ಆ್ಯಪ್ನಗರ

ದೆಹಲಿ ಸಿಎಎ ಸಂಘರ್ಷ: ಚಾರ್ಜ್‌ಶೀಟ್‌ನಲ್ಲಿ ಸ್ವರಾಜ್ಯ ಇಂಡಿಯಾದ ಯೋಗಿಂದ್ರ ಯಾದವ್‌ ಹೆಸರು ಪ್ರಸ್ತಾಪ

ಈಶಾನ್ಯ ದೆಹಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಸಿಎಎ ಗಲಭೆಗೆ ಸಂಬಂಧಿಸಿದಂತೆ ಹೊಸ ಚಾರ್ಜ್‌ಶೀಟ್‌ನಲ್ಲಿ ಸ್ವರಾಜ್‌ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್‌ ಹೆಸರನ್ನು ಪ್ರಸ್ತಾಪಿಸಲಾಗಿದೆ. ಚಾಂದ್‌ ಬಾಗ್‌ನಲ್ಲಿ ಭಾಷಣ ಮಾಡಿದ್ದಕ್ಕಾಗಿ ಯೋಗೆಂದ್ರ ಯಾದವ್‌ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

Agencies 24 Jun 2020, 4:22 pm
ಹೊಸದಿಲ್ಲಿ: ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಸಿಎಎ ಗಲಭೆಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಹತ್ಯೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸ್‌ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸ್ವರಾಜ್‌ ಇಂಡಿಯಾ ಮುಖ್ಯಸ್ಥ ಯೋಗೆಂದ್ರ ಯಾದವ್‌ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
Vijaya Karnataka Web Delhi clashes 1
ಸಾಂದರ್ಭಿಕ ಚಿತ್ರ


ಚಾಂದ್‌ ಬಾಗ್‌ನಲ್ಲಿ ಭಾಷಣ ಮಾಡಿದ್ದಕ್ಕಾಗಿ ಯೋಗೇಂದ್ರ ಯಾದವ್‌ ಅವರ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸಂಘರ್ಷಕ್ಕೆ ಸಂಭಾವ್ಯ ಸಹ-ಪಿತೂರಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸಾಕ್ಷಿಯ ಹೇಳಿಕೆಯಂತೆ ಚಾಂದ್‌ ಬಾಗ್‌ನಲ್ಲಿ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಬೆಂಬಲಿಗರು ಸಿಎಎ ವಿರೋಧಿ ಪ್ರತಿಭಟನೆಯ ಪೋಡಿಯಂ ಬಳಿ ಬೆಂಕಿ ಹಚ್ಚಿದ್ದಾರೆಂದು ಚಾರ್ಜ್‌ಶೀಟ್‌ನಲ್ಲಿ ದಿಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.‌

ಈಶಾನ್ಯ ದೆಹಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಸಿಎಎ ಸಂಘರ್ಷದಲ್ಲಿ 42 ವರ್ಷದ ಹೆಡ್‌ ಕಾನ್‌ಸ್ಟೇಬಲ್‌ ರತನ್‌ ಲಾಲ್‌ ಹತ್ಯೆಯಾಗಿತ್ತು. ಆ ಪ್ರಕರಣದ ತನಿಖೆ ನಡೆಸಿದಾಗ ಈ ಅಂಶಗಳು ಬೆಳಕಿಗೆ ಬಂದಿವೆ. ರತನ್‌ ಲಾಲ್‌ ಚಾಂದ್‌ಬಾಗ್‌ ಬಳಿಯ ದಯಾಳ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಮಾಡಿದ ದಾಳಿಯಿಂದ ಸಾವನ್ನಪ್ಪಿದ್ದರು.

ದಿಲ್ಲಿ ಪೊಲೀಸ್‌ ಚಾರ್ಜ್‌ಶೀಟ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯೋಗೆಂದ್ರ ಯಾದವ್‌, ಪೊಲೀಸ್‌ ಚಾರ್ಜ್‌ಶೀಟ್‌ ಇದೆ. ಆದರೆ, ಅದರಲ್ಲಿ ಚಾರ್ಜ್‌ ಇಲ್ಲ. ನಾನು ಆರೋಪಿ ಅಲ್ಲ. ನನ್ನ ವಿರುದ್ಧ ಭಾಷಣ ಮಾಡುತ್ತೇನೆ ಎಂಬುದನ್ನು ಬಿಟ್ಟರೆ ಮತ್ತೇನು ಹೇಳಿಲ್ಲ. ಅದು ರಹಸ್ಯವಾಗಿ ಉಳಿದಿಲ್ಲ. ನನ್ನ ಪ್ರತಿ ಭಾಷಣ ಸಾರ್ವಜನಿಕವಾಗಿಯೇ ನೀಡಿದ್ದೇನೆ ಎಂದು ಹೇಳಿದ್ದಾರೆ.

ದೆಹಲಿ ಸಿಎಎ ಸಂಘರ್ಷ: ಐಬಿ ಅಧಿಕಾರಿ ಅಂಕಿತ್‌ ಶರ್ಮಾ ಕೊಲೆ ಹಿಂದೆ ದೊಡ್ಡ ಸಂಚು

ಇನ್ನು, ಚಾಂದ್‌ಬಾಗ್‌ನಲ್ಲಿ ಪ್ರತಿಭಟನೆ ಆಯೋಜಿಸಿದ್ದ ಡಿ.ಎಸ್‌.ಬಿಂದ್ರಾ (ಎಐಎಂಐಎಂ), ಕವಲ್‌ಪ್ರೀತ್‌ ಕೌರ್‌ (ಎಐಎಸ್‌ಎ), ದೇವಾಂಗ ಕಲಿತಾ (ಪಿಂಜ್ರಾ ಟೋಡ್‌), ಸಪೂರಾ, ಯೋಗೆಂದ್ರ ಯಾದವ್‌ ಸೇರಿ ಅನೇಕರು ರಹಸ್ಯ ಕಾರ್ಯಸೂಚಿ ಹೊಂದಿದ್ದರು ಎಂದು ದಿಲ್ಲಿ ಪೊಲೀಸ್‌ ಇಲಾಖೆ ತಿಳಿಸಿದೆ. ಈ ಚಾರ್ಜ್‌ಶೀಟ್‌ನಲ್ಲಿ ಕಪಿಲ್‌ ಮಿಶ್ರಾ ಸೇರಿ ವಿವಾದಾತ್ಮಕ ಭಾಷಣಗಳನ್ನು ಮಾಡಿದ ಅನೇಕ ಬಿಜೆಪಿ ನಾಯಕರ ಹೆಸರನ್ನು ಹೊರಗಿಡಲಾಗಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ದೆಹಲಿ ಸಿಎಎ ಗಲಭೆ: ದಿಲ್ಲಿ ಪೊಲೀಸರಿಂದ ಜೆಎನ್‌ಯುನ ಇಬ್ಬರು ವಿದ್ಯಾರ್ಥಿನಿಯರ ಬಂಧನ

ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಸಿಎಎ ಪರ-ವಿರೋಧ ಘರ್ಷಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಘರ್ಷಣೆಯಲ್ಲಿ ಗುಪ್ತಚರ ಅಧಿಕಾರಿ ಹಾಗೂ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಮೃತಪಟ್ಟಿದ್ದರು. 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ