ಆ್ಯಪ್ನಗರ

‘ರೀ ! ನಿಮ್ಮನೇಲಿ ಗೊಂಬೆ ಕೂರ್ಸಿದೀರಾ?’ ಅಂತಾ ಕೇಳ್ತಿದ್ದಾರೆ ಸಿಂಗಪುರ ಕನ್ನಡಿಗರು, ಯಾಕೆ ಗೊತ್ತಾ?

ದೂರದ ಸಿಂಗಪುರದ ಸಿಂಗನ್ನಡಿಗರು ನಾಡಿನ ನೆಲದ ಹಬ್ಬದ ಘಮಲನ್ನು ಮಿಸ್‌ ಮಾಡ್ಕೊಳ್ಳುತ್ತಾರೆ. ಹೀಗಾಗಿ ದೂರದಲ್ಲಿದ್ದರೂ ಕೂಡ ಇಂತಹ ಭಾವ ಬರದಿರಲೆಂದು ಸಿಂಗಪುರ ಕನ್ನಡ ಸಂಘ ತನ್ನ ಸಂಘದ ಸದಸ್ಯರಿಗೆ ಬೊಂಬೆ ಸ್ಪರ್ಧೆಯನ್ನು ಆಯೋಜಿಸಿದೆ. ಆನ್‌ಲೈನ್‌ನಲ್ಲಿ ಆಯೋಜಿಸಿರುವ ಈ ಸ್ಪರ್ಧೆಯ ಆಹ್ವಾನ ಕೂಡ ವಿಶಿಷ್ಟವಾಗಿದ್ದು, ಸ್ಪರ್ಧೆಗೆ ಹಲವು ನಿಯಮಗಳನ್ನು ರೂಪಿಸಲಾಗಿದೆ.

Vijaya Karnataka Web 7 Oct 2021, 3:18 pm
ಸಿಂಗಪುರ: ಒಂದಲ್ಲೊಂದು ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸದಾ ಚಟುವಟಿಕೆಯಿಂದ ಇರುವ ಸಿಂಗಪುರದ ಕನ್ನಡ ಸಂಘ ಇದೀಗ ಮತ್ತೊಂದು ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿದೆ.
Vijaya Karnataka Web Singapore Kannada Sangha


ನವರಾತ್ರಿ ಸಮಯದಲ್ಲಿ ಭಾರತದಲ್ಲಿ ಹಬ್ಬದ ವಾತಾವರಣ ಇರೋದ್ರಿಂದ ದೂರದ ಸಿಂಗಪುರದ ಸಿಂಗನ್ನಡಿಗರು ನಾಡಿನ ನೆಲದ ಹಬ್ಬದ ಘಮಲನ್ನು ಮಿಸ್‌ ಮಾಡ್ಕೊಳ್ಳುತ್ತಾರೆ. ಹೀಗಾಗಿ ದೂರದಲ್ಲಿದ್ದರೂ ಕೂಡ ಇಂತಹ ಭಾವ ಬರದಿರಲೆಂದು ಸಿಂಗಪುರ ಕನ್ನಡ ಸಂಘ ತನ್ನ ಸಂಘದ ಸದಸ್ಯರಿಗೆ ಬೊಂಬೆ ಸ್ಪರ್ಧೆಯನ್ನು ಆಯೋಜಿಸಿದೆ. ಆನ್‌ಲೈನ್‌ನಲ್ಲಿ ಆಯೋಜಿಸಿರುವ ಈ ಸ್ಪರ್ಧೆಯ ಆಹ್ವಾನ ಕೂಡ ವಿಶಿಷ್ಟವಾಗಿದ್ದು, ಸ್ಪರ್ಧೆಗೆ ಹಲವು ನಿಯಮಗಳನ್ನು ರೂಪಿಸಲಾಗಿದೆ. ಇದರ ಪೂರ್ಣ ವಿವರ ಈ ಕೆಳಗಿನಂತಿದೆ.

ಬೊಂಬೆ ಸಂಭ್ರಮ...
‘ರೀ ! ನಿಮ್ಮನೇಲಿ ಗೊಂಬೆ ಕೂರ್ಸಿದೀರ’
ನಾಡಹಬ್ಬ - ನವರಾತ್ರಿಯ ಶುಭಾಶಯಗಳು
ದಸರಾ ಎಂದರೆ, ‘ರೀ ! ನಿಮ್ಮನೆಲಿ ಗೊಂಬೆ ಕೂರ್ಸಿದೀರ?’ ಅಂತ ಮನೆ ಮನೆಗೆ ಹೋಗುವ ಮಕ್ಕಳು, ವಿವಿಧ ಶೈಲಿಯಲ್ಲಿ ಅಲಂಕೃತಗೊಂಡ ಗೊಂಬೆಗಳ ಲೋಕವನ್ನು ಸೃಷ್ಟಿಸಿ ಮನೆಯಲ್ಲಿ ಪ್ರದರ್ಶನ ಮಾಡುವುದು ಕರ್ನಾಟಕದ ಬಹುತೇಕ ಪ್ರಾಂತ್ಯದ ಸಂಭ್ರಮದ ಸಮಯ. ಕರ್ನಾಟಕದ ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಜನ ಜೀವನವನ್ನು ದಸರಾ ಬೊಂಬೆಗಳು ಸಾರುತ್ತವೆ.
ಬೊಂಬೆ ಸಂಭ್ರಮ -ಸ್ಪರ್ಧೆ
ನಿಮ್ಮ ಮನೆಯ ಗೊಂಬೆ ಪ್ರದರ್ಶನವನ್ನು ಇತರ ಸಿಂಗನ್ನಡಿಗರಿಗೆ ಪ್ರಸ್ತುತ ಪಡಿಸಿ ನವರಾತ್ರಿಯ ಸೊಬಗನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಸದಾವಕಾಶವನ್ನು ಕನ್ನಡ ಸಂಘ (ಸಿಂಗಪುರ)ವು ನಿಮ್ಮೆಲ್ಲರಿಗೂ ಒದಗಿಸುತ್ತಿದೆ.
ನೀವು ಮಾಡಬೇಕಾದ್ದಿಷ್ಟೇ.
ನಿಮ್ಮ ಫೊನ್, ಕ್ಯಾಮೆರಾದಲ್ಲಿ ನಿಮ್ಮ ಮನೆಯಲ್ಲಿಟ್ಟಿರುವ ಗೊಂಬೆಗಳ ಚಿತ್ರವನ್ನು ಸೆರೆಹಿಡಿದು, ಕನ್ನಡದ ಒಂದು ಶೀರ್ಷಿಕೆಯೊಂದಿಗೆ dasara@singara.org ಈಮೇಲ್‌ಗೆ ಕಳುಹಿಸಬೇಕು. ಸಿಂಗನ್ನಡಿಗರು ತಮ್ಮ ನೆಚ್ಚಿನ ಗೊಂಬೆ ಪ್ರದರ್ಶನಕ್ಕೆ ಆನ್‌ಲೈನ್‌ ಮೂಲಕ ಮತ ಚಲಾಯಿಸಿ ವಿಜೇತರನ್ನು ಆಯ್ಕೆ ಮಾಡಬಹುದು.
ಅಂಬಾವಿಲಾಸ ಅರಮನೆಯಲ್ಲಿ ಯದುವೀರ್‌ರಿಂದ ಖಾಸಗಿ ದರ್ಬಾರ್; ಇಲ್ಲಿದೆ ದರ್ಬಾರ್ ಕುರಿತ ಪೂರ್ಣ ಮಾಹಿತಿ
ಆಯೋಜಕರು ಸೂಚಿಸಿರುವಂತೆ ಸ್ಪರ್ಧೆಯ ನೀತಿ ನಿಯಮಗಳು ಈ ಕೆಳಗಿನಂತಿವೆ.
  • ಆಸಕ್ತರು ತಮ್ಮ ಮನೆಯ ಬೊಂಬೆಯ ಫೋಟೋವನ್ನು ಅಕ್ಟೋಬರ್‌ 14ರ ಒಳಗೆ ಕಳುಹಿಸಬೇಕು.
  • ಸ್ಪರ್ಧಿಗಳಿಗೆ ಒಟ್ಟು ಮೂರು ಫೋಟೋಗಳನ್ನು ಮಾತ್ರ ಕಳುಹಿಸಲು ಅವಕಾಶವಿದೆ.
  • ಕನ್ನಡ ಸಂಘದ ಸದಸ್ಯತ್ವ ನೋಂದಣಿಯ ಸಂಖ್ಯೆಯನ್ನು ಚಿತ್ರದಲ್ಲಿ ದಾಖಲಿಸಬೇಕು.
  • ಸ್ವೀಕರಿಸಲಾದ ಫೋಟೋಗಳ ವಿವರಗಳನ್ನು ನವರಾತ್ರಿ ಸಮಯದಲ್ಲಿ ಸಂಘದ ವ್ಯಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಹೇಳಲಾಗುತ್ತದೆ.
  • ಮತ ಚಲಾಯಿಸುವ ಲಿಂಕ್‌ಗಳನ್ನು ಅಕ್ಟೋಬರ್‌ 15ರಂದು ನೀಡಲಾಗುವುದು. ಮತ್ತು ಮತ ಚಲಾಯಿಸುವ ಅವಕಾಶ ಅಕ್ಟೋಬರ್ 17ರ ಬೆಳಗ್ಗೆ 11 ಗಂಟೆಯ ತನಕ ಇರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ