ಆ್ಯಪ್ನಗರ

ಜೀವಜಲ ಪೋಲು ತಡೆ ಅಗತ್ಯ

ನೀರಿನ ಅಭಾವ ನೀಗಿಸಲು ಸಾರ್ವಜನಿಕರಿಗೆ ಜಾಗತಿ ಮೂಡಿಸಬೇಕು. ಜತೆಗೆ ನೀರು ಪೋಲಾಗುವಿಕೆ ತಡೆಗಟ್ಟಲು ನೂತನ ಆವಿಷ್ಕಾರದ ಅಗತ್ಯ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ಹೇಳಿದರು.

ವಿಕ ಸುದ್ದಿಲೋಕ 23 Mar 2016, 7:20 pm
ರಾಯಚೂರು; ನೀರಿನ ಅಭಾವ ನೀಗಿಸಲು ಸಾರ್ವಜನಿಕರಿಗೆ ಜಾಗತಿ ಮೂಡಿಸಬೇಕು. ಜತೆಗೆ ನೀರು ಪೋಲಾಗುವಿಕೆ ತಡೆಗಟ್ಟಲು ನೂತನ ಆವಿಷ್ಕಾರದ ಅಗತ್ಯ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ಹೇಳಿದರು.
Vijaya Karnataka Web
ಜೀವಜಲ ಪೋಲು ತಡೆ ಅಗತ್ಯ


ನಗರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಾನಾ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಬಳಸಿದ ನೀರನ್ನು ಚರಂಡಿ, ಕಾಲುವೆಗೆ ಹರಿಯಲು ಬಿಡದೆ, ಪುನಃ ಬಳಕೆ ಮಾಡುವಂತಹ ಆವಿಷ್ಕಾರದ ಅಗತ್ಯವಿದೆ. ಹನಿ ಹನಿಯನ್ನೂ ಸಂರಕ್ಷಿಸಿ ಮುಂದಿನ ಪೀಳಿಗೆಯ ದಾಹ ತೀರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜೀವಜಲವನ್ನು ದುರ್ಬಳಕೆ ಮಾಡದೆ, ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. 1992ರಲ್ಲಿ ವಿಶ್ವಸಂಸ್ಥೆ ನಡೆಸಿದ ವಿಚಾರ ವಿನಿಮಯದಲ್ಲಿ ಜಲ, ಪರಿಸರ ಸಂರಕ್ಷಣೆ ಹಾಗೂ ನೀರಿನ ಹಿತಮಿತವಾದ ಬಳಕೆಯ ದಷ್ಟಿಯಿಂದ ವಿಶ್ವ ಜಲ ದಿನ ಕೈಗೊಂಡಿತು. ಅಧಿಕತವಾಗಿ 1993ರಲ್ಲಿ ಪ್ರತಿವರ್ಷ ಮಾ.22ರಂದು ನೀರನ್ನು ಪೋಲು ಮಾಡುತ್ತಿರುವುದನ್ನು ತಡೆಗಟ್ಟಲು ವಿಶ್ವ ಜಲ ದಿನ ಎಂದು ಆಚರಿಸುತ್ತಾ ಬರಲಾಗುತ್ತಿದೆ ಎಂದರು.

ಬಳ್ಳಾರಿ ಸೀಡ್ಸ್ ಸಂಸ್ಥೆಯ ಜಿ.ವಿಶ್ವಮೂರ್ತಿ ಉಪನ್ಯಾಸ ನೀಡಿ, ಶೇ.67.35ರಷ್ಟು ನೀರು ಭೂಮಂಡಲದಲ್ಲಿದೆ. ಕುಡಿಯಲು ಯೋಗ್ಯವಿರುವುದು ಕೇವಲ 0.02 ರಷ್ಟು ಮಾತ್ರ. ಇನ್ನುಳಿದ ನೀರನ್ನು ಪ್ರತಿನಿತ್ಯ ಕಲುಷಿತಗೊಳಿಸಿ ಕುಡಿಯಲು ಯೋಗ್ಯವಿಲ್ಲದಂತೆ ಮಾಡುತ್ತಿದ್ದೇವೆ. ಹಿಮಪರ್ವತಗಳಲ್ಲಿ ಮತ್ತು ಭೂಮಿಯಾಳದ ಶಿಲಾಸ್ತರಗಳಲ್ಲಿ ಶೇ.2.35 ರಷ್ಟು ಕುಡಿವ ನೀರಿದ್ದು, ಅವು ಬಂಧಿಯಾಗಿವೆ. ಗರಿಷ್ಠ ಪ್ರಮಾಣದ ನೀರನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿದ್ದೇವೆ. ದೇಹ ನಿರ್ವಹಣೆಗಾಗಿ ಹೊರಹಾಕುವ ನೀರಿನ ಕುರಿತು ಜನರಲ್ಲಿ ಜಾಗತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನೀರನ್ನು ಪೋಲು ಮಾಡದಂತೆ ರಕ್ಷಿಸಬೇಕು ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ನವೋದಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಶಿವಪ್ರಕಾಶ್ ಸಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ.ಬಿ.ಕುಲಕರ್ಣಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಜಿ.ಎಸ್.ವೀರಭದ್ರಪ್ಪ, ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಸೈಯದ್ ಹಫೀಜುಲ್ಲಾ, ಪರಿಸರ ಅಧಿಕಾರಿ ಆರ್.ಪದ್ಮನಾಭನ್, ಜಲಮಂಡಳಿಯ ಬಿ.ವಿ.ಹಾಲಪ್ಪ, ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಬಸಪ್ಪ ಗದ್ದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ