ಆ್ಯಪ್ನಗರ

ಕತಾರ್‌ನ ದೋಹಾದಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆ

ಅಕ್ಟೋಬರ್ 2 ರಂದು ಸಂಜೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಕತಾರ್‌ನ ಭಾರತದ ರಾಯಭಾರಿ ಡಾ ದೀಪಕ್ ಮಿತ್ತಲ್, ಮೇಡಂ ರಾಯಭಾರಿ ಡಾ. ಅಲ್ಪನಾ ಮಿತ್ತಲ್, ಮೊದಲನೇ ಕಾರ್ಯದರ್ಶಿ ಶ್ರೀ ಸಚಿನ್ ದಿನಕರ್ ಸಕ್ಪಾಲ್, ರಕ್ಷಣಾ ಅಟ್ಯಾಚೆ ಶ್ರೀ ಮೋಹನ್ ಅಟ್ಲಾ ಸೇರಿದಂತೆ ಇತರ ಗಣ್ಯರು ಹಾಜರಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಶ್ರೀ. ಪಿ. ಎನ್. ಬಾಬುರಾಜನ್, ಐ.ಸಿ.ಬಿ.ಎಫ್.ನಿಂದ ಶ್ರೀ. ವಿನೋದ್ ನಾಯರ್ ಮತ್ತು ಐ.ಬಿ.ಪಿ.ಸಿ.ಯಿಂದ ಶ್ರೀ. ಜಾಫರ್ ಸಾದಿಕ್ ಹಾಗೂ ಅನೇಕ ಸಮುದಾಯದ ಮುಖಂಡರು ಸಭಿಕರಲ್ಲಿದ್ದರು.

Edited byದಿಲೀಪ್ ಡಿ. ಆರ್. | Vijaya Karnataka Web 6 Oct 2022, 1:24 pm
ದೋಹಾ (ಕತಾರ್): ಅಕ್ಟೋಬರ್ 2 ರಂದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನವನ್ನು ಕತಾರ್‌ನ ದೋಹಾದಲ್ಲಿ ಇರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಆಚರಿಸಲಾಯಿತು. ಗಾಂಧೀಜಿ ಅವರ ಸ್ಮರಣಾರ್ಥ ಕ್ವಿಜ್ ಮಾಸ್ಟರ್ ಶಫ್ಕತ್ ನಬಿ ಅವರು ನಡೆಸಿ ಕೊಟ್ಟ ರಸ ಪ್ರಶ್ನೆ 'ಸೆಲೆಬ್ರೇಟಿಂಗ್ ಗಾಂಧಿ' ಕಾರ್ಯಕ್ರಮವು ಆ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ನಾಲ್ಕು ತಂಡವು ಅಂತಿಮ ಹಂತ ತಲುಪಿದ್ದವು.
Vijaya Karnataka Web qatar doha



ಗಾಂಧಿ ಜಯಂತಿಯ ಮುನ್ನಾ ದಿನ 1 ಅಕ್ಟೋಬರ್ 2022 ರಂದು ಆಯೋಜಿಸಿದ ಪ್ರಬಂಧ ಲೇಖನದಲ್ಲಿ 150ಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದರು. ಅತಿ ಹೆಚ್ಚು ಅಂಕ ಗಳಿಸಿದ 8 ತಂಡಗಳನ್ನು ಸೆಮಿ - ಫೈನಲ್‌ಗೆ ಆಯ್ಕೆ ಮಾಡಲಾಯಿತು. ಫೈನಲ್‌ನಲ್ಲಿ ಭಾಗವಹಿಸಲು ಆಯ್ಕೆಯಾದ ನಾಲ್ಕು ತಂಡಗಳಿಗೆ ಎರಡು ಸೆಟ್‌ಗಳ ಸೆಮಿಫೈನಲ್‌ಗಳನ್ನು ನಡೆಸಲಾಯಿತು.

ಕತಾರ್‌ ಕರ್ನಾಟಕ ಸಂಘದಿಂದ ಒಳಾಂಗಣ ಕ್ರೀಡಾಕೂಟ: ಸಂಭ್ರಮ ತಂದ ಚೌಕಾಬಾರ, ಅಳುಗುಳಿಮಣೆ ಆಟಗಳು
ಅಕ್ಟೋಬರ್ 2 ರಂದು ಸಂಜೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಕತಾರ್‌ನ ಭಾರತದ ರಾಯಭಾರಿ ಡಾ ದೀಪಕ್ ಮಿತ್ತಲ್, ಮೇಡಂ ರಾಯಭಾರಿ ಡಾ. ಅಲ್ಪನಾ ಮಿತ್ತಲ್, ಮೊದಲನೇ ಕಾರ್ಯದರ್ಶಿ ಶ್ರೀ ಸಚಿನ್ ದಿನಕರ್ ಸಕ್ಪಾಲ್, ರಕ್ಷಣಾ ಅಟ್ಯಾಚೆ ಶ್ರೀ ಮೋಹನ್ ಅಟ್ಲಾ ಸೇರಿದಂತೆ ಇತರ ಗಣ್ಯರು ಹಾಜರಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಶ್ರೀ. ಪಿ. ಎನ್. ಬಾಬುರಾಜನ್, ಐ.ಸಿ.ಬಿ.ಎಫ್.ನಿಂದ ಶ್ರೀ. ವಿನೋದ್ ನಾಯರ್ ಮತ್ತು ಐ.ಬಿ.ಪಿ.ಸಿ.ಯಿಂದ ಶ್ರೀ. ಜಾಫರ್ ಸಾದಿಕ್ ಹಾಗೂ ಅನೇಕ ಸಮುದಾಯದ ಮುಖಂಡರು ಸಭಿಕರಲ್ಲಿದ್ದರು.


ಡಾ ದೀಪಕ್ ಮಿತ್ತಲ್ ಮತ್ತು ಇತರ ಗಣ್ಯರು ಮಹಾತ್ಮ ಗಾಂಧೀಜಿಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ ದೀಪಕ್ ಮಿತ್ತಲ್ ಅವರು, ಮಹಾತ್ಮ ಮತ್ತು ಅವರ ತತ್ವಗಳನ್ನು ಸ್ಮರಿಸುತ್ತಾ, ಗಾಂಧೀಜಿ ಅವರ ತತ್ವಗಳು ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನುಸರಿಸಲಾಗುತ್ತದೆ ಎಂದು ಸಭೆಗೆ ತಿಳಿಸಿದರು.

Engineers Day | ಅಭಿಯಂತರ ದಿನಾಚರಣೆ ಆಚರಿಸಿದ ಕತಾರ್‌ನ ಕರ್ನಾಟಕ ಸಂಘ
ಬಳಿಕ ರಸಪ್ರಶ್ನೆ ಫೈನಲ್‌ನ ವಿಜೇತರು ಶ್ರೀ ಹುಸೇನ್ ಅಬ್ದುಲ್ ಕಧೀರ್ ಮತ್ತು ಶ್ರೀ ಮೊಹಮ್ಮದ್ ಆತೀಫ್, ಮತ್ತು ರನ್ನರ್ ಅಪ್ ಶಿಂಜ್ ಲೀಲಾ ಮತ್ತು ಶ್ರೀಮತಿ ಸ್ವಪ್ನಾ ಉನ್ನಿ ಅವರಿಗೆ ರಾಯಭಾರಿಗಳು ಫಲಕವನ್ನು ನೀಡಿದರು.


ಭಾರತೀಯ ಸಾಂಸ್ಕೃತಿಕ ಕೇಂದ್ರದ ಪರವಾಗಿ ಉಪಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿ ಸದಸ್ಯರು ಶ್ರೀಮತಿ ಕಮಲಾ ಠಾಕೂರ್ ಅವರು ಸಭೆಗೆ ಧನ್ಯವಾದಗಳನ್ನು ಪ್ರಸ್ತಾಪಿಸಿದರು. ಶ್ರೀಮತಿ ಸಾಹಿತ್ಯ ಜ್ಯೋತ್ಸ್ನಾ ಅವರು ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿಕೊಟ್ಟರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ