ಆ್ಯಪ್ನಗರ

ಮುಂದುವರಿದ ಚಿನ್ನಾಭರಣ ವ್ಯಾಪಾರಸ್ಥರ ಧರಣಿ

ಕೇಂದ್ರ ಸರಕಾರದ ಅಬಕಾರಿ ನೀತಿಯನ್ನು ಖಂಡಿಸಿ ಮಾರ್ಚ್ 8 ರಿಂದ ತಾಲೂಕಿನ ಚಿನ್ನ-ಬೆಳ್ಳಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಇಲ್ಲಿನ ದೊಡ್ಡ ಹನುಮಂತ ದೇವಸ್ಥಾನದಲ್ಲಿ ಅನಿರ್ಧಿಷ್ಟಾವಧಿ ಧರಣಿಯನ್ನು ಮುಂದುವರೆಸಿದ್ದಾರೆ.

ವಿಕ ಸುದ್ದಿಲೋಕ 14 Mar 2016, 6:27 am
ಲಿಂಗಸುಗೂರು; ಕೇಂದ್ರ ಸರಕಾರದ ಅಬಕಾರಿ ನೀತಿಯನ್ನು ಖಂಡಿಸಿ ಮಾರ್ಚ್ 8 ರಿಂದ ತಾಲೂಕಿನ ಚಿನ್ನ-ಬೆಳ್ಳಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಇಲ್ಲಿನ ದೊಡ್ಡ ಹನುಮಂತ ದೇವಸ್ಥಾನದಲ್ಲಿ ಅನಿರ್ಧಿಷ್ಟಾವಧಿ ಧರಣಿಯನ್ನು ಮುಂದುವರೆಸಿದ್ದಾರೆ.
Vijaya Karnataka Web
ಮುಂದುವರಿದ ಚಿನ್ನಾಭರಣ ವ್ಯಾಪಾರಸ್ಥರ ಧರಣಿ


ಬಂಗಾರ ಖರೀದಿಸಬೇಕೆಂದರೆ ಕೇಂದ್ರದ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಖರೀದಿಸಬೇಕು. 6 ಲಕ್ಷದ ವರೆಗೆ ಚಿನ್ನದ ವಹಿವಾಟು ನಡೆಸಿದೆ ಶೇ.1ರಷ್ಟು ವಹಿವಾಟು ಶುಂಕ ಅಲ್ಲದೇ 2 ಲಕ್ಷದ ಚಿನ್ನ ಮಾರಾಟ ಮಾಡಿದವರು ನಗದು ನೀಡದೇ ಡಿ.ಡಿ ಅಥವಾ ಚೆಕ್ ಮೂಲಕ ಹಣ ಪಡೆಯಬೇಕೆಂಬುದು ನಿಯಮ ಜಾರಿಗೆ ತರಲಾಗಿದೆ. ಇದರಿಂದ ತೀವ್ರವಾದ ತೊಂದರೆ ಅನುಭವಿಸುವಂತಾಗಿದೆ. ಚಿನ್ನದ ಆಭರಣ ಕಲಾವಿದರು, ಮಾರಾಟಗಾರರು ತೊಂದರೆಗೆ ಸಿಲುಕಲಿದ್ದಾರೆ. ಕೂಡಲೇ ಜಾರಿಗೆ ಬರುವಂತೆ ಕೇಂದ್ರ ಸರಕಾರ ಚಿನ್ನದ ವ್ಯಾಪಾರದ ಮೇಲೆ ಅಬಕಾರಿ ಸುಂಕ, ಟಿಸಿಎಸ್ ಪದ್ಧತಿಗಳನ್ನು ಹಿಂಪಡೆಯಬೇಕೆಂದು ಧರಣಿ ನಿರತರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ