ಆ್ಯಪ್ನಗರ

ಐರ್ಲೆಂಡ್‌ನಲ್ಲಿರುವ ಕನ್ನಡಿಗರ ಮಕ್ಕಳಿಗೆ ಸ್ವಾತಂತ್ರ್ಯದ ಮಹತ್ವ ತಿಳಿಸಿದ ಬಂಟ್ವಾಳದ ಚಿತ್ರ ಕಲಾವಿದ

ಸ್ವಾತಂತ್ರ್ಯ ದಿನದ ಕುರಿತು ಐರ್ಲೆಂಡ್ ಕನ್ನಡಿಗರ ಮಕ್ಕಳಿಗೆ ವರ್ಚುವಲ್ ಮೂಲಕ ಪಾಠ ಮಾಡಲಾಗಿದ್ದು, ಬಂಟ್ವಾಳದ ಪ್ರಸಿದ್ಧ ಚಿತ್ರ ಕಲಾವಿದ ಶಿವಾನಂದ ಉಳಿ ಅವರು, ತಾವೇ ಬಿಡಿಸಿದ ಚಿತ್ರಗಳನ್ನು ವಿವರಿಸುವ ಮೂಲಕ ಹೊರನಾಡಿನ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಸ್ವಾತಂತ್ರ್ಯ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿದರು.

Vijaya Karnataka Web 21 Aug 2021, 2:34 pm
ಬೆಂಗಳೂರು: ಐರ್ಲೆಂಡ್‌ನಲ್ಲಿರುವ ಕನ್ನಡಿಗರು ತಮ್ಮ ಮಕ್ಕಳಿಗಾಗಿ ಆನ್‌ಲೈನ್‌ನಲ್ಲಿ ಆನಿಮೇಷನ್‌ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.
Vijaya Karnataka Web ireland kannadigas


ಬಂಟ್ವಾಳದ ಪ್ರಸಿದ್ಧ ಚಿತ್ರ ಕಲಾವಿದ ಶಿವಾನಂದ ಉಳಿ ಅವರು, ತಾವೇ ಬಿಡಿಸಿದ ಚಿತ್ರಗಳನ್ನು ವಿವರಿಸುವ ಮೂಲಕ ಹೊರನಾಡಿನ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಸ್ವಾತಂತ್ರ್ಯ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿದರು. ಸ್ವಾತಂತ್ರ್ಯ ದಿನದ ಕುರಿತು ಐರ್ಲೆಂಡ್ ಕನ್ನಡಿಗರ ಮಕ್ಕಳಿಗೆ ವರ್ಚುವಲ್ ಮೂಲಕ ಪಾಠ ಮಾಡಲಾಗಿದ್ದು, ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದ ಸ್ವಾತಂತ್ರ್ಯ ಹೋರಾಟ, ಬಲಿದಾನ, ಸದ್ಯದ ಪರಿಸ್ಥಿತಿಯಲ್ಲಿ ಯೋಧರ ಹೋರಾಟ, ತಾಯಿನಾಡಿನ ಬಗ್ಗೆ ಇರಬೇಕಾದ ಗೌರವದ ಬಗ್ಗೆ ತಿಳಿದುಕೊಂಡರು
ಹಿಂದೂ ಮುಸ್ಲಿಂ ಯುವಕ-ಯುವತಿ ಜತೆಗೆ ಪ್ರಯಾಣಿಸ್ತಿದ್ದಾರೆಂದು ತಪ್ಪು ತಿಳಿದು ಬಜರಂಗ ದಳದಿಂದ ಬಸ್‌ಗೆ ದಾಳಿ!
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಚಿತ್ರ ಕಲಾವಿದ ಶಿವಾನಂದ್, ‘ಭಾರತ ಮತ್ತು ಐರ್ಲೆಂಡ್ ನಡುವೆ ನಾಲ್ಕು ಗಂಟೆಗಳ ಸಮಯದ ವ್ಯತ್ಯಾಸವಿದೆ. ಆ ಸಮಯ ತಿಳಿದುಕೊಂಡು ಮಕ್ಕಳಿಗೆ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆ ಬಳಸಿ ಅರ್ಥವಾಗುವ ರೀತಿ ಪಾಠ ಹೇಳಿ ಕೊಟ್ಟಿದ್ದೇನೆ. ಮಕ್ಕಳು ಸಂತಸದಿಂದ ಕ್ಲಾಸ್‌ನಲ್ಲಿ ಭಾಗಿಯಾದರು ಎಂದು ತಿಳಿಸಿದರು.
ಪಶ್ಚಿಮಘಟ್ಟದಲ್ಲಿ ಮಿನಿ ಡ್ಯಾಂ ಆತಂಕ; ಎತ್ತಿನಹೊಳೆ ಬಳಿಕ ಮತ್ತೊಮ್ಮೆ ಬೃಹತ್ ಪರಿಸರ ನಾಶದ ಭೀತಿ!
ಸಾಮಾನ್ಯವಾಗಿ ಹೊರದೇಶದಲ್ಲಿರುವ ಕನ್ನಡಿಗರ ಮಕ್ಕಳು ಸಹಜವಾಗಿಯೇ ಹೊರಗಿನವರ ಜೊತೆಗಿನ ಸಂವಹನಕ್ಕಾಗಿ ಇಂಗ್ಲಿಷ್‌ ಹೆಚ್ಚಾಗಿ ಬಳಸುತ್ತಿದ್ದು, ಇದರಿಂದ ಕನ್ನಡದ ಜೊತೆಗಿನ ನಂಟು ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ಕನ್ನಡ ಕಲಿಸಲು ಡಬ್ಲಿನ್ ಸಿಟಿ ಸೇರಿದಂತೆ ಮೂರು ಕಡೆ ಲೈಬ್ರರಿಗಳಲ್ಲಿ ಕನ್ನಡ ತರಗತಿ ಮೂರು ವರ್ಷದ ಹಿಂದೆ ಆರಂಭಿಸಲಾಗಿದೆ. ಕೊರೊನಾ ನಂತರ ಆನ್ಲೈನ್ ಮೂಲಕ ತಿಂಗಳಿಗೆ ನಾಲ್ಕು ತರಗತಿಗಳನ್ನು ಒಂದು ಗಂಟೆಯ ಕಾಲ ನಡೆಸಲಾಗುತ್ತಿದೆ.


ಕನ್ನಡ ಕಲಿ ಐರ್ಲೆಂಡ್ ತಂಡ ತಮ್ಮ ತಾಯ್ನಾಡು, ನುಡಿ, ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸುವ ಧ್ಯೇಯವನ್ನು ಹೊಂದಿದ್ದು, ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕನ್ನಡ ಕಲಿಸಲು ಬೇಕಾದ ಪಠ್ಯಕ್ರಮ ಹಾಗು ಸಾಮಗ್ರಿಗಳನ್ನು ಕನ್ನಡ ಕಲಿ ಒದಗಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ