ಆ್ಯಪ್ನಗರ

ನೀರಿನ ಸಮಸ್ಯೆ: ನೀರಗಂಟಿಗಳ ಸಭೆ

ಸ್ಥಳೀಯ ಪಟ್ಟಣದಲ್ಲಿ ದಿನೇ ದಿನೆ ನೀರಿನ ಸಮಸ್ಯೆ ತಿವ್ರವಾಗತೊಡಗಿದ್ದು, ಲೋಪ ದೋಷಗಳನ್ನು ಸರಿಪಡಿಸಲು ತಾಲೂಕು ಪಂಚಾಯಿತಿ ಇಒ ಪ್ರಾಣೇಶರಾವ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಗ್ರಾ.ಪಂ.ನಲ್ಲಿ ನೀರಗಂಟಿಗಳ ಸಭೆ ನಡೆಸಿ ನೀರಿನ ಸಮಸ್ಯೆ ಬಗ್ಗೆ ಶನಿವಾರ ಚರ್ಚಿಸಿದರು.

ವಿಕ ಸುದ್ದಿಲೋಕ 21 Mar 2016, 3:47 pm
ಹಟ್ಟಿಚಿನ್ನದಗಣಿ; ಸ್ಥಳೀಯ ಪಟ್ಟಣದಲ್ಲಿ ದಿನೇ ದಿನೆ ನೀರಿನ ಸಮಸ್ಯೆ ತಿವ್ರವಾಗತೊಡಗಿದ್ದು, ಲೋಪ ದೋಷಗಳನ್ನು ಸರಿಪಡಿಸಲು ತಾಲೂಕು ಪಂಚಾಯಿತಿ ಇಒ ಪ್ರಾಣೇಶರಾವ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಗ್ರಾ.ಪಂ.ನಲ್ಲಿ ನೀರಗಂಟಿಗಳ ಸಭೆ ನಡೆಸಿ ನೀರಿನ ಸಮಸ್ಯೆ ಬಗ್ಗೆ ಶನಿವಾರ ಚರ್ಚಿಸಿದರು.
Vijaya Karnataka Web
ನೀರಿನ ಸಮಸ್ಯೆ: ನೀರಗಂಟಿಗಳ ಸಭೆ


ಹಟ್ಟಿ ಪಟ್ಟಣಕ್ಕೆ 18 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕುಡಿವ ನೀರು ಪೂರೈಸುವ ಉದ್ದೇಶದಿಂದ ಕಾಮಗಾರಿ ಮಾಡಲಾಗಿದೆ. ಕಳೆದ 2 ವರ್ಷದಿಂದ 18 ಕಿ.ಮೀ.ದೂರದ ಕಷ್ಣಾ ನದಿಯಿಂದ ನೀರು ಪೂರೈಸಲಾಗು ತ್ತಿದೆ. ಇತ್ತೀಚಿನ ದಿನಗಳಲ್ಲಿ ಸರಿಯಾಗಿ ನೀರು ಪೂರೈಕೆಯಾಗದಿದ್ದರಿಂದ

ಜನ ನೀರಿಗಾಗಿ ಪರಾದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ವಸ್ತುಸ್ಥಿತಿಯನ್ನು ಅರಿತ ಇಒ, ಪಿಡಿಒರಿಗೆ ಆದೇಶ ಮಾಡಿ ನೀರಿನ ಸಮಸ್ಯೆ ನಿವಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ನೀರಗಂಟಿಗಳ ಸಭೆಯನ್ನು ಕರೆಯುವಂತೆ ತಿಳಿಸಿದ್ದರಿಂದ ಶನಿವಾರ ಪಂಚಾಯಿತಿ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ನೀರಗಂಟಿಗಳ ಅಹವಾಲು ಕೇಳಿ, ಅವರಿಗೆ ಇಂತಿಷ್ಟು ಸಮಯಕ್ಕೆ ಮಾತ್ರ ನೀರು ಬಿಡಬೇಕು, ಬೇಕಾಬಿಟ್ಟಿಯಾಗಿ ತಿಳಿದ ಕಡೆ ನೀರು ಬಿಡುವಂತಿಲ್ಲ, ಹಾಗೇನಾ ದರೂ ಕಂಡು ಬಂದರೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು. ನೀರಗಂಟಿಗಳು ಸಹ ‘ಓವರ್‌ಹೆಡ್ ಟ್ಯಾಂಕ್‌ಗಳು ಸರಿ ಯಾಗಿ ತುಂಬುವುದಿಲ್ಲ. ಹೀಗಾಗಿ ಎಲ್ಲ ಕಡೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕಷ್ಣಾ ನದಿಯಿಂದ ಬರುವ ನೀರು ಸರಿ ಯಾಗಿ ಬಂದರೆ ನಾವು ಖಂಡಿತ ವಾರ್ಡ್ ಗಳಲ್ಲಿ ಸರಿಯಾಗಿ ನೀರು ಪೂರೈಸುತ್ತೇವೆ..’ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಇಒ, ಆ ಬಗ್ಗೆ ಸೂಕ್ತಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಸಭೆ ನಡೆದ ಸಂದರ್ಭದಲ್ಲಿ ಒಳನುಗ್ಗಿ ಬಂದ ಗ್ರಾ.ಪಂ.ಮಾಜಿ ಅಧ್ಯಕ್ಷ ಸೂಗಪ್ಪ ಗಲಗ, ಮುಖಂಡರಾದ ಬಸವರಾಜಪ್ಪ ಪಾಮಶೆಟ್ಟಿ, ನಾಗರೆಡ್ಡಿ ಸಾಹುಕಾರ, ಎಸ್.ಎಸ್.ಅಂಗಡಿ ಇತರರು ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲವೆಂದು ಇಒ, ಪಿಡಿಒರನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಉಪಸ್ಥಿತರಿದ್ದ ತಾ.ಪಂ.ಸದಸ್ಯ ಎಂ.ಲಿಂಗರಾಜ ಮಾತನಾಡಿ, ಮುಖಂಡರನ್ನು ಸಮಾಧಾನ ಪಡಿಸಿ, ನೀರನ್ನು ಎಲ್ಲ ವಾರ್ಡ್‌ಗಳಿಗೆ ಸಮರ್ಕವಾಗಿ ಪೂರೈಸುವಂತೆ ಕ್ರಮಕೈಗೊಳ್ಳುವ ಉದ್ದೇಶದಿಂದ ನೀರಗಂಟಿಗಳ ಸಭೆ ಕರೆಯಲಾಗಿದೆ. ಎಲ್ಲರೂ ಸಹಕಾರ ನೀಡಿದರೆ ಸಮರ್ಪಕವಾಗಿ ನೀರು ಪೂರೈಸಲಾಗುವುದೆಂದು ತಿಳಿಸಿ ಆಕ್ರೋಶವನ್ನು ಶಮನಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ