ಆ್ಯಪ್ನಗರ

ಕತಾರ್‌: ದೋಹಾದಲ್ಲಿ ಗುರುದೇವ್ ರವೀಂದ್ರನಾಥ ಟಾಗೋರ್ ಜನ್ಮದಿನಾಚರಣೆ

ಕತಾರ್‌ನ ದೋಹಾದಲ್ಲಿರುವ ಐಸಿಸಿ ವಿದ್ಯಾರ್ಥಿ ವೇದಿಕೆಯು 7ನೇ ಮೇ 2022 ರಂದು ಗುರುದೇವ್ “ರವೀಂದ್ರನಾಥ ಟ್ಯಾಗೋರ್ ಜಯಂತಿ”ಯನ್ನು “ಪ್ರೀತಿ ಮತ್ತು ಬುದ್ಧಿವಂತಿಕೆ” ವಿಷಯದೊಂದಿಗೆ ಆಚರಿಸಲಾಯಿತು.

Vijaya Karnataka Web 11 May 2022, 7:12 pm
ದೋಹಾ: ಭಾರತೀಯರು ಸಾಗರದಾಚೆ ನೆಲೆಸಿದ್ದರೂ ಇಲ್ಲಿನ ಸಾಧಕರ, ಗಣ್ಯರು, ಹೋರಾಟಗಾರರು ಹಾಗೂ ಪ್ರಾತಃ ಸ್ಮರಣೀಯರರನ್ನು ಸದಾ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅನಿವಾಸಿ ಭಾರತೀಯರು ತಪ್ಪದೆ ಇದನ್ನು ಆಚರಿಸುತ್ತಾರೆ.
Vijaya Karnataka Web ದೋಹಾ ಕನ್ನಡ ಸಂಘ
ದೋಹಾ ಕನ್ನಡ ಸಂಘ


ಇತ್ತೀಚೆಗೆ ಗುರುದೇವ್‌ ರವೀಂದ್ರನಾಥ್‌ ಟಾಗೋರ್ ಜನ್ಮದಿನವನ್ನು ಭಾರತದಾದ್ಯಂತ ಆಚರಿಸಲಾಯಿತು. ನಮ್ಮ ದೇಶದಲ್ಲಿ ಮಾತ್ರವಲ್ಲ. ಕತಾರ್‌ನ ದೋಹಾದಲ್ಲಿಯೂ ರವೀಂದ್ರನಾಥ್‌ ಟಾಗೋರ್‌ ಜನ್ಮದಿನ ಆಚರಿಸಲಾಯಿತು. ಶ್ರದ್ಧಾಭಕ್ತಿಗಳಿಂದ ಗುರುದೇವರ ಸ್ಮರಣೆ ಮಾಡಲಾಯಿತು.

ಕರ್ನಾಟಕದ NRI ಕಮಿಟಿಗೆ ಪುನರ್ ಚಾಲನೆ ನೀಡಿ: ಕೇಂದ್ರ ಸಚಿವರಿಗೆ ಕತಾರ್ ಕನ್ನಡಿಗರ ಮನವಿ

ಕತಾರ್‌ನ ದೋಹಾದಲ್ಲಿರುವ ಐಸಿಸಿ ವಿದ್ಯಾರ್ಥಿ ವೇದಿಕೆಯು 7 ನೇ ಮೇ 2022 ರಂದು ಗುರುದೇವ್ “ರವೀಂದ್ರನಾಥ ಟ್ಯಾಗೋರ್ ಜಯಂತಿ”ಯನ್ನು “ಪ್ರೀತಿ ಮತ್ತು ಬುದ್ಧಿವಂತಿಕೆ” ವಿಷಯದೊಂದಿಗೆ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿ ವೇದಿಕೆಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮ ಐಸಿಸಿಯಲ್ಲಿ ಆಯೋಜಿಸಲಾಗಿತ್ತು ಮತ್ತು ಮುಂಬೈ ಹಾಲ್ ಅನ್ನು ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು.

ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಮಲಾ ಠಾಕೂರ್ ಐಸಿಸಿ ಚಟುವಟಿಕೆ ಸಂಯೋಜಕ ಮತ್ತು ಶಿಕ್ಷಣದ ಮುಖ್ಯಸ್ಥರು ಪ್ರೇಕ್ಷಕರನ್ನು ಆಹ್ವಾನಿಸಿದರು. ಶ್ರೀಪ್ರೀತಿಕಾ ದುರೈರಾಜ್ ನಿರೂಪಣೆ ಮಾಡಿ ಇಡೀ ಕಾರ್ಯಕ್ರಮವನ್ನು ಮುನ್ನಡೆಸಿದರು. ವಿದ್ಯಾರ್ಥಿ ವೇದಿಕೆ ವತಿಯಿಂದ ಅನಂ ದುರ್ವೇಶ್ ಸ್ವಾಗತಿಸಿ ಮಾತನಾಡಿದರು.

ಗುರುದೇವ್‌ ರವೀಂದ್ರನಾಥ್‌ ಟಾಗೋರ್‌ ಕುರಿತು ಹಲವಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ಮಂಡಿಸಿದರು. ಟಾಗೋರ್ ಅವರು ರಚಿಸಿರುವ ಹಲವಾರು ಕವಿತೆ, ಸಂಕಲನಗಳು, ಕಥೆಗಳ ಬಗ್ಗೆ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲಾಯಿತು.

ಸಂಜೆಯ ಮುಖ್ಯ ಅತಿಥಿಗಳಾಗಿ ಐಸಿಬಿಎಫ್‌ ಅಧ್ಯಕ್ಷರಾದ ವಿನೋದ್ ನಾಯರ್ ಮತ್ತು ಗೌರವ ಅತಿಥಿಗಳಾಗಿ ಐಪಿಪಿಸಿಯ ಅಧ್ಯಕ್ಷರಾದ ಜಾಫರ್ ಸಾದಿಕ್ ಆಗಮಿಸಿದ್ದರು. ಬಿಸ್ವಜಿತ್ ಬ್ಯಾನರ್ಜಿ, ಸಂಜಯ್ ಪಾಟೀಲ್ ಮತ್ತು ಇತರ ಐಸಿಸಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಕತಾರ್ ವೀಸಾ ಕೇಂದ್ರ ತೆರೆಯಲು ಭಾರತ ಸರ್ಕಾರಕ್ಕೆ ಕತಾರ್ ಕರ್ನಾಟಕ ಸಂಘ ಮನವಿ

ಐಸಿಸಿ ಸ್ಟೂಡೆಂಟ್ಸ್ ಫೋರಮ್ ತಂಡವು ಈವೆಂಟ್ ಅನ್ನು ಉತ್ಸಾಹದಿಂದ ಪ್ರಸ್ತುತಪಡಿಸಿತು ಮತ್ತು ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆಯಿತು. ಮಾಸ್ಟರ್ ನಿಕ್ಕಿ ಡಿ ಕ್ರೂಜ್ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ