಿಸಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು. ಆತನಿಗೆ ಕೋರ್ಟ್ ಶಿಕ್ಷೆ ವಿಧಿಸಿತ್ತು.
ದಿಲ್ಲಿ ಗಲಭೆ ಪ್ರಕರಣ: ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಜಾಮೀನು ತಿರಸ್ಕೃತ

ಗಲಭೆ, ಧಾರ್ಮಿಕ ವೈರತ್ವಕ್ಕೆ ಕುಮ್ಮಕ್ಕು ನೀಡುವುದು ಮತ್ತು ಕೊಲೆ ಪ್ರಯತ್ನದ ಆರೋಪಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಹೃದಯ ಆಂಜಿಯೋಪ್ಲಾಸ್ಟಿ ಸರ್ಜರಿಗೆ ಒಳಗಾಗಿದ್ದ ತಂದೆಯನ್ನು ನೋಡಲು ಆತನಿಗೆ ಮಾರ್ಚ್ ತಿಂಗಳಲ್ಲಿ ಒಂದು ದಿನದ ಮಟ್ಟಿಗೆ ಪೆರೋಲ್ ನೀಡಲಾಗಿತ್ತು. ಆದರೆ ಆ ವೇಳೆ ಅವರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಆತನ ಪರ ವಕೀಲರು ಹೇಳಿದ್ದರು.

ಸಿಎಎ ವಿರುದ್ಧ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಈಶಾನ್ಯ ದಿಲ್ಲಿ ಭಾಗದಲ್ಲಿ ಮೂರು ದಿನ ಗಲಭೆ ನಡೆದಿತ್ತು. ಅದರಲ್ಲಿ 50 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ