ಆ್ಯಪ್ನಗರ

ಒಕ್ಕಲಿಗರ ಪರಿಷತ್ ಯು.ಕೆ. ವತಿಯಿಂದ ಪ್ರೊ. ಕೃಷ್ಣೇಗೌಡರೊಂದಿಗೆ ಯುಗಾದಿ ಸಂಭ್ರಮ ಏಪ್ರಿಲ್ 17ಕ್ಕೆ

ಲಂಡನ್‌ನಲ್ಲಿರುವ ಒಕ್ಕಲಿಗ ಸಮುದಾಯದಿಂದ ಯುಗಾದಿ ಆಚರಣೆ. ಕನ್ನಡ ಖ್ಯಾತ ಹಾಸ್ಯ ಕಲಾವಿದ ಪ್ರೊ. ಕೃಷ್ಣೇಗೌಡ ಅವರಿಂದ ಭಾಷಣ. ಸಂಘದ ಫೇಸ್ಬುಕ್‌ ಹಾಗೂ ಝೂಮ್‌ ಮೂಲಕ ಕಾರ್ಯಕ್ರಮದ ನೇರ ಪ್ರಸಾರ.

Vijaya Karnataka Web 17 Apr 2021, 1:22 pm
ಲಂಡನ್‌: ನೋವು, ನಲಿವು, ಸಿಹಿ, ಕಹಿಯ ಮಿಶ್ರಣವಾಗಿದ್ದ ಶ್ರೀ ಶಾರ್ವರಿ ಸಂವತ್ಸರ ಮುಗಿದು ನೂತನವಾದ ಪ್ಲವನಾಮ ಸಂವತ್ಸರದ ಆಗಮನಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಹೊಸತನ್ನು ಹೊತ್ತು ಯುಗಾದಿ ಬರುತ್ತಿದೆ. ಏಪ್ರಿಲ್ 13ಕ್ಕೆ ಹೊಸ ಸಂವತ್ಸರ ಅಂದರೆ ಶ್ರೀ ಪ್ಲವ ನಾಮ ಸಂವತ್ಸರದ ಆರಂಭ, ಭಾರತದಲ್ಲಿ ಹಿಂದುಗಳಿಗೆ ಹೊಸ ವರ್ಷ ಎಂದರೆ ಅದು ಯುಗಾದಿ.
Vijaya Karnataka Web ಒಕ್ಕಲಿಗರ ಪರಿಷತ್ ಯು.ಕೆ


ಈ ಸುಸಂದರ್ಭದಲ್ಲಿ ‘ಒಕ್ಕಲಿಗರ ಪರಿಷತ್ ಯು.ಕೆ.’ ಸಂಸ್ಥೆಯವರು ಕನ್ನಡದ ಸುಪ್ರಸಿದ್ದ ವಾಗ್ಮಿಗಳು, ಕನ್ನಡಿಗರ ಹೆಮ್ಮೆಯ ಪ್ರೊ. ಕೃಷ್ಣೇಗೌಡರೊಂದಿಗೆ 'ಯುಗಾದಿ ಸಂಭ್ರಮ' ಕಾರ್ಯಕ್ರಮವನ್ನು ಏಪ್ರಿಲ್ 17ರ ಸಾಯಂಕಾಲ 4 ಗಂಟೆಗೆ (ಯುಕೆ ಸಮಯ) ಏರ್ಪಡಿಸಿದ್ದಾರೆ. ಕೃಷ್ಣೇ ಗೌಡರು ಭಾಷಾ ರೂಪದಲ್ಲಿ ಬೇರೆ ಪ್ರಪಂಚ ಕ್ಕೆ ಕರೆದೊಯ್ಯುತ್ತಾರೆ ಅನ್ನೋದು ಎಲ್ಲರಿಗು ತಿಳಿದಿರುವ ವಿಷಯ. ಅವರು ಭಾಷೆಯಲ್ಲಿ ಹೊಂದಿಕೊಂಡ ಪರಿಯೇ ಸೊಗಸು ಮತ್ತು ಮೆರುಗು, ನಮ್ಮ ಕನ್ನಡದ ಹೆಮ್ಮೆ ಪ್ರೋ.ಕೃಷ್ಣೆಗೌಡ್ರು.

ಕರ್ನಾಟಕ ಸಂಘ ಕತಾರ್ ವತಿಯಿಂದ ವಾರ್ಷಿಕ ರಕ್ತದಾನ ಶಿಬಿರ
ವಿಪಿಯುಕೆ ಯುಗಾದಿ ಸಂಭ್ರಮ ಕಾರ್ಯಕ್ರಮವು ಜೂಮ್ನಲ್ಲಿ ಹಾಗು ಫೇಸ್ಬುಕ್ ನಲ್ಲಿ ನೇರ ಪ್ರಸಾರವಾಗಲಿದೆ.

ಆನ್ಲೈನ್ ಕಾರ್ಯಕ್ರಮ ಆದುದರಿಂದ ‘ಒಕ್ಕಲಿಗರ ಪರಿಷತ್ ಯು.ಕೆ ತಂಡವು’ ಯುನೈಟೆಡ್ ಕಿಂಗ್ಡಮ್ ಜನರನ್ನು ಒಳಗೊಂಡು ಪ್ರಪಂಚದಲ್ಲಿರುವ ಸಮಸ್ತರಿಗೂ ಈ ಮೂಲಕ ಆಮಂತ್ರಣ ಕೊಟ್ಟಿರುತ್ತಾರೆ. ದಯವಿಟ್ಟು ಎಲ್ಲರು ಸೇರಿಕೊಂಡು ಕಾರ್ಯಕ್ರಮವನ್ನು ಯಶಸ್ಸು ಗಳಿಸಬೇಕೆಂದು ಈ ಮೂಲಕ ಕೋರಿಕೊಂಡಿರುತ್ತಾರೆ. ಕಾರ್ಯಕ್ರಮ್ಮಕ್ಕೆ ನೊಂದಾಯಿಸಲು ಇಚ್ಛಿಸುವವರು ಲಿಂಕ್ ಭರ್ತಿ ಮಾಡಿ www.tinyurl.com/VPUK-UGADI . ಹೆಚ್ಚಿನ ಮಾಹಿತಿಗೆ VPUK ಫೇಸ್ಬುಕ್ www.facebook.com/NammaVPUK ಅಥವಾ nammavpuk@gmail.com ಗೆ ಮೆಸೇಜ್ ಕಳಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ