ಆ್ಯಪ್ನಗರ

ಕತಾರ್ ಉತ್ತರ ಕರ್ನಾಟಕ ಬಳಗದ ಚೊಚ್ಚಲ ವರ್ಷದ ಸಂಭ್ರಮ

ಕತಾರ್‌ನಲ್ಲಿರುವ ಉತ್ತರ ಕರ್ನಾಟಕ ಬಳಗಕ್ಕೆ ಈಗ ಚೊಚ್ಚಲ ವರ್ಷದ ಸಂಭ್ರಮ. ಇದನ್ನು ಅದ್ದೂರಿಯಾಗಿ ಆಯೋಜಿಸಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Vijaya Karnataka Web 8 Dec 2019, 2:02 pm
ಉತ್ತರ ಕರ್ನಾಟಕ ಬಳಗದ ಚೊಚ್ಚಲ ವರ್ಷದ ಸಂಭ್ರಮ ಮನೆ ಮಾಡಿದೆ. ಇದನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.
Vijaya Karnataka Web ಉತ್ತರ ಕರ್ನಾಟಕ ಬಳಗ ಕತಾರ್
ಉತ್ತರ ಕರ್ನಾಟಕ ಬಳಗ ಕತಾರ್


ಈ ಹರ್ಷಕ್ಕೆ ಎಲ್ಲರಿಗೂ ಸ್ವಾಗತವನ್ನು ಕೋರಲಾಗಿದೆ. ಈ ಸಡಗರವನ್ನು ಎಲ್ಲರೊಂದಿಗೆ ಸೇರಿ ಆನಂದಿಸುವ ಸಲುವಾಗಿ ಕರ್ನಾಟಕ ಹೆಸರಾಂತ ಜಾನಪದ ಕವಿ ಜ್ಞಾನಪೀಠ ವಿಜೇತ ಡಾ.ಚಂದ್ರಶೇಖರ ಕಂಬಾರ, ಪ್ರಸಿದ್ಧ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ, ಕನ್ನಡ ಚಿತ್ರ ನಟ, ರಂಗಭೂಮಿ ಕಲಾವಿದ ಯಶವಂತ್ ಸರದೇಶಪಾಂಡೆ, ಪ್ರಸಿದ್ಧ ಗಾಯಕಿ ನಾಗಚಂದ್ರಿಕಾ ಭಟ್, ನಿರೂಪಕ ಯೋಗೇಶ್ ಹಾಗೂ ನಿರ್ದೇಶಕರಾದ ಲೋಕನಾಥ ,ರಾಜಾರಾಮ ಎಲ್ಲರೂ ಕತಾರ್ ಕನ್ನಡಿಗರನ್ನು ರಂಜಿಸಲಿದ್ದಾರೆ.

ಸ್ಥಳೀಯ ಕಲಾವಿದರಿಂದ ನೃತ್ಯ, ಗಾಯನ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಚಂದ್ರಶೇಖರ ಕಂಬಾರ ಮುಖ್ಯ ಅತಿಥಿಗಳಾಗಿ ಕತಾರ್‌ಗೆ ಆಗಮಿಸುತ್ತಿರುವದು ಸಂತೋಷದ ವಿಷಯ.
ಕನ್ನಡದ ಖ್ಯಾತ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಭಾರತೀಯ ದೂತಾವಾಸ ಕಚೇರಿಯ ಪ್ರತಿನಿಧಿಯಾಗಿ ಧೀರಜ್ ಕುಮಾರ ಗೌರವಾನ್ವಿತ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ನಿರೂಪಕ ಯೋಗೇಶ್ ಐತಿಹಾಸಿಕ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ನಾಗಚಂದ್ರಿಕಾ ಭಟ್ ತಮ್ಮ ಗಾನಪ್ರತಿಭೆಯಿಂದ ಸುಮಧುರ ಹಾಡುಗಳಿಂದ ಎಲ್ಲರನ್ನು ರಂಜಿಸಲಿದ್ದಾರೆ.

ಶುಕ್ರವಾರ, ದಿನಾಂಕ 13 ಡಿಸೆಂಬರ್, ಸಾಯಂಕಾಲ 4.00ಕ್ಕೆ ಡಿಪಿಎಸ್ ನ್ಯೂ ಇಂಟರನ್ಯಾಷನಲ್ ಸ್ಕೂಲ್, ವುಕೈರ್ ಸಭಾ ಭವನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮರೆಯದಿರಿ. ನೋಡಿ, ಕೇಳಿ, ಆನಂದಿಸಿ ಎಂದು ಉತ್ತರ ಕನ್ನಡ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ