ಆ್ಯಪ್ನಗರ

Delhi AIIMS: 7 ತಿಂಗಳು ಪ್ರಜ್ಞಾಹೀನಳಾಗಿದ್ದ ಮಹಿಳೆಗೆ ಹೆಣ್ಣುಮಗು ಜನನ: ಏಮ್ಸ್‌ನಲ್ಲಿ ಅಪರೂಪದ ಘಟನೆ

Delhi AIIMS: ಏಪ್ರಿಲ್‌ನಲ್ಲಿ ಅಪಘಾತಕ್ಕೀಡಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಏಮ್ಸ್‌ಗೆ ದಾಖಲಾಗಿದ್ದ ಮಹಿಳೆ, ಏಳು ತಿಂಗಳ ಬಳಿಕ ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಆಕೆಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಅಪಘಾತದಿಂದ ಚೇತರಿಸಿಕೊಂಡಿಲ್ಲ.

Edited byಅಮಿತ್ ಎಂ.ಎಸ್ | Vijaya Karnataka Web 29 Oct 2022, 7:42 pm

ಹೈಲೈಟ್ಸ್‌:

  • ಏಳು ತಿಂಗಳ ಪ್ರಜ್ಞಾಹೀನತೆ ಬಳಿಕ ಮಗುವಿಗೆ ಜನ್ಮ ನೀಡಿದ ಮಹಿಳೆ
  • ಏಪ್ರಿಲ್‌ನಲ್ಲಿ ಸಂಭವಿಸಿದ ಬೈಕ್ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲು
  • ಏಮ್ಸ್‌ನಲ್ಲಿ ವೆಂಟಿಲೇಟರ್‌ನಲ್ಲಿರುವ ಮಹಿಳೆಗೆ ಐದು ಬಾರಿ ಶಸ್ತ್ರಚಿಕಿತ್ಸೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web aiims_delhi
ಹೊಸದಿಲ್ಲಿ: ರಸ್ತೆ ಅಪಘಾತದಲ್ಲಿ ಅನೇಕ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಏಳು ತಿಂಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ 23 ವರ್ಷದ ಮಹಿಳೆ, ಹೆಣ್ಣುಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ದಿಲ್ಲಿಯಲ್ಲಿ ನಡೆದಿದೆ. ಏಮ್ಸ್‌ನ ಟ್ರಾಮಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ತಲೆಗೆ ಹಲವು ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕಳೆದ ವಾರ ಅವರಿಗೆ ಆರೋಗ್ಯವಂತ ಹೆಣ್ಣುಮಗು ಜನಿಸಿದೆ.
"2022ರ ಏಪ್ರಿಲ್ 1ರ ಬೆಳಗಿನ ಜಾವ 4.30ರ ವೇಳೆಗೆ ಏಮ್ಸ್‌ನ ಟ್ರಾಮಾ ಕೇಂದ್ರಕ್ಕೆ 23 ವರ್ಷದ ಮಹಿಳೆಯನ್ನು ಕರೆದುಕೊಂಡು ಬರಲಾಗಿತ್ತು. ಉತ್ತರ ಪ್ರದೇಶ ಬುಲಂದ್‌ಶಹರ್‌ನಲ್ಲಿ ಹಿಂದಿನ ರಾತ್ರಿ ಪತಿ ಜತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಆಕೆಯ ತಲೆಗೆ ಬಲವಾದ ಗಾಯಗಳಾಗಿದ್ದವು.
ಲಗೇಜಿನಿಂದಾಗಿ ಹ್ಯಾಂಡಲ್ ತಿರುಗಿಸಲಾಗದ್ದಕ್ಕೆ ಕೆರೆಗೆ ಬಿದ್ದ ಬೈಕ್: ಗರ್ಭಿಣಿ ಸಾವು, ಪತಿ ಗಂಭೀರ

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಮಹಿಳೆ ಮತ್ತು ಆಕೆಯ ಪತಿ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಗಂಡನ ತಲೆಗೆ ಯಾವುದೇ ಪೆಟ್ಟಾಗಿರಲಿಲ್ಲ. ಆದರೆ ಹೆಂಡತಿಯ ತಲೆಗೆ ಬಹಳ ಗಾಯಗಳಾಗಿದ್ದವು. ಆಕೆ ಒಂದು ಬದಿಯಲ್ಲಿ ಕುಳಿತಿದ್ದರಿಂದ ಆಯತಪ್ಪಿ ಬಿದ್ದಿದ್ದರು ಮತ್ತು ಹೆಲ್ಮೆಟ್ ಧರಿಸದ ಕಾರಣಕ್ಕೆ ಹೆಚ್ಚು ಪೆಟ್ಟಾಗಿತ್ತು" ಎಂದು ನ್ಯೂರೋಸರ್ಜನ್ ಡಾ ದೀಪಕ್ ಗುಪ್ತಾ ತಿಳಿಸಿದ್ದಾರೆ.

ಮಹಿಳೆಗೆ ಬುಲಂದ್‌ಶಹರ್‌ನಲ್ಲಿ ಮೊದಲು ಚಿಕಿತ್ಸೆ ನೀಡಲಾಗಿತ್ತು. ಬಳಿಕ ಏಮ್ಸ್‌ಗೆ ವರ್ಗಾಯಿಸಲಾಗಿತ್ತು. ಆರು ವಾರಗಳ ಹಿಂದಷ್ಟೇ ಅವರ ಮದುವೆಯಾಗಿದ್ದು, ಆಕೆ 40 ದಿನಗಳ ಗರ್ಭಿಣಿಯಾಗಿದ್ದಳು. ಕರೆತರುವಾಗ ಆಕೆ ಪ್ರಜ್ಞಾಹೀನಳಾಗಿದ್ದಳು. ಕಳೆದ ಏಳು ತಿಂಗಳಲ್ಲಿ ಆಕೆಗೆ ಐದು ಬಾರಿ ನ್ಯೂರೋಸರ್ಜಿಕಲ್ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಈಗ ಕೂಡ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದಾಳೆ. ಆದರೆ ಉಸಿರಾಟಕ್ಕೆ ವೆಂಟಿಲೇಟರ್ ಅಗತ್ಯ ಬೇಕಿಲ್ಲ. ಕೆಲವೊಮ್ಮೆ ಕಣ್ಣುಗಳನ್ನು ತೆರೆಯುತ್ತಾಳೆ. ಕೆಲವೊಮ್ಮೆ ನೋವುಗಳಿಗೆ ಸ್ಪಂದಿಸುತ್ತಾಳೆ. ಮುಂದಿನ ಮತ್ತಷ್ಟು ವರ್ಷ ಆಕೆಗೆ ಚಿಕಿತ್ಸೆ ಮುಂದುವರಿಸಿದರೆ ಆಕೆ ಪ್ರಜ್ಞೆ ಪಡೆಯುವ ಸಾಧ್ಯತೆ ಶೇ 10-15ರಷ್ಟಿದೆ ಎಂದು ಅವರು ಹೇಳಿದ್ದಾರೆ.
ಭೀಕರ ಘಟನೆ: ಗರ್ಭಿಣಿ ಮೇಲೆ ಹರಿದ ಟ್ರಕ್, ಮಗುವಿಗೆ ಜನ್ಮ ನೀಡಿದ ಕೂಡಲೇ ಮೃತಪಟ್ಟ ಮಹಿಳೆ

ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಗ, ಗರ್ಭಾವಸ್ಥೆ ಕುರಿತಂತೆ ಸಾಕಷ್ಟು ಚರ್ಚೆ ನಡೆದಿತ್ತು. ಆಕೆಗೆ ಪ್ರಜ್ಞೆ ಬಾರದೆ ಇದ್ದರೂ, ಗರ್ಭ ತೆಗೆಸುವುದು ಬೇಡ ಎಂದು ಕುಟುಂಬದವರು ನಿರ್ಧರಿಸಿದ್ದರು. ಆಕೆಯ ಗರ್ಭಕೋಶ ಅಥವಾ ಭ್ರೂಣಕ್ಕೆ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆಕೆಯಲ್ಲಿ ಹೆರಿಗೆ ನೋವಿನ ಲಕ್ಷಣ ಕಾಣಿಸಿಕೊಂಡಿತ್ತು. ಅಕ್ಟೋಬರ್ 22ರಂದು ಆಕೆ ಸಹಜ ರೀತಿಯಲ್ಲಿಯೇ 2.5 ಕೆಜಿ ತೂಕದ ಮಗುವಿಗೆ ಜನ್ಮನೀಡಿದ್ದಾಳೆ ಎಂದು ವೈದ್ಯರು ವಿವರಿಸಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ