ದೋಹಾ: ಕೊರೊನಾ ಮಹಾಮಾರಿಯಿಂದಾಗಿ ಸಿಲುಕಿಕೊಂಡಿರುವ ಭಾರತೀಯರನ್ನು ತವರಿಗೆ ಕರೆತರುವ ಕಾರ್ಯಾಚರಣೆ ಆರಂಭವಾಗಿದೆ.
ಈಗ ವಿದೇಶದಲ್ಲಿರುವ ಭಾರತೀಯ ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರತವಾಗಿವೆ. ಕತಾರಿನ ಭಾರತೀಯ ರಾಯಭಾರಿ ಕಾರ್ಯಾಲಯದಡಿಯಲ್ಲಿ ಕಾರ್ಯನಿರತವಾಗಿರುವ ’ಭಾರತೀಯ ಸಮುದಾಯ ಹಿತೈಶಿ ವೇದಿಕೆ’ (ಐ.ಸಿ.ಬಿ.ಎಫ್) ಸಂಸ್ಥೆಯು ಇಂತಹ ನಿರಾಶ್ರಿತರನ್ನು ಹುಡುಕಿ ಅವರಿಗೆ ಸಹಾಯ ಹಸ್ತ ನೀಡುತ್ತಿದೆ.
ಕನ್ನಡಿಗರಾದ ಮಹೇಶ್ ಗೌಡ, ಸುಬ್ರಮಣ್ಯ ಹೆಬ್ಬಾಗಿಲು, ಇವರಿಬ್ಬರು ಸ್ವತಃ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿದಿನ ಸರಿ ಸುಮಾರು 500 ರಿಂದ 700 ಜನರಿಗೆ ಉಟೋಪಚಾರದ ವ್ಯವಸ್ಥೆಯನ್ನು ಸತತವಾಗಿ ನಾಲ್ಕು ವಾರಗಳಿಂದ ಮಾಡುತ್ತಿದ್ದಾರೆ.
'ಕತಾರಾ' ಸಂಸ್ಥೆ, ಐ.ಸಿ.ಬಿ.ಫ್, ಕಾರ್ಯಾಲಯದಲ್ಲಿರುವ, ಮತ್ತಿತ್ತರ ದಾನಿಗಳಿಂದ, ಆಹಾರ ಸಾಮಗ್ರಿಗಳು, ತರಕಾರಿ, ಸೊಪ್ಪು, ಹಣ್ಣುಗಳನ್ನು ಸ್ವೀಕರಿಸಿ, ಅದನ್ನು ಅವಶ್ಯಕತೆ ಇರುವ ಸಂತ್ರಸ್ತರಿಗೆ ಹಂಚಲಾಗುತ್ತಿದೆ.
ಭಾರತೀಯ ರಾಯಭಾರಿ ಕಚೇರಿಗೆ ಹಾಗು ಐ.ಸಿ.ಬಿ.ಎಫ್ ಕೇಂದ್ರಕ್ಕೆ ದಿನವು ನೂರಾರು ಕರೆಗಳು ಬರುತ್ತಿವೆ. ಮನೆಯಲ್ಲಿ ಇರುವವರು, ಕೆಲಸ ಕಳೆದುಕೊಂಡಿರುವವರು, ಸಂಬಳ ಇಲ್ಲದಿರುವವರು, ಹೊಟ್ಟೆ ಪಾಡಿಗೆ ನರಳುತ್ತಿರುವವರು, ಬಾಡಿಗೆ ಕಟ್ಟಲು ಹಣವಿಲ್ಲದಿರುವವರು, ಖಾಯಿಲೆಯಿಂದ ಬಳಲುತ್ತಿರುವವರು, ಮಾತೃಭೂಮಿಗೆ ಹಿಂತಿರುಗಲು ಹಾತೊರೆಯಿತ್ತುರುವವರು, ಹೀಗೆ ಅನೇಕಾನೇಕರು ಸಹಾಯವನ್ನು ಕೋರಿ ಕರೆ ಮಾಡುತ್ತಿದ್ದಾರೆ.
ಕೇವಲ ಭಾರತೀಯರಿಗೆ ಮಾತ್ರವಲ್ಲದೆ ನೇಪಾಳ, ಬಾಂಗ್ಲದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನ ದೇಶದವರಿಗೂ ಊಟದ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಗಮನಾರ್ಹ.
ಕತಾರಿನಲ್ಲಿ ಕೊರೊನಾದಿಂದ ನಿರಾಶ್ರಿತರಾಗಿ ಯಾರಾದರೂ ಇದ್ದಲ್ಲಿ, ಪ್ರತ್ಯೇಕವಾಗಿ ಕನ್ನಡಿಗರಿಗೆ ಸೂಕ್ತ ಸಹಾಯ ಅಗತ್ಯವಿದ್ದಲ್ಲಿ, ನೆರವಿಗೆ ಸಂಪರ್ಕಿಸಬೇಕಾದ ವಿವರಗಳನ್ನು ನೀಡಲಾಗಿದೆ.
ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಕರ್ನಾಟಕದ ಪ್ರತಿನಿಧಿಗಳು (ICBF)
ಸುಬ್ರಮಣ್ಯ ಹೆಬ್ಬಾಗಿಲು: +974 5564 1025
ಮಹೇಶ್ ಗೌಡ +974 5534 2708
ಭಾರತೀಯ ರಾಯಭಾರಿ ಕಾರ್ಯಾಲಯ, ’ಕೋವಿಡ್ 2019 24 x 7 ಸಹಾಯವಾಣಿ
ಸ್ಥಿರ ಸಂಖ್ಯೆ: (+974 4425 5747)
ಸಂಚಾರಿ ದೂರವಾಣಿ ಹಾಗೂ ವಾಟ್ಸಾಪ್: +974 5566 7569
ಸಂಚಾರಿ ದೂರವಾಣಿ ಹಾಗೂ ವಾಟ್ಸಾಪ್ : +974 5564 7502
ದೋಹಾ ಸಹಾಯವಾಣಿ: 44255747
ವಾಟ್ಸಾಪ್: 55667569, 55647502
ಇ-ಮೇಲ್: covid19dohahelpline@gmail.com,
ಐಸಿಬಿಎಫ್ ಸಹಾಯವಾಣಿ: 50122010, 77384933
ರಾಯಭಾರಿ ಕಚೇರಿ (ಪಾಸ್ಪೋರ್ಟ್ ನವೀಕರಣಕ್ಕೆ): Cons.doha@mea.gov.in
ಭಾರತೀಯ ರಾಯಭಾರಿ ಕಾರ್ಯಾಲಯ, ವಾಣಿಜ್ಯ ಸಂಬಂಧಿತ ಸೇವೆಗಳು
+974 6698 7205
+974 6693 1380
+974 6685 1998
ಈಗ ವಿದೇಶದಲ್ಲಿರುವ ಭಾರತೀಯ ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರತವಾಗಿವೆ. ಕತಾರಿನ ಭಾರತೀಯ ರಾಯಭಾರಿ ಕಾರ್ಯಾಲಯದಡಿಯಲ್ಲಿ ಕಾರ್ಯನಿರತವಾಗಿರುವ ’ಭಾರತೀಯ ಸಮುದಾಯ ಹಿತೈಶಿ ವೇದಿಕೆ’ (ಐ.ಸಿ.ಬಿ.ಎಫ್) ಸಂಸ್ಥೆಯು ಇಂತಹ ನಿರಾಶ್ರಿತರನ್ನು ಹುಡುಕಿ ಅವರಿಗೆ ಸಹಾಯ ಹಸ್ತ ನೀಡುತ್ತಿದೆ.
ಕನ್ನಡಿಗರಾದ ಮಹೇಶ್ ಗೌಡ, ಸುಬ್ರಮಣ್ಯ ಹೆಬ್ಬಾಗಿಲು, ಇವರಿಬ್ಬರು ಸ್ವತಃ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿದಿನ ಸರಿ ಸುಮಾರು 500 ರಿಂದ 700 ಜನರಿಗೆ ಉಟೋಪಚಾರದ ವ್ಯವಸ್ಥೆಯನ್ನು ಸತತವಾಗಿ ನಾಲ್ಕು ವಾರಗಳಿಂದ ಮಾಡುತ್ತಿದ್ದಾರೆ.
'ಕತಾರಾ' ಸಂಸ್ಥೆ, ಐ.ಸಿ.ಬಿ.ಫ್, ಕಾರ್ಯಾಲಯದಲ್ಲಿರುವ, ಮತ್ತಿತ್ತರ ದಾನಿಗಳಿಂದ, ಆಹಾರ ಸಾಮಗ್ರಿಗಳು, ತರಕಾರಿ, ಸೊಪ್ಪು, ಹಣ್ಣುಗಳನ್ನು ಸ್ವೀಕರಿಸಿ, ಅದನ್ನು ಅವಶ್ಯಕತೆ ಇರುವ ಸಂತ್ರಸ್ತರಿಗೆ ಹಂಚಲಾಗುತ್ತಿದೆ.
ಭಾರತೀಯ ರಾಯಭಾರಿ ಕಚೇರಿಗೆ ಹಾಗು ಐ.ಸಿ.ಬಿ.ಎಫ್ ಕೇಂದ್ರಕ್ಕೆ ದಿನವು ನೂರಾರು ಕರೆಗಳು ಬರುತ್ತಿವೆ. ಮನೆಯಲ್ಲಿ ಇರುವವರು, ಕೆಲಸ ಕಳೆದುಕೊಂಡಿರುವವರು, ಸಂಬಳ ಇಲ್ಲದಿರುವವರು, ಹೊಟ್ಟೆ ಪಾಡಿಗೆ ನರಳುತ್ತಿರುವವರು, ಬಾಡಿಗೆ ಕಟ್ಟಲು ಹಣವಿಲ್ಲದಿರುವವರು, ಖಾಯಿಲೆಯಿಂದ ಬಳಲುತ್ತಿರುವವರು, ಮಾತೃಭೂಮಿಗೆ ಹಿಂತಿರುಗಲು ಹಾತೊರೆಯಿತ್ತುರುವವರು, ಹೀಗೆ ಅನೇಕಾನೇಕರು ಸಹಾಯವನ್ನು ಕೋರಿ ಕರೆ ಮಾಡುತ್ತಿದ್ದಾರೆ.
ಕೇವಲ ಭಾರತೀಯರಿಗೆ ಮಾತ್ರವಲ್ಲದೆ ನೇಪಾಳ, ಬಾಂಗ್ಲದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನ ದೇಶದವರಿಗೂ ಊಟದ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಗಮನಾರ್ಹ.
ಕತಾರಿನಲ್ಲಿ ಕೊರೊನಾದಿಂದ ನಿರಾಶ್ರಿತರಾಗಿ ಯಾರಾದರೂ ಇದ್ದಲ್ಲಿ, ಪ್ರತ್ಯೇಕವಾಗಿ ಕನ್ನಡಿಗರಿಗೆ ಸೂಕ್ತ ಸಹಾಯ ಅಗತ್ಯವಿದ್ದಲ್ಲಿ, ನೆರವಿಗೆ ಸಂಪರ್ಕಿಸಬೇಕಾದ ವಿವರಗಳನ್ನು ನೀಡಲಾಗಿದೆ.
ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಕರ್ನಾಟಕದ ಪ್ರತಿನಿಧಿಗಳು (ICBF)
ಸುಬ್ರಮಣ್ಯ ಹೆಬ್ಬಾಗಿಲು: +974 5564 1025
ಮಹೇಶ್ ಗೌಡ +974 5534 2708
ಭಾರತೀಯ ರಾಯಭಾರಿ ಕಾರ್ಯಾಲಯ, ’ಕೋವಿಡ್ 2019 24 x 7 ಸಹಾಯವಾಣಿ
ಸ್ಥಿರ ಸಂಖ್ಯೆ: (+974 4425 5747)
ಸಂಚಾರಿ ದೂರವಾಣಿ ಹಾಗೂ ವಾಟ್ಸಾಪ್: +974 5566 7569
ಸಂಚಾರಿ ದೂರವಾಣಿ ಹಾಗೂ ವಾಟ್ಸಾಪ್ : +974 5564 7502
ದೋಹಾ ಸಹಾಯವಾಣಿ: 44255747
ವಾಟ್ಸಾಪ್: 55667569, 55647502
ಇ-ಮೇಲ್: covid19dohahelpline@gmail.com,
ಐಸಿಬಿಎಫ್ ಸಹಾಯವಾಣಿ: 50122010, 77384933
ರಾಯಭಾರಿ ಕಚೇರಿ (ಪಾಸ್ಪೋರ್ಟ್ ನವೀಕರಣಕ್ಕೆ): Cons.doha@mea.gov.in
ಭಾರತೀಯ ರಾಯಭಾರಿ ಕಾರ್ಯಾಲಯ, ವಾಣಿಜ್ಯ ಸಂಬಂಧಿತ ಸೇವೆಗಳು
+974 6698 7205
+974 6693 1380
+974 6685 1998