ಆ್ಯಪ್ನಗರ

ಬಯೋ ಗ್ಯಾಸ್ : ಹೊರಗುತ್ತಿಗೆ ರದ್ದತಿಗೆ ಆಗ್ರಹ

ಹಟ್ಟಿಚಿನ್ನದಗಣಿ ಕಂಪನಿಯಲ್ಲಿ ಸ್ಥಾಪಿಸಿರುವ ಬಯೋಗ್ಯಾಸ್‌ನಿಂದ ಗಣಿ ಕಂಪನಿಗೆ ಲಾಭವಾಗುವ ಬದಲಾಗಿ ಅಧಿಕಾರಿಗಳಿಗೆ ಲಾಭವಾಗುತ್ತಿದೆ. ಕೂಡಲೇ ಇದನ್ನು ಪರಿಶೀಲಿಸಬೇಕೆಂದು ಎಂದು ರೈತ ಹೋರಾಟಗಾರ ಶೇಖ್‌ಹುಸೇನ್ ಸೌದಗರ ಕಂಪನಿ ವ್ಯವಸ್ಥಾಪಕ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ.

ವಿಕ ಸುದ್ದಿಲೋಕ 6 Apr 2016, 5:48 am
ಹಟ್ಟಿಚಿನ್ನದಗಣಿ; ಹಟ್ಟಿಚಿನ್ನದಗಣಿ ಕಂಪನಿಯಲ್ಲಿ ಸ್ಥಾಪಿಸಿರುವ ಬಯೋಗ್ಯಾಸ್‌ನಿಂದ ಗಣಿ ಕಂಪನಿಗೆ ಲಾಭವಾಗುವ ಬದಲಾಗಿ ಅಧಿಕಾರಿಗಳಿಗೆ ಲಾಭವಾಗುತ್ತಿದೆ. ಕೂಡಲೇ ಇದನ್ನು ಪರಿಶೀಲಿಸಬೇಕೆಂದು ಎಂದು ರೈತ ಹೋರಾಟಗಾರ ಶೇಖ್‌ಹುಸೇನ್ ಸೌದಗರ ಕಂಪನಿ ವ್ಯವಸ್ಥಾಪಕ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ.
Vijaya Karnataka Web
ಬಯೋ ಗ್ಯಾಸ್ : ಹೊರಗುತ್ತಿಗೆ ರದ್ದತಿಗೆ ಆಗ್ರಹ


ಈ ಬಗ್ಗೆ ವವ್ಯಸ್ಥಾಪಕ ನಿರ್ದೇಶಕರಿಗೆ ಇತ್ತೀಚೆಗೆ ಪತ್ರ ಬರೆದಿರುವ ಅವರು, 85 ಲಕ್ಷ ರೂ. ವೆಚ್ಚದಲ್ಲಿ ಬಯೋಗ್ಯಾಸ್ ಘಟಕ ಸ್ಥಾಪನೆ ಮಾಡಲಾಗಿದೆ. ಈಗ ಅದರ ನಿರ್ವಹಣೆಗೆ ಹೊರಗುತ್ತಿಗೆ ನೀಡಲಾಗಿದೆ. ಇದಕ್ಕಾಗಿ ತಿಂಗಳಿಗೆ 84 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. ಬಯೋಗ್ಯಾಸ್ ಸ್ಥಾಪನೆ ಮೊದಲು ಕಂಪನಿಯ ಉಪಹಾರ ಗಹಕ್ಕೆ ತಿಂಗಳಿಗೆ 19 ಕೆ.ಜಿ.ಯ 8 ಅಡುಗೆ ಅನಿಲ್ ಖರ್ಚಾಗುತ್ತಿದ್ದು, ಬಯೋಗ್ಯಾಸ್ ಉತ್ಪಾದನೆ ಆರಂಭಗೊಂಡ ನಂತರ 4 ಅಡುಗೆ ಅನಿಲ್ ಸಿಲಿಂಡರ್‌ಗಳು ಖರ್ಚಾಗುತ್ತಿರುವುದು ಸಮಾಧಾನದ ವಿಷಯ. ಆದರೆ ಅದರ ನಿರ್ವಹಣೆಗಾಗಿ ತಿಂಗಳಿಗೆ 84 ಸಾವಿರ ರೂ. ಖರ್ಚು ಮಾಡುವ ಮೂಲಕ ಕಂಪನಿಗೆ ನಷ್ಟ ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಯೋಗ್ಯಾಸ್ ನಿರ್ವಹಣೆಗೆ ಕಂಪನಿಯ ವಿದ್ಯುತ್, ನೀರು, ಭದ್ರತೆ, ಕಂಪನಿ ಸಿಬ್ಬಂದಿಗಳ ಜತೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ನಿಯೋಜನೆ ವೆಚ್ಚ ಹಾಗೂ 85 ಲಕ್ಷ ರೂ. ಬಂಡವಾಳ ಹೂಡಿಕೆಯಿಂದ ಕಂಪನಿಗೆ ಯಾವುದೇ ತರಹದ ಲಾಭವಿಲ್ಲ. ಬಯೋಗ್ಯಾಸ್ ಘಟಕ ಸ್ಥಾಪಿಸಿದ್ದು ಪರಿಸರ ಸಂಸರಕ್ಷಣೆಗೆ ಒಳ್ಳೆಯ ಹೆಜ್ಜೆ. ಆದರೆ ಅದರ ಹೊರಗುತ್ತಿಗೆ ಕೆಲವು ಅಧಿಕಾರಿಗಳಿಗೆ ಮಾತ್ರ ಲಾಭ ತರುತ್ತಿದೆ ವಿನಃ ಕಂಪನಿಗೆ ಲಾಭ ತರುತ್ತಿಲ್ಲ. ಕಂಪನಿಯಲ್ಲಿ ಕಾರ್ಮಿಕರಿದ್ದರೂ ಹೊರಗುತ್ತಿಗೆ ನೀಡಿರುವುದು ಅನುಮಾನಕ್ಕೆ ಅಸ್ಪದ ನೀಡಿದೆ. ಇದನ್ನು ಪರಿಶೀಲಿಸಿ ಹೊರಗುತ್ತಿಗೆ ರದ್ದು ಪಡಿಸಲು ಕ್ರಮಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ