ಆ್ಯಪ್ನಗರ

ಉತ್ತರ ಕರ್ನಾಟಕ ಬಳಗ ಕತಾರ್‌ ವತಿಯಿಂದ ರಕ್ತದಾನ ಶಿಬಿರ

ಈ ಶಿಬಿರದಲ್ಲಿ ಕೋವಿಡ್‌ ಬಿಗಿಯಾದ ನಿಯಮಗಳು ಮತ್ತು ರಂಜಾನ್ ಉಪವಾಸದ ಸಂದರ್ಭದಲ್ಲಿಯೂ ದಾನಿಗಳು ಬಂದು ರಕ್ತದಾನ ಮಾಡಿ ತಮ್ಮ ಸೇವಾಭಾವವನ್ನು ಮೆರೆದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಶಿಧರ ಹೆಬ್ಬಾಳ ಮತ್ತು ಆಡಳಿತ ಮಂಡಳಿ ಸದಸ್ಯರುಗಳು ದಾನಿಗಳ ಸೇವಾಮನೋಭಾವನೆಯನ್ನು ಕೊಂಡಾಡಿದರು.

Vijaya Karnataka Web 28 Apr 2021, 4:03 pm
ದೋಹಾ: ಉತ್ತರ ಕರ್ನಾಟಕ ಬಳಗ ಕತಾರ್ ವತಿಯಿಂದ ಏಪ್ರಿಲ್‌ 23 ರಕ್ತದಾನ ಶಿಬಿರ ನಡೆಯಿತು. ಇಲ್ಲಿನ ಹಮಾದ್‌ ಆಸ್ಪತ್ರೆಯ ಬ್ಲಡ್‌ ಡೊನರ್ಸ್‌ ಸೆಂಟರ್‌ನಲ್ಲಿ ಕಾರ್ಯಕ್ರಮ ನಡೆಯಿತು.
Vijaya Karnataka Web ರಕ್ತದಾನ ಶಿಬಿರ


ಈ ಶಿಬಿರದಲ್ಲಿ ಕನ್ನಡಿಗರು, ಪಂಜಾಬಿಗಳು ಹಾಗೂ ಮಲಯಾಳಿಗಳು ಸೇರಿ ಭಾರತದ ವಿವಿಧ ಪ್ರಾಂತ್ಯದ ಎನ್‌ಆರ್‌ಐಗಳು ಭಾಗವಹಿಸಿ ರಕ್ತದಾನ ಶಿಬಿರ ಯಶಸ್ವಿಗೊಳಿಸಿಕೊಟ್ಟರು.

ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ 2021ನೇ ಸಾಲಿನ ಅಧ್ಯಕ್ಷರಾಗಿ ಮಮತಾ ಮೈಸೂರು ನೇಮಕ
ಈ ಶಿಬಿರದಲ್ಲಿ ಕೋವಿಡ್‌ ಬಿಗಿಯಾದ ನಿಯಮಗಳು ಮತ್ತು ರಂಜಾನ್ ಉಪವಾಸದ ಸಂದರ್ಭದಲ್ಲಿಯೂ ದಾನಿಗಳು ಬಂದು ರಕ್ತದಾನ ಮಾಡಿ ತಮ್ಮ ಸೇವಾಭಾವವನ್ನು ಮೆರೆದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಶಿಧರ ಹೆಬ್ಬಾಳ ಮತ್ತು ಆಡಳಿತ ಮಂಡಳಿ ಸದಸ್ಯರುಗಳು ದಾನಿಗಳ ಸೇವಾಮನೋಭಾವನೆಯನ್ನು ಕೊಂಡಾಡಿದರು.

ಉತ್ತರ ಕರ್ನಾಟಕ ಬಳಗ ಕತಾರ್ ಹೆಸರು ಸದಾ ಒಂದಿಲ್ಲೊಂದು ವಿಭಿನ್ನ ಚಟುವಟಿಕೆಗಳಿಂದ ಗಮನ ಸೆಳೆಯುವದರ ಮೂಲಕ ರಾಜ್ಯದ ಜನರ ಮನೆ ಮಾತಾಗಿದೆ.

ಕರ್ನಾಟಕ ಸಂಘ ಕತಾರ್ ವತಿಯಿಂದ ವಾರ್ಷಿಕ ರಕ್ತದಾನ ಶಿಬಿರ
ಈ ಕಾರ್ಯಕ್ರಮದಲ್ಲಿ ಇಂಡಿಯನ್ ಕಲ್ಚರ್ ಸೆಂಟರ್ ನ ಅಧ್ಯಕ್ಷ ಬಾಬು ರಾಜನ್ ,ಐಸಿಸಿ ಮಾಜಿ ಅಧ್ಯಕ್ಷರಾದ ಮಿಲನ್ ಅರುಣ , ಐ ಸಿ ಬಿ ಎಫ್ ಮಾಜಿ ಉಪಾಧ್ಯಕ್ಷ ಮಹೇಶ ಗೌಡ, ಐ ಸಿ ಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಐಸಿಬಿಎಫ್ ಆಡಳಿತ ಮಂಡಳಿ ಸದಸ್ಯರಾದ ರಜನಿ ಮೂರ್ತಿ, ಶ್ರೀಮತಿ ಕುಲದೀಪ್ ಕೌರ್, ಪ್ರಿಯಾ ಬೇಡಿ ನಿರ್ದೇಶಕರು ಪ್ರಿಶ್ ಇಂಗಿಬಿಜ್ ಸೊಲ್ಯೂಷನ್ಸ್ ಎಲ್ ಎಲ್ ಸಿ , ಅಂಗ್ರೇಜ ಸಿಂಘ್ , ಪಂಜಾಬ್ ಸೇವಾದಳದ ಅಧ್ಯಕ್ಷರಾದ ಶ್ರೀ ಸಂದೀಪ್ ಸಿಂಘ್ ,ಬಳಗದ ಅಧ್ಯಕ್ಷರ ಜೊತೆ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬರನುದ್ದೀನ್ ಜುನೈದಿ , ಶ್ರೀ ಸವಣೂರ ರಾಜಶೇಖರ, ಶ್ರೀಮತಿ ಪ್ರೀತಿ ಉಪಾಧ್ಯಾ , ಮತ್ತು ಶ್ರೀ ಸುನಿಲ ಶಾಂತಪುರೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ