ಆ್ಯಪ್ನಗರ

ದುಬೈಯಲ್ಲಿ ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ

ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ ಮತ್ತು ವೇಷಭೂಷಣದ ಕಾರ್ಯಗಾರ ದುಬೈ ನಗರದ ಟ್ವಿನ್-ಟವರ್ ನಲ್ಲಿ ಸಂಪನ್ನಗೊಂಡಿತು.

Vijaya Karnataka Web 20 Jul 2018, 11:27 am
ದುಬೈ: ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ ಮತ್ತು ವೇಷಭೂಷಣದ ಕಾರ್ಯಗಾರ ದುಬೈ ನಗರದ ಟ್ವಿನ್-ಟವರ್ ನಲ್ಲಿ ಸಂಪನ್ನಗೊಂಡಿತು.
Vijaya Karnataka Web yakshagana


ಸಂಯುಕ್ತ ಅರಬ್ ಸಂಸ್ಥಾನದ ಯಕ್ಷಗಾನಾಸಕ್ತರ ಸಂಯೋಜನೆಯಲ್ಲಿ, ಸ್ಥಳೀಯ ಯಕ್ಷರಂಗದ ಹಿರಿಯ ಕಲಾವಿದ ಭವಾನಿಶಂಕರ ಶರ್ಮರ ನೇತೃತ್ವದಲ್ಲಿ ದಿನಾಂಕ 13-07-2018ನೇ ಶುಕ್ರವಾರ ಈ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು.

ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿಯವರ ನಿರ್ದೇಶನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಗಿರೀಶ್ ನಾರಾಯಣ ಕಾಟಿಪಳ್ಳ, ಶರತ್ ಕುಮಾರ್ ಮತ್ತು ಬಾಲಕೃಷ್ಣ ಡಿ.ಶೆಟ್ಟಿಗಾರ್ ಕಿನ್ನಿಗೋಳಿಯವರು ಅಭ್ಯಾಸಿಗಳಿಗೆ ಉತ್ತಮವಾಗಿ ಮುಖವರ್ಣಿಕೆಗಳ ಸೂಕ್ಷ್ಮಗಳನ್ನು ವಿವರಿಸಿ ಅವರಿಂದಲೆ ಸ್ವತಃ ಮುಖವರ್ಣಿಕೆ ಮಾಡಿಸಿದರು. ತಾವೇ ಮಾಡಿಕೊಂಡ ಮುಖವರ್ಣಿಕೆಯೊಂದಿಗೆ ಶಿಬಿರಾರ್ಥಿಗಳೆಲ್ಲಾ ಭಾವಚಿತ್ರಗಳಿಗೆ ಭಂಗಿ ನೀಡಿ ಸಂಭ್ರಮಿಸಿದರು.

ಯಕ್ಷಗಾನದ ಉಡುಗೆ ತೊಡುಗೆಯನ್ನು ಕ್ರಮಬದ್ಧವಾಗಿ ಧರಿಸಿಕೊಳ್ಳುವ ಪ್ರಾತ್ಯಕ್ಷಿತೆಯನ್ನು ಶೇಖರ್ ಡಿ ಶೆಟ್ಟಿಗಾರ್ ವರು ಸೂಕ್ಷ್ಮವಾಗಿ ವಿವರಿಸುತ್ತಾ ಜೊತೆಗೆ ಅಭರಣಗಳನ್ನು ಸಮರ್ಪಕವಾದ ರೀತಿಯಲ್ಲಿ ದೇಹದ ವಿವಿಧ ಭಾಗಗಳಿಗೆ ತೊಡಿಸುವುದನ್ನು ಸಹ ತಿಳಿಸಿಕೊಟ್ಟರು. ಭವಾನಿಶಂಕರ ಶರ್ಮರ ಸಂಗ್ರಹದ ಯಕ್ಷಚಿತ್ರಗಳು ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.

ಈ ಸಮಾರಂಭದಲ್ಲಿ ಶಾರ್ಜಾ ಸಂಸ್ಕೃತ ತರಗತಿಗಳ ಸಂಯೋಜಕ ದಯಾನಂದ ಹೆಬ್ಬಾರ್ , ಶಾರ್ಜ ಕರ್ನಾಟಕ ಸಂಘದ ಕಾರ್ಯದರ್ಶಿ ನೋವೆಲ್ ಡಿಸೋಜ , ಕಲಾಪೋಷಕ ಧನಂಜಯ ಶೆಟ್ಟಿಗಾರ್, ಬಹುಮುಖ ಪ್ರತಿಭೆ ರಾಜೇಶ್ ಕುತ್ತಾರು, ದುಬೈಯ ಉದ್ಯಮಿ ಕೃಷ್ಣಕುಮಾರ್ ಐಲ್, ದಿನೇಶ ಶೆಟ್ಟಿ ಕೊಟ್ಟಿಂಜರು , ಹಿರಿಯ ಶಿಲ್ಪಿ ಸಮಾಜಸೇವಕ ಬಿ.ಕೆ.ಗಣೇಶ ರೈ, ಯು.ಎ.ಇ. ಪದ್ಮಶಾಲಿ ಸಂಘದ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಆನಂದ ಬೈಲೂರು, ದುಬೈ ಉದ್ಯಮಿಗಳಾದ ಯಶ್ ಶೆಟ್ಟಿ, ಗುಣಪಾಲ ಶೆಟ್ಟಿ, ರಾಜೇಶ್ ಶೆಟ್ಟಿ ದೇವಸ್ಯ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ