ಆ್ಯಪ್ನಗರ

ಕತಾರ್‌ನ ಕರ್ನಾಟಕ ಸಂಘದಿಂದ ಇಂಜಿನಿಯರ್ ದಿನಾಚರಣೆ; ಭಾರತ ಮೂಲದ ಇಬ್ಬರಿಗೆ ‘ಅಭಿಯಂತರ ಶ್ರೀ’ ಪುರಸ್ಕಾರ

ಕತಾರ್‌ನ ಕನ್ನಡ ಸಂಘದ ವತಿಯಿಂದ ಪ್ರತೀ ವರ್ಷ ನಡೆಯುವ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಕತಾರ್‌ನ ಏಕಿಕೃತ ಭಾರತೀಯ ಸಮುದಾಯ ಕೇಂದ್ರದಲ್ಲಿ ಸಡಗರದಿಂದ ಆಚರಿಸಲಾಯಿತು. ಭಾರತ ಮೂಲದ ಇಬ್ಬರು ಮಹನೀಯರಿಗೆ ಅಭಿಯಂತರ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸಲಾಯಿತು.

Vijaya Karnataka Web 17 Sep 2020, 12:10 pm
ದೋಹಾ, ಕತಾರ್: ಶ್ರೀ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ದೇಶಾದ್ಯಂತ ಇಂಜಿನಿಯರ್ ದಿನ ಎಂದು ಆಚರಿಸಲಾಗ್ತಿದೆ. ಇತ್ತ ದೂರದ ಕತಾರ್‌ನಲ್ಲೂ ಕೂಡ ಇಂಜಿನಿಯರ್ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
Vijaya Karnataka Web karnataka sangha qatar


ಪ್ರತೀವರ್ಷ ಕತಾರ್‌ನಲ್ಲಿರುವ ಕರ್ನಾಟಕ ಸಂಘದ ವತಿಯಿಂದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಂತೆ ಈ ಬಾರಿಯೂ ಕತಾರ್‌ನ ಏಕಿಕೃತ ಭಾರತೀಯ ಸಮುದಾಯ ಕೇಂದ್ರದಲ್ಲಿ ಸಡಗರದಿಂದ ಆಚರಿಸಲಾಯಿತು. ವಿಶ್ವೇಶ್ವರಯ್ಯನವರು ಹೇಳದಂತ ಜನಪ್ರಿಯ ಸಂದೇಶ ‘ತುಕ್ಕು ಹಿಡಿದು ಅಳಿಯುವುದಕ್ಕಿಂತ, ದುಡಿದು ಸವೆಯುವುದೇ ಮೇಲು’ ಎಂಬ ವಾಕ್ಯ ಕಾರ್ಯಕ್ರಮದಲ್ಲಿ ಮಾರ್ಧನಿಸಿತು.

ನಾವಿಕೋತ್ಸವ 2020: ಅಂತಾರಾಷ್ಟ್ರೀಯ 'ಕನ್ನಡ ಕಲಿ ಸ್ಪರ್ಧೆ'ಯಲ್ಲಿ ಚಿಣ್ಣರ ಕಲರವ!

ಕತಾರ್‌ನ ಕನ್ನಡ ಸಂಘದ ವತಿಯಿಂದ ಪ್ರತೀ ವರ್ಷ ನಡೆಯುವ ಭಾರತ ಮೂಲದ ಇಬ್ಬರು ಮಹನೀಯರಿಗೆ ಅಭಿಯಂತರ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಈ ವರ್ಷ ಕೂಡ ನಡೆಸಲಾಯಿತು. ಈ ಬಾರಿ ಅಭಿಯಂತರ ಶ್ರೀ ಪುರಸ್ಕಾರಕ್ಕೆ ಗಲ್ಫಾರ್ಲ್ ಮಿಸ್ನಾದ್ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಆಂಧ್ರ ಪ್ರದೇಶ ಮೂಲದ ಹೇಮಚಂದ್ರನ್ ಮತ್ತು ಸ್ಥಳೀಯ ಪ್ರತಿಷ್ಠಿತ ಸಂಸ್ಥೆಯ ಮಾಲೀಕರಾದ ಹಾಗೂ ಪ್ರಸ್ತುತ ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಉಪಾಧ್ಯಕ್ಷರಾದ ಕರ್ನಾಟಕ ಮೂಲದ ಮಹೇಶ್ ಗೌಡ ಪಾತ್ರರಾದರು.

ಸಾಮಾಜಿಕ ಜಾಲತಾಣದಲ್ಲಿ ರಂಗೇರಲಿದೆ ಕನ್ನಡಿಗರ ಹಬ್ಬ: ಸೆ. 4ರಿಂದ ನಡೆಯಲಿದೆ ಅಕ್ಕ ವರ್ಚುವಲ್ ವಿಶ್ವ ಕನ್ನಡ ಸಮ್ಮೇಳನ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಥಳೀಯ ಓರೆಡೂ ಸಂಸ್ಥೆಯ ಮುಖ್ಯ ತಾಂತ್ರಿಕ ಯೋಜನಾಧಿಕಾರಿ ಮುನೀರ ಫಹದ್-ಅಲ್-ದೊಸಾರಿ ಭಾಗವಹಿಸಿದ್ದರು. ಕರ್ನಾಟಕ ಮೂಲದ ಮೂರು ಅಭಿಯಂತರರಾದ ರಮೇಶ ಸಿದ್ದಯ್ಯ, ಹನುಮೇಶ್ ಸಿದ್ದೆಗೌಡ ಮತ್ತು ಕುಮಾರಸ್ವಾಮಿ ತಾಂತ್ರಿಕ ವಿಷಯವನ್ನಾಧರಿಸಿ ಜನರನ್ನುದ್ದೇಶಿಸಿ ಮಾತನಾಡಿದರು.

ಅಮೆರಿಕದ ವಿದ್ಯಾರಣ್ಯ ‘ಚಿಣ್ಣರ ಕನ್ನಡ ಲೋಕ’ದಲ್ಲಿ ಮಿಂಚಿದ ಕಿರಿಯ ಪ್ರತಿಭೆಗಳು

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಪೂರ್ವಾಧ್ಯಕ್ಷರಾದ ವಿಈರಭದ್ರಪ್ಪ ಮನ್ನಂಗಿ, ದೀಪಕ್ ಶೆಟ್ಟಿ, ಮಧು ಕೃಷ್ಣಮೂರ್ತಿ, ವೆಂಕಟ ರಾವ್, ಭಾರತೀಯ ಕ್ರೀಡಾ ಕೇಂದ್ರದ ಪ್ರತಿನಿಧಿ ಅರುಣ್ ಕುಮಾರ್ ಹಾಗು ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಜಂಟಿ ಕಾರ್ಯದರ್ಶಿಯಾದ ಸುಬ್ರಮಣ್ಯ ಹೆಬ್ಬಾಗಿಲು ಅವರು ಉಪಸ್ಥಿತರಿದ್ದರು. ಶ್ರೀಮತಿ ಅಕ್ಷಯ ಶೆಟ್ಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ