ಆ್ಯಪ್ನಗರ

ತುತ್ತು ಅನ್ನಕ್ಕೆ ಪರದಾಡುತ್ತಿದ್ದ ಪಾಕಿಸ್ತಾನಿ ಕುಟುಂಬಕ್ಕೆ ನೆರವಾದ ದುಬೈ ಕನ್ನಡಿಗರು

ಪಾಕಿಸ್ತಾನಿ ಕುಟುಂಬವೊಂದು ಸಂಕಷ್ಟದಲ್ಲಿದೆ ಎಂದು ಸಂಘದ ಸದಸ್ಯರಲ್ಲಿ ತಿಳಿಸಿದಾಗ ತಕ್ಷಣವೇ ಸದಸ್ಯರಿಬ್ಬರು ಸ್ಪಂದಿಸಿದ್ದು, ಬಹಿರಂಗ ಪಡಿಸಲು ಬಯಸದ ಸದಸ್ಯರೊಬ್ಬರು​ 200 ದಿರ್ಹಂ ಹಾಗೂ ಮತ್ತೊಬ್ಬರು 1000 ದಿರ್ಹಂ ನೀಡಿದ್ದಾರೆ.

Vijaya Karnataka Web 17 Jan 2021, 9:58 am
ಶಾರ್ಜಾ: ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ ಪಾಕಿಸ್ತಾನಿ ಕುಟುಂಬವೊಂದಕ್ಕೆ ಅನಿವಾಸಿ ಕನ್ನಡಿಗರ ಸಂಘಟನೆ ದುಬೈ ಹೆಮ್ಮೆಯ ಕನ್ನಡಿಗರು ತಂಡದ ಸದಸ್ಯರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಆ ಮೂಲಕ ಪರಕೀಯರ ಊರಲ್ಲೂ ಕನ್ನಡಿಗರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
Vijaya Karnataka Web ಪಾಕ್‌ ಕುಟುಂಬಕ್ಕೆ ಆಹಾರ ಸಾಮಾಗ್ರಿ ನೀಡಿದ ಸಂಘದ ಸದಸ್ಯರು


ಕೆಲಸಕ್ಕೆಂದು ದುಬೈಗೆ ಬಂದು ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನಿ ಕುಟುಂಬವೊಂದು ತುತ್ತು ಅನ್ನಕ್ಕೂ ಪರದಾಡುತ್ತಿದೆ ಎಂದು ತಿಳಿದ ಸಂಘದ ಸದಸ್ಯರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪಾಕಿಸ್ತಾನಿ ಕುಟುಂಬವೊಂದು ಸಂಕಷ್ಟದಲ್ಲಿದೆ ಎಂದು ಸಂಘದ ಸದಸ್ಯರಲ್ಲಿ ತಿಳಿಸಿದಾಗ ತಕ್ಷಣವೇ ಸದಸ್ಯರಿಬ್ಬರು ಸ್ಪಂದಿಸಿದ್ದು, ಬಹಿರಂಗ ಪಡಿಸಲು ಬಯಸದ ಸದಸ್ಯರೊಬ್ಬರು 200 ದಿರ್ಹಂ ಹಾಗೂ ಮತ್ತೊಬ್ಬರು 1000 ದಿರ್ಹಂ ನೀಡಿದ್ದಾರೆ.

ಅಮೆರಿಕದಲ್ಲಿರುವ ಕನ್ನಡಿಗರೇ ತಯಾರಿಸಿದ ಈ ಸೋಶಿಯಲ್‌‌ ಆ್ಯಪ್‌ ಒಮ್ಮೆ ಟ್ರೈ ಮಾಡಿ
ಇದರಿಂದ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ಸಾಮಾಗ್ರಿಗಳನ್ನು ಖರೀದಿ ಮಾಡಿ ಅವರ ಮನೆಗೇ ತಲುಪಿಸಲಾಗಿದೆ. ಜತೆಗೆ ಖರ್ಚಿಗೆ ಸ್ವಲ್ಪ ಹಣವನ್ನೂ ನೀಡಿದ್ದಾರೆ. ದುಬೈ ನಿವಾಸಿಗಳಾಗಿರುವ ಬೆಂಗಳೂರಿನ ಮಮತಾ ಹಾಗೂ ಮಂಡ್ಯದ ಹಾದಿಯ ಅವರು ಈ ಕೆಲಸದಲ್ಲಿ ಮುತುವರ್ಜಿ ವಹಿಸಿಕೊಂದ್ದಾರೆ.

ಹೀಗೊಂದು ಪಾಕಿಸ್ತಾನಿ ಕುಟುಂಬ ಸಂಕಷ್ಟದಲ್ಲದೆ ಎಂದು ತಿಳಿಸಿದ ತಕ್ಷಣವೇ ಹಣ ನೀಡಿ ಸಹಾಯ ಮಾಡಿದ ದಾನಿಗಳಿಗೆ ಸಂಘದ ಪದಾಧಿಕಾರಿಗಳು ಧನ್ಯವಾದ ಸಮರ್ಪಿಸಿದ್ದಾರೆ.

ಅನಿವಾಸಿ ಕನ್ನಡಿಗರ ಸಂಘ ನಾವಿಕದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ
ಈ ಹಿಂದೆ ಕೂಡ ದುಬೈ ಹೆಮ್ಮೆಯ ಕನ್ನಡಿಗರು ತಂಡದ ವತಿಯಿಂದ ಹಲವು ಸಮಾಜಮುಖಿ ಕೆಲಸಗಳನ್ನು ನಡೆಸಲಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿ ತಂಡ ನಡೆಸಿದ ಮಾನವೀಯ ಕಾರ್ಯಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ