ಸಿಂಗಾಪುರ: ಸಿಂಗಾಪುರದ ಅನಿವಾಸಿ ಕನ್ನಡಿಗರ ಸಂಘಟನೆ 'ಕನ್ನಡ ಸಂಘ ಸಿಂಗಾಪುರ' ರಚನೆಯಾಗಿ ಈ ವರ್ಷ 25 ವಸಂತಗಳು ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಳ್ಳಿ ಅಂಚು ಎಂಬ ಹೆಸರಿನೊಂದಿಗೆ, ಸಾಮಿಪ್ಯಕ್ಯೆ ನವೀನತೆಯ ಹುರುಪು ಎಂಬ ಘೋಷವಾಕ್ಯದೊಂದಿಗೆ ಫೆಬ್ರವರಿ 20 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಘದ ನಿವೀಕೃತ ವೆಬ್ಸೈಟ್ ಅಂದು ಲೋಕಾರ್ಪಣೆಗೊಳ್ಳಲಿದೆ. ಸಂಘದ ಸಿಂಗಾರ ನಿಯಾತಕಾಲಿಕೆಯ ವಿಶೇಷ ಸಂಚಿಕೆಯನ್ನೂ ಅಂದು ಅನಾವರಣಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಪ್ರಭ ಸ್ಟುಡಿಯೋ ಕಲಾ ವೃಂದರಿಂದ 'ಸತ್ವ ಪರೀಕ್ಷೆ' ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನ ಇದೆ. ಈ ಪ್ರದರ್ಶನದಲ್ಲಿ ಹಳೆಮಕ್ಕಿ ರಾಮ ಭಾಗವತರಾಗಿದ್ದು, ಮುಮ್ಮೆಳದಲ್ಲಿ ಯಕ್ಷಗಾನ ಮೇರು ಕಲಾವಿದ ಪದ್ಮಶ್ರಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮೊಮ್ಮಗ ಕಾರ್ತಿಕ್ ಚಿಟ್ಟಾಣಿ ಹಾಗೂ ಉದಯ ಕಡಬಾಳ ಸೇರಿ ಹಲವು ಮಂದಿ ಕಲಾವಿಧರು ಭಾಗವಹಿಸಲಿದ್ದಾರೆ.
ಕೊರೊನಾದಿಂದಾಗಿ ಸಮಾರಂಭ ವರ್ಚ್ಯುವಲ್ ಆಗಿ ನಡೆಯಲಿದ್ದು, ಫೆಬ್ರವರಿ 20 ರಂದು ಸಿಂಗಾಪುರ ಸಮಯ ಸಂಜೆ ಐದು ಗಂಟೆಗೆ ಯೂಟ್ಯೂಬ್ನಲ್ಲಿ ನೇರ ಪ್ರಸಾರ ಇರಲಿದೆ ಎಂದು ತಿಳಿಸಿದ್ದಾರೆ.
ಉಚಿತ ಕಾರ್ಯಕ್ರಮ ಇದಾಗಿರಲಿದ್ದು, ಸಂಘದ ಸದಸ್ಯರು ನೋಂದಾಯಿಸಿಕೊಳ್ಳಬೇಕು ಎಂದು ಸಂಘಟಕರು ಕೋರಿದ್ದಾರೆ.
1996 ರಲ್ಲಿ ಅಧೀಕೃತವಾಗಿ ಸ್ಥಾಪನೆಗೊಂಡ ಕನ್ನಡ ಸಂಘ ಸಿಂಗಪುರ,ಈ ವರ್ಷ ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
ಸಂಘದ ನಿವೀಕೃತ ವೆಬ್ಸೈಟ್ ಅಂದು ಲೋಕಾರ್ಪಣೆಗೊಳ್ಳಲಿದೆ. ಸಂಘದ ಸಿಂಗಾರ ನಿಯಾತಕಾಲಿಕೆಯ ವಿಶೇಷ ಸಂಚಿಕೆಯನ್ನೂ ಅಂದು ಅನಾವರಣಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಪ್ರಭ ಸ್ಟುಡಿಯೋ ಕಲಾ ವೃಂದರಿಂದ 'ಸತ್ವ ಪರೀಕ್ಷೆ' ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನ ಇದೆ. ಈ ಪ್ರದರ್ಶನದಲ್ಲಿ ಹಳೆಮಕ್ಕಿ ರಾಮ ಭಾಗವತರಾಗಿದ್ದು, ಮುಮ್ಮೆಳದಲ್ಲಿ ಯಕ್ಷಗಾನ ಮೇರು ಕಲಾವಿದ ಪದ್ಮಶ್ರಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮೊಮ್ಮಗ ಕಾರ್ತಿಕ್ ಚಿಟ್ಟಾಣಿ ಹಾಗೂ ಉದಯ ಕಡಬಾಳ ಸೇರಿ ಹಲವು ಮಂದಿ ಕಲಾವಿಧರು ಭಾಗವಹಿಸಲಿದ್ದಾರೆ.
ಕೊರೊನಾದಿಂದಾಗಿ ಸಮಾರಂಭ ವರ್ಚ್ಯುವಲ್ ಆಗಿ ನಡೆಯಲಿದ್ದು, ಫೆಬ್ರವರಿ 20 ರಂದು ಸಿಂಗಾಪುರ ಸಮಯ ಸಂಜೆ ಐದು ಗಂಟೆಗೆ ಯೂಟ್ಯೂಬ್ನಲ್ಲಿ ನೇರ ಪ್ರಸಾರ ಇರಲಿದೆ ಎಂದು ತಿಳಿಸಿದ್ದಾರೆ.
ಉಚಿತ ಕಾರ್ಯಕ್ರಮ ಇದಾಗಿರಲಿದ್ದು, ಸಂಘದ ಸದಸ್ಯರು ನೋಂದಾಯಿಸಿಕೊಳ್ಳಬೇಕು ಎಂದು ಸಂಘಟಕರು ಕೋರಿದ್ದಾರೆ.
1996 ರಲ್ಲಿ ಅಧೀಕೃತವಾಗಿ ಸ್ಥಾಪನೆಗೊಂಡ ಕನ್ನಡ ಸಂಘ ಸಿಂಗಪುರ,ಈ ವರ್ಷ ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದೆ.