ಆ್ಯಪ್ನಗರ

ಕೇವಲ 20 ರೂ.ಗಾಗಿ ಮಗನ ಮುಂದೆಯೇ ತಂದೆಯ ಹತ್ಯೆ..! ಬಾಲಕ ಎಷ್ಟು ಬೇಡಿಕೊಂಡರೂ ಬಿಡದ ಪಾಪಿಗಳು

ಕೇವಲ 20 ರೂ.ಗಾಗಿ ಒಬ್ಬ ವ್ಯಕ್ತಿಯ ಕೊಲೆ..! ಹೌದು, ಕೇವಲ 20 ರೂ.ಗಾಗಿ ಆತನ ಮಗನ ಎದುರೇ ವ್ಯಕ್ತಿಯನ್ನು ಹತ್ಯೆಗೈದಿರುವ ಆಘಾತಕಾರಿ ಘಟನೆ ದಿಲ್ಲಿಯಲ್ಲಿ ನಡೆದಿದೆ. ಮಗ ಎಷ್ಟೇ ಪ್ರಯತ್ನಿಸಿದರೂ ಆರೋಪಿಗಳು ಹಲ್ಲೆಯನ್ನು ನಿಲ್ಲಿಸಿಲ್ಲ.

Agencies 28 Sep 2020, 6:12 pm
ಹೊಸದಿಲ್ಲಿ: ಕೇವಲ 20 ರೂ.ಗಾಗಿ ಒಬ್ಬ ವ್ಯಕ್ತಿಯನ್ನು ಆತನ ಮಗನ ಎದುರೇ ಹತ್ಯೆಗೈದಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಕಳೆದ ಗುರುವಾರ ಹತ್ಯೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದು, 13 ವರ್ಷದ ಮಗ ತನ್ನ ತಂದೆ ಮೇಲೆ ನಡೆಯುತ್ತಿರುವ ಹಲ್ಲೆ ತಡೆಯಲು ಪ್ರಯತ್ನಿಸಿದರು ಆರೋಪಿಗಳ ಮನ ಕರಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Vijaya Karnataka Web two arrested in north delhi s burari for beating man to death over rs20 in front of his son
ಕೇವಲ 20 ರೂ.ಗಾಗಿ ಮಗನ ಮುಂದೆಯೇ ತಂದೆಯ ಹತ್ಯೆ..! ಬಾಲಕ ಎಷ್ಟು ಬೇಡಿಕೊಂಡರೂ ಬಿಡದ ಪಾಪಿಗಳು


ರೂಪೇಶ್‌ ಎಂಬಾತ ಹತ್ಯೆಗೀಡಾದ ವ್ಯಕ್ತಿ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಮತ್ತು ಸರೋಜ್ ಎಂಬ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. 38 ವರ್ಷದ ರೂಪೇಶ್‌ ಪತ್ನಿ ಮತ್ತು ಮಕ್ಕಳೊಂದಿಗೆ ಉತ್ತರ ದೆಹಲಿಯ ಬುರಾರಿಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದು, ಈ ಪ್ರದೇಶ ಅಪರಾಧ ಪ್ರಮಾಣಕ್ಕೆ ಕುಖ್ಯಾತವಾಗಿದೆ.

ಪೊಲೀಸರ ಪ್ರಕಾರ, ರೂಪೇಶ್ ಕ್ಷೌರಕ್ಕಾಗಿ ಹತ್ತಿರದ ಸಲೂನ್‌ಗೆ ಹೋಗಿದ್ದಾನೆ. 50 ರೂ. ಪಾವತಿಸಲು ಸಲೂನ್‌ ಮಾಲೀಕ ಸಂತೋಷ್‌ ಕೇಳಿದ್ದು, ರೂಪೇಶ್‌ ತನ್ನ ಬಳಿಯಿದ್ದ 30 ರೂ. ನೀಡಿ ಉಳಿದ 20 ರೂ. ಹಣವನ್ನು ನಂತರ ಪಾವತಿಸುವುದಾಗಿ ಹೇಳಿದ್ದಾನೆ. ಇದೇ ಜಗಳಕ್ಕೆ ಕಾರಣವಾಗಿದ್ದು, 20 ರೂ. ಪಾವತಿಸುವಂತೆ ಸಂತೋಷ್ ಮತ್ತು ಸರೋಜ್ ಇಬ್ಬರು ಸಲೂನ್‌ನಲ್ಲಿದ್ದ ಪ್ಲಾಸ್ಟಿಕ್ ಪೈಪ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಮೊದಲು ಪ್ರೇಯಸಿಗೆ ಗುಂಡಿಕ್ಕಿ ಬಳಿಕ ಮಾಜಿ ಹೆಂಡತಿ ತಂದೆ ಕೊಂದ ಪೊಲೀಸ್‌..!

ಈ ಘಟನೆಯನ್ನು ಅಲ್ಲಿಯೇ ಇದ್ದ ಒಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಇದರಲ್ಲಿ ತಮ್ಮ ತಂದೆಯನ್ನು ಹಲ್ಲೆಯಿಂದ ತಪ್ಪಿಸಲು 13 ವರ್ಷದ ಮಗ ಹೇಗೆ ಪರದಾಡಿದ್ದಾನೆ ಎಂಬುದು ಬಹಿರಂಗವಾಗಿದೆ. ಅನೇಕ ಜನರು ಅಲ್ಲಿದ್ದರು ಯಾರೋಬ್ಬರು ಆ ವ್ಯಕ್ತಿಯ ಅಥವಾ ಮಗುವಿನ ಸಹಾಯಕ್ಕಾಗಿ ಮುಂದೆ ಬಂದಿಲ್ಲ. ತೀವ್ರ ಹಲ್ಲೆಗೊಳಗಾಗಿದ್ದ ರೂಪೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಆತನನ್ನು ಮೃತಪಟ್ಟಿದ್ದಾನೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಕೂಡ ನನ್ನ ಮಗ: ಶಾಹೀನ್‌ ಬಾಗ್‌ನ ಬಿಲ್ಕಿಸ್‌ ದಾದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ