ರಾಯಚೂರು; ಸ್ವಂತ ನಿವೇಶನದಲ್ಲಿ ಹರಿಯುತ್ತಿದ್ದ ಸಾರ್ವಜನಿಕರ ಚರಂಡಿ ನೀರು ತೆರವುಗೊಳಿಸಲು ನಿರ್ಲಕ್ಷ್ಯವಹಿಸಿದ ನಗರಸಭೆ ಆಡಳಿತದ ಕ್ರಮಕ್ಕೆ ಬೇಸತ್ತ ವ್ಯಕ್ತಿಯೊಬ್ಬ, ಪೌರಾಯುಕ್ತರಿಗೆ ಚಪ್ಪಲಿ ಪ್ರದರ್ಶಿಸಿ, ಪೊಲೀಸರ ಅತಿಥಿಯಾಗಿದ್ದಾನೆ.
ಇಲ್ಲಿನ ಗೌಸಿಯಾ ಕಾಲೊನಿ ನಿವಾಸಿ ಮಸೂದ್ ಅಲಿ ಬಂಧಿತ. ನಗರಸಭೆಯಲ್ಲಿ ಸೋಮವಾರ ನಡೆದ ತರಕಾರಿ ಮಾರುಕಟ್ಟೆಯ ಕರ ಸಂಗ್ರಹಣೆ ಗುತ್ತಿಗೆ ಹರಾಜು ಪ್ರಕ್ರಿಯೆ ವೇಳೆ ಏಕಾಏಕಿ ನುಗ್ಗಿದ ಈ ವ್ಯಕ್ತಿ, ‘‘ಸ್ವಂತ ನಿವೇಶನದಲ್ಲಿ ಸಾರ್ವಜನಿಕರ ಚರಂಡಿ ನೀರು ಹರಿಯುತ್ತಿರುವ ಬಗ್ಗೆ ಜ.28ರಂದೇ ಪೌರಾಯುಕ್ತ ಗುರುಲಿಂಗಪ್ಪ ಅವರಿಗೆ ದೂರು ಸಲ್ಲಿಸಿದ್ದೆ. ನನ್ನ ದೂರು ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಅಳಲಿಗೆ ಸ್ಪಂದಿಸುವವರು ಇಲ್ಲಿ ಯಾರೂ ಇಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಆತ ಪ್ರದರ್ಶಿಸಿದ ಚಪ್ಪಲಿಯಿಂದ ತನ್ನ ಕೆನ್ನೆಗೆ ತಾನೇ ಹೊಡೆದುಕೊಂಡಿದ್ದಾನೆ.
ಮಸೂದ್ ಅಲಿಯ ವಿಚಿತ್ರ ವರ್ತನೆಯಿಂದ ಸಭಾಂಗಣದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಚಪ್ಪಲಿ ಪ್ರದರ್ಶಿಸಿದ ಆತನ ಜತೆ ಪೌರಾಯುಕ್ತರು ಮತ್ತು ನಗರಸಭೆಯ ಸಿಬ್ಬಂದಿ ವಾಗ್ವಾದ ನಡೆಸಿದರು. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಸೂದ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಗೌಸಿಯಾ ಕಾಲೊನಿ ನಿವಾಸಿ ಮಸೂದ್ ಅಲಿ ಬಂಧಿತ. ನಗರಸಭೆಯಲ್ಲಿ ಸೋಮವಾರ ನಡೆದ ತರಕಾರಿ ಮಾರುಕಟ್ಟೆಯ ಕರ ಸಂಗ್ರಹಣೆ ಗುತ್ತಿಗೆ ಹರಾಜು ಪ್ರಕ್ರಿಯೆ ವೇಳೆ ಏಕಾಏಕಿ ನುಗ್ಗಿದ ಈ ವ್ಯಕ್ತಿ, ‘‘ಸ್ವಂತ ನಿವೇಶನದಲ್ಲಿ ಸಾರ್ವಜನಿಕರ ಚರಂಡಿ ನೀರು ಹರಿಯುತ್ತಿರುವ ಬಗ್ಗೆ ಜ.28ರಂದೇ ಪೌರಾಯುಕ್ತ ಗುರುಲಿಂಗಪ್ಪ ಅವರಿಗೆ ದೂರು ಸಲ್ಲಿಸಿದ್ದೆ. ನನ್ನ ದೂರು ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಅಳಲಿಗೆ ಸ್ಪಂದಿಸುವವರು ಇಲ್ಲಿ ಯಾರೂ ಇಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಆತ ಪ್ರದರ್ಶಿಸಿದ ಚಪ್ಪಲಿಯಿಂದ ತನ್ನ ಕೆನ್ನೆಗೆ ತಾನೇ ಹೊಡೆದುಕೊಂಡಿದ್ದಾನೆ.
ಮಸೂದ್ ಅಲಿಯ ವಿಚಿತ್ರ ವರ್ತನೆಯಿಂದ ಸಭಾಂಗಣದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಚಪ್ಪಲಿ ಪ್ರದರ್ಶಿಸಿದ ಆತನ ಜತೆ ಪೌರಾಯುಕ್ತರು ಮತ್ತು ನಗರಸಭೆಯ ಸಿಬ್ಬಂದಿ ವಾಗ್ವಾದ ನಡೆಸಿದರು. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಸೂದ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.