ನವದೆಹಲಿ: ದೇಶದಾದ್ಯಂತ ಇಂದು ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿದೆ. ಕೆಲವು ವಿನಾಯ್ತಿಗಳನ್ನು ನೀಡಿ ಜಾರಿಗೊಳಿಸಲಾಗಿರುವ ಈ ಲಾಕ್ಡೌನ್ನನ್ನು ಮದ್ಯ ಮಾರಾಟ ಮಾಡಲು ಬಳಸಿಕೊಳ್ಳಲಾಗುತ್ತಿದೆ.
ಸರ್ಕಾರಗಳೇ ಮದ್ಯದಂಗಡಿ ತೆರಯಲು ಅನುಮತಿ ನೀಡಿರುವುದರಿಂದ ದೇಶದಾದ್ಯಂತ ಇಂದು ಮದ್ಯದಂಗಡಿಗಳಲ್ಲಿ ಭರ್ಜರಿ ಮದ್ಯ ಮಾರಾಟ ಆರಂಭವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಮಡು ಮದ್ಯದಂಗಡಿಗಳು ಜನರಿಗೆ ಮದ್ಯ ಖರೀದಿಗೆ ಅನುವು ಮಾಡಿಕೊಟ್ಟಿವೆ.
ಆದರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೆಲವು ಮದ್ಯದಂಗಡಿಗಳಿಗೆ ಜನಸಾಗರವೇ ಹರಿದು ಬಂದಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಸೇರಿರುವುದನ್ನು ಕಂಡ ಮದ್ಯದಂಗಡಿ ಮಾಲೀಕರು ತಮ್ಮ ಶಾಪ್ಗಳನ್ನು ಬಂದ್ ಮಾಡಿದ ಘಟನೆ ನಡೆದಿದೆ.
ಎಣ್ಣೆಗಾಗಿ ಲಾಕ್ಡೌನ್ ಶ್ರಮ ವ್ಯರ್ಥವಾಗಲು ಬಿಡಬೇಡಿ: ಎಚ್ಚರ ಕರ್ನಾಟಕ ಎಚ್ಚರ..!
ನಗರದ ಸುಮಾರು 100ಕ್ಕೂ ಅಧಿಕ ಮದ್ಯದಂಗಡಿಗಳಿಗೆ ಏಕಾಏಕಿ ಸಾವಿರಾರು ಜನ ಲಗ್ಗೆ ಇಟ್ಟ ಪರಿಣಾಮವಾಗಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ದುಸ್ತರವಾಯಿತು. ಈ ಹಿನ್ನೆಲೆಯಲ್ಲಿ ಮಾಲೀಕರು ತಮ್ಮ ಶಾಪ್ಗಳನ್ನು ಮುಚ್ಚಿ ಎಲ್ಲರನ್ನೂ ಖಾಲಿ ಕೈಯಲ್ಲಿ ಮನೆಗೆ ಕಳುಹಿಸಿದರು.
ಮದ್ಯದ ನಶೆಯ ಮುಂದೆ ಮಾಯವಾದ ಕೊರೊನಾ ಭಯ! ಖರೀದಿಗೆ ಮುಗಿಬಿದ್ದ ಎಣ್ಣೆ ಪ್ರಿಯರು
ಮದ್ಯದಂಗಡಿಗಳನ್ನು ತೆರೆಯಲು ಅನುವು ಮಾಡಿಕೊಟ್ಟಿರುವ ದೆಹಲಿ ಸರ್ಕಾರ, ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿ ಅಂತರ ಹಾಗೂ ಮದ್ಯದಂಗಡಿ ಒಳಗೆ ಒಂದು ಬಾರಿಗೆ ಕೇವಲ 5 ಜನರಿಗೆ ಮಾತ್ರ ಪ್ರವೇಶ ಎಂಬ ಷರತ್ತು ವಿಧಿಸಿತ್ತು.
ಸರ್ಕಾರಗಳೇ ಮದ್ಯದಂಗಡಿ ತೆರಯಲು ಅನುಮತಿ ನೀಡಿರುವುದರಿಂದ ದೇಶದಾದ್ಯಂತ ಇಂದು ಮದ್ಯದಂಗಡಿಗಳಲ್ಲಿ ಭರ್ಜರಿ ಮದ್ಯ ಮಾರಾಟ ಆರಂಭವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಮಡು ಮದ್ಯದಂಗಡಿಗಳು ಜನರಿಗೆ ಮದ್ಯ ಖರೀದಿಗೆ ಅನುವು ಮಾಡಿಕೊಟ್ಟಿವೆ.
ಆದರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೆಲವು ಮದ್ಯದಂಗಡಿಗಳಿಗೆ ಜನಸಾಗರವೇ ಹರಿದು ಬಂದಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಸೇರಿರುವುದನ್ನು ಕಂಡ ಮದ್ಯದಂಗಡಿ ಮಾಲೀಕರು ತಮ್ಮ ಶಾಪ್ಗಳನ್ನು ಬಂದ್ ಮಾಡಿದ ಘಟನೆ ನಡೆದಿದೆ.
ಎಣ್ಣೆಗಾಗಿ ಲಾಕ್ಡೌನ್ ಶ್ರಮ ವ್ಯರ್ಥವಾಗಲು ಬಿಡಬೇಡಿ: ಎಚ್ಚರ ಕರ್ನಾಟಕ ಎಚ್ಚರ..!
ನಗರದ ಸುಮಾರು 100ಕ್ಕೂ ಅಧಿಕ ಮದ್ಯದಂಗಡಿಗಳಿಗೆ ಏಕಾಏಕಿ ಸಾವಿರಾರು ಜನ ಲಗ್ಗೆ ಇಟ್ಟ ಪರಿಣಾಮವಾಗಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ದುಸ್ತರವಾಯಿತು. ಈ ಹಿನ್ನೆಲೆಯಲ್ಲಿ ಮಾಲೀಕರು ತಮ್ಮ ಶಾಪ್ಗಳನ್ನು ಮುಚ್ಚಿ ಎಲ್ಲರನ್ನೂ ಖಾಲಿ ಕೈಯಲ್ಲಿ ಮನೆಗೆ ಕಳುಹಿಸಿದರು.
ಮದ್ಯದ ನಶೆಯ ಮುಂದೆ ಮಾಯವಾದ ಕೊರೊನಾ ಭಯ! ಖರೀದಿಗೆ ಮುಗಿಬಿದ್ದ ಎಣ್ಣೆ ಪ್ರಿಯರು
ಮದ್ಯದಂಗಡಿಗಳನ್ನು ತೆರೆಯಲು ಅನುವು ಮಾಡಿಕೊಟ್ಟಿರುವ ದೆಹಲಿ ಸರ್ಕಾರ, ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿ ಅಂತರ ಹಾಗೂ ಮದ್ಯದಂಗಡಿ ಒಳಗೆ ಒಂದು ಬಾರಿಗೆ ಕೇವಲ 5 ಜನರಿಗೆ ಮಾತ್ರ ಪ್ರವೇಶ ಎಂಬ ಷರತ್ತು ವಿಧಿಸಿತ್ತು.