ಆ್ಯಪ್ನಗರ

‘ಕರುನಾಡಿಗೆ ಆಮ್ಲಜನಕ’ ಹೆಸರಿನಲ್ಲಿ ಆಕ್ಸಿಜನ್‌ ಪೂರೈಕೆಗೆ ಮುಂದಾದ ಹೊರನಾಡಿನ ನಾವಿಕ ಸಂಸ್ಥೆ

ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯ ಸಹಯೋಗದಿಂದ ನಾವಿಕ ಸಂಸ್ಥೆ ಈ ಸಮಾಜಮುಖಿ ಕಾರ್ಯವನ್ನು ಪ್ರಾರಂಭಿಸಿದ್ದು, ಈ ಯೋಜನೆಯ ಮೂಲಕ ಕರ್ನಾಟಕದ ಆಸ್ಪತ್ರೆಗಳಿಗೆ ಆಕ್ಸಿಜನ್ ಕಳುಹಿಸಲು ನಿರ್ಧರಿಸಲಾಗಿದೆ. ದಾನ ಮಾಡುವ ಪ್ರತಿಯೊಂದು ಆಕ್ಸಿಜನ್ ಸಿಲಿಂಡರ್‌ಗೆ ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯವರು ಇನ್ನೊಂದು ಸಿಲಿಂಡರ್ ಅನ್ನು ಉಚಿತವಾಗಿ ಮ್ಯಾಚ್ ಮಾಡಲಿದ್ದಾರೆ ಎಂದು ನಾವಿಕ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ ತಿಳಿಸಿದ್ದಾರೆ.

Vijaya Karnataka Web 8 May 2021, 10:55 am
ಬೆಂಕಿ ಬಸಣ್ಣ
Vijaya Karnataka Web Navika1

ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲೂ ಕೂಡ ಪರಿಸ್ಥಿತಿ ಮಿತಿ ಮೀರುವ ಹಂತ ತಲುಪುತ್ತಿದೆ. ಕೊರೊನಾ ಎರಡನೇ ಅಲೆಯಿಂದ ದೇಶ ತತ್ತರಿಸಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊರನಾಡ ಕನ್ನಡಿಗರ ಸಂಘಟನೆಯಾದ ನಾವಿಕ (ನಾವು ವಿಶ್ವ ಕನ್ನಡಿಗರು ) ಸಂಸ್ಥೆಯು ‘ಕರುನಾಡಿಗೆ ಆಮ್ಲಜನಕ’ ಎಂಬ ಹೆಸರಿನಲ್ಲಿ ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆಗೆ ಮುಂದಾಗಿದೆ.
ಮೇ 07ರಂದು ಹೊರನಾಡ ಕನ್ನಡ ಕಲಿಕಾ ಕೇಂದ್ರ ಶೈಕ್ಷಣಿಕ ಸಮಾರೋಪ ಸಮಾರಂಭ
ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯ ಸಹಯೋಗದಿಂದ ನಾವಿಕ ಸಂಸ್ಥೆ ಈ ಸಮಾಜಮುಖಿ ಕಾರ್ಯವನ್ನು ಪ್ರಾರಂಭಿಸಿದ್ದು, ಈ ಯೋಜನೆಯ ಮೂಲಕ ಕರ್ನಾಟಕದ ಆಸ್ಪತ್ರೆಗಳಿಗೆ ಆಕ್ಸಿಜನ್ ಕಳುಹಿಸಲು ನಿರ್ಧರಿಸಲಾಗಿದೆ. ದಾನ ಮಾಡುವ ಪ್ರತಿಯೊಂದು ಆಕ್ಸಿಜನ್ ಸಿಲಿಂಡರ್‌ಗೆ ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯವರು ಇನ್ನೊಂದು ಸಿಲಿಂಡರ್ ಅನ್ನು ಉಚಿತವಾಗಿ ಮ್ಯಾಚ್ ಮಾಡಲಿದ್ದಾರೆ ಎಂದು ನಾವಿಕ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ ತಿಳಿಸಿದ್ದಾರೆ.

ಇದರ ಜೊತೆಗೆ, ನಾವಿಕ ಸಂಸ್ಥೆಯು ಕರ್ನಾಟಕಕ್ಕೆ 30,000 ಪಿಪಿಇ (PPE) ಕಿಟ್ಸ್‌ಗಳನ್ನು ಮತ್ತು 800 ಬಾಕ್ಸ್‌ ಫೇಸ್ ಶಿಲ್ಡ್, KN95 ಮಾಸ್ಕ್, ಇಸೋಲೇಷನ್ ಗೌನ್ಸ್, ಥರ್ಮಾಮೀಟರ್, ಪೋಸ್ಟ್‌ ಮಾರ್ಟಮ್ ಬಾಗ್ಸ್, ಹ್ಯಾಂಡ್ ಸ್ಯಾನಿಟೈಸರ್, ಮುಂತಾದ ಸಾಮಗ್ರಿಗಳನ್ನು ಕರ್ನಾಟಕಕ್ಕೆ ಶೀಘ್ರವೇ ಕಳುಹಿಸುವ ಯೋಜನೆಯನ್ನು ಹಾಕಿಕೊಂಡಿದೆ. ಅಲ್ಲದೇ ದಾನಿಗಳು ನಾವಿಕ ( www.navika.org) ವೆಬ್ಸೈಟ್‌ನಲ್ಲಿ ದಾನ ಮಾಡಬೇಕು ಎಂದು ನಾವಿಕ ಸಂಸ್ಥೆ ವಿನಂತಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ