ಆ್ಯಪ್ನಗರ

ಬಸವಣ್ಣ ಈಗಿನ ರಾಜಕಾರಣಿಗಳಿಗೆ ಆದರ್ಶ: ಬಸವ ಮರುಳಸಿದ್ದ ಸ್ವಾಮೀಜಿ

ದುಬೈ ಬಸವ ಸಮಿತಿ ಇಲ್ಲಿನ ಜೆಎಸ್ಎಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣ ಅವರ 886ನೇ ಜಯಂತಿ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅನೇಕರು ಕಿರೀಟ ಧರಿಸಿರುವ ಬಸವಣ್ಣನ ಮೂರ್ತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇಷ್ಟ ಲಿಂಗ ಪೂಜೆ ಮಾಡುವ ಬಸವಣ್ಣ ಧಾರ್ಮಿಕವಾಗಿ ಸರಳತೆ ಆಚರಣೆಯನ್ನು ತೋರಿಸಿಕೊಟ್ಟರು. ವಚನ ರಚನೆ ಮಾಡುವ ಮೂಲಕ ಕಠಿಣ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳಿ ಎಲ್ಲರಿಗೂ ತಿಳಿಯುವಂತೆ ಮಾಡಿದರು' ಎಂದು ನುಡಿದರು.

Vijaya Karnataka Web 4 May 2019, 8:41 pm
ದುಬೈ: ಕಿರೀಟ ಧರಿಸಿರುವ ಬಸವಣ್ಣ ಒಬ್ಬ ರಾಜಕಾರಣಿಯಾಗಿ ಈಗಿನ ರಾಜಕಾರಣಿಗಳಿಗೆ ಈಗಲೂ ಆದರ್ಶವಾಗಿದ್ದಾರೆ ಎಂದು ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳ ಸಿದ್ದ ಸ್ವಾಮೀಜಿ ಹೇಳಿದರು.
Vijaya Karnataka Web Basava Jayanti


ದುಬೈ ಬಸವ ಸಮಿತಿ ಇಲ್ಲಿನ ಜೆಎಸ್ಎಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣ ಅವರ 886ನೇ ಜಯಂತಿ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅನೇಕರು ಕಿರೀಟ ಧರಿಸಿರುವ ಬಸವಣ್ಣನ ಮೂರ್ತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇಷ್ಟ ಲಿಂಗ ಪೂಜೆ ಮಾಡುವ ಬಸವಣ್ಣ ಧಾರ್ಮಿಕವಾಗಿ ಸರಳತೆ ಆಚರಣೆಯನ್ನು ತೋರಿಸಿಕೊಟ್ಟರು. ವಚನ ರಚನೆ ಮಾಡುವ ಮೂಲಕ ಕಠಿಣ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳಿ ಎಲ್ಲರಿಗೂ ತಿಳಿಯುವಂತೆ ಮಾಡಿದರು' ಎಂದು ನುಡಿದರು.

ಮೂರನೆಯದಾಗಿ ಕಿರೀಟ ಧರಿಸಿರುವ ಬಸವಣ್ಣನ ಬಗ್ಗೆ ಆಕ್ಷೇಪ ಇದೆ. ಈಗಿನ ರಾಜಕಾರಣಿಗೆ ಕಿರೀಟಧಾರಿ ಬಸವಣ್ಣ ಸ್ಪೂರ್ತಿಯಾಗಬೇಕು. ಬಸವಣ್ಣ ಅಧಿಕಾರದಲ್ಲಿದ್ದಾಗ ಕೈಗೆ ಯಾವುದೇ ರೀತಿಯ ಮಸಿ ಬಳಿಸಿಕೊಳ್ಳದೇ ಅಧಿಕಾರದಿಂದ ಹೊರಗೆ ಬಂದರು. ಭ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ ಬಸವಣ್ಣ ಇವತ್ತಿನ ರಾಜಕಾರಣಿಗಳಿಗೆ ಆದರ್ಶರಾಗಿದ್ದಾರೆ ಎಂದರು.

ಬಿಜ್ಜಳ ಮಹಾರಾಜ ಬಸವಣ್ಣನ ಆಡಳಿತದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಬಸವಣ್ಣ ತನ್ನ ತಲೆಯ ಮೇಲಿನ ಕಿರೀಟ ತೆಗೆದು ತನ್ನ ಅಧಿಕಾರ ತ್ಯಾಗ ಮಾಡಿದರು.

ಈಗಿನ ರಾಜಕಾರಣಿಗಳ ಹಾಗೆ ಅಧಿಕಾರಕ್ಕಾಗಿ ಯಾವುದೇ ರೀತಿಯ ಕುದುರೆ ವ್ಯಾಪಾರ ಮಾಡಲಿಲ್ಲ. ಅದೇ ಕಾರಣಕ್ಕೆ ಶರಣನಾಗಿ ಕೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುತ್ತಿರುವ ಬಸವಣ್ಣ ಎಷ್ಟು ಮುಖ್ಯವೋ ರಾಜಕಾರಣಿಯಾಗಿ ಕಿರೀಟ ಹಾಕಿತುವ ಬಸವಣ್ಣನೂ ಈಗಿನ ಕಾಲಕ್ಕೆ ಅಷ್ಟೇ ಪ್ರಸ್ತುತರಾಗಿದ್ದಾರೆ ಎಂದು ಹೇಳಿದರು.

ಬಸವಣ್ಣ ಕಾಯಕ ತತ್ವದ ಮೂಲಕ ಇಡೀ ವಿಶ್ವಕ್ಕೆ ಪ್ರೇರಣೆಯಾಗಿದ್ದಾರೆ. ಕಾಯಕ ತ್ವತ್ವ ಪಾಲಿಸಿದರೆ ಆತ್ಮವಿಶ್ವಾಸದಿಂದ ವಿಶ್ವದ ಯಾವುದೇ ದೇಶದಲ್ಲಿ ನೆಮ್ಮದಿಯಾಗಿ ಜೀವನ ಮಾಡಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸದ್ಯದ ವಾತಾವರಣದಲ್ಲಿ ವಿಶ್ವದಲ್ಲಿ ನೀರಿನ ಸಮಸ್ಯೆ ದೊಡ್ಡದಾಗಿದ್ದು ಜೀವ ಸೃಷ್ಟಿಗೆ ಕಾರಣವಾಗಿರುವ ನೀರನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಕಾರ್ಯಕ್ರಮದಲ್ಲಿ ಆನಂದಪುರ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿಯವರು, ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ ಸಾಗರದಾಚೆ ದುಬೈನಂತ ನಗರದಲ್ಲಿ ಬಸವಣ್ಣನ ಸಮಾನತೆ ತತ್ವ ಹಾಗೂ ಕನ್ನಡವನ್ನು ಜೀವಂತವಾಗಿಟ್ಟ ವಚನ ಸಾಹಿತ್ಯವನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಭಾರತದಲ್ಲಿರುವ ಬಸವಾಭಿಮಾನಿಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.ಜಡೆ ಸಂಸ್ಥಾನ ಮಠದ ಮಹಾಂತಸ್ವಾಮೀಜಿ ಯೋಗ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಝೀ ಕನ್ನಡ ಸರಿಗಮಪ ಕಾರ್ಯಕ್ರಮ ವಿನ್ನರ್ ಚೆನ್ನಪ್ಪ ಹುದ್ದಾರ್ ಸಂಗೀತ, ಮಾತನಾಡಿಸುವ ಗೊಂಬೆ ಖ್ಯಾತಿಯ ಸುಮಾ ರಾಜಕುಮಾರ್ ಅವರ ಗೊಂಬೆ ಮಾತು ಕಾರ್ಯಕ್ರಮ ಜನರ ಮನಸೂರೆಗೊಂಡವು.

ಕಾರ್ಯಕ್ರಮದಲ್ಲಿ ದುಬೈ ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ, ಸಂಗಮೇಶ್ ಬಿಸರಳ್ಳಿ, ಮಲ್ಲಿಕಾರ್ಜುನ ಮುಳ್ಳೂರು, ಸತೀಶ್ ಹಿಂಡೇರ್, ರುದ್ರಯ್ಯ ನವಲಿ ಹಿರೇಮಠ, ಮಮತಾ ರಡ್ಡೇರ್, ಜಗದೀಶ್ ಲಾಲಿ, ಮುರುಗೇಶ್ ಗಾಜರೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ