ಆ್ಯಪ್ನಗರ

ತಲೇಖಾನ್ ಶಾಲೆಗೆ ಕಾಲ್ನಡಿಗೆಯೇ ಗತಿ

ಪಟ್ಟಣ ಸಮೀಪದ ಯರದೊಡ್ಡಿ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ತಲೇಖಾನ್ ಗ್ರಾಮದ ಶಾಲೆಗೆ ತೆರಳಲು ಕಾಲ್ನಡಿಗೆಯೇ ಗತಿಯಾಗಿದೆ.

ವಿಕ ಸುದ್ದಿಲೋಕ 26 Feb 2016, 7:16 am
ಮುದಗಲ್; ಪಟ್ಟಣ ಸಮೀಪದ ಯರದೊಡ್ಡಿ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ತಲೇಖಾನ್ ಗ್ರಾಮದ ಶಾಲೆಗೆ ತೆರಳಲು ಕಾಲ್ನಡಿಗೆಯೇ ಗತಿಯಾಗಿದೆ.
Vijaya Karnataka Web
ತಲೇಖಾನ್ ಶಾಲೆಗೆ ಕಾಲ್ನಡಿಗೆಯೇ ಗತಿ


ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಸರಕಾರಿ ವಾಹನಗಳ ಕೊರತೆಯಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಸುಮಾರು 4 ಕಿ.ಮೀ. ದೂರ ಕಾಲ್ನಡಿಗೆ ಮೂಲಕವೇ ಚಲಿಸಬೇಕಿದೆ. ವಿದ್ಯಾಭ್ಯಾಸಕ್ಕಾಗಿ ಸರಕಾರ ಕೋಟಿಗಟ್ಟಲೆ ಹಣ ವ್ಯಯ ಮಾಡಿದರೂ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.

ತಲೇಖಾನ್ ಗ್ರಾಮದ ಶಾಲೆಗೆ ಯರದೊಡ್ಡಿ, ಯರದೊಡ್ಡಿ ತಾಂಡಾದಿಂದ ಮಕ್ಕಳು ಕಾಲ್ನಡಿಗೆ ಮೂಲಕ ಬರುವ ಅನಿವಾರ್ಯತೆಗೆ ಮುಕ್ತಿ ಇಲ್ಲದಂತಾಗಿದೆ. ಹೀಗಾಗಿ ಕೆಲ ಮಕ್ಕಳು ಶಾಲೆ ಬಿಟ್ಟು ಹೊಲ, ಮನೆಗಳ ಕೆಲಸಕ್ಕೆ ತೆರಳಿದ್ದಾರೆ. ಚುನಾಯಿತ ಜನಪ್ರತಿನಿಧಿಗಳಿಗೆ ಅದೆಷ್ಟೋ ಬಾರಿ ಮನವಿ ಮಾಡಿದರೂ ವಿದ್ಯಾರ್ಥಿಗಳ ಗೋಳಿಗೆ ಸ್ಪಂದನೆ ಸಿಗುತ್ತಿಲ್ಲ. ಕೂಡಲೇ ವಿದ್ಯಾರ್ಥಿಗಳ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದನೆ ಮಾಡಬೇಕಿದೆ.

------

ಬಸ್ ಸೌಕರ್ಯ ಇಲ್ಲ. ಸರಿಯಾದ ಸಮಯಕ್ಕೆ ಬಸ್ ಬರಲ್ಲ. ಕೆಲ ಖಾಸಗಿ ವಾಹನಗಳಿಗೆ ಕೈ ಮಾಡಿ ಡ್ರಾಪ್ ಕೇಳುವ ಸ್ಥಿತಿ ಇದೆ. ಯಾರಿಗೆ ಹೇಳಿದ್ರೂ ಬಸ್ ಸೌಕರ್ಯ ಮಾತ್ರ ಸಿಕ್ಕಿಲ್ಲ.

- ಶಿವಮ್ಮ , ವಿದ್ಯಾರ್ಥಿನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ