ಆ್ಯಪ್ನಗರ

ಒಂದೇ ಮತ ಅಂತರದಲ್ಲಿ ಗೆದ್ದವರು!

ತಾಲೂಕಿನ ಸಿರವಾರ ಮತ್ತು ಕವಿತಾಳ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು, ಒಂದೇ ಮತದ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ವಿಕ ಸುದ್ದಿಲೋಕ 28 Apr 2016, 8:17 am
ಮಾನ್ವಿ (ರಾಯಚೂರು); ತಾಲೂಕಿನ ಸಿರವಾರ ಮತ್ತು ಕವಿತಾಳ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು, ಒಂದೇ ಮತದ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
Vijaya Karnataka Web
ಒಂದೇ ಮತ ಅಂತರದಲ್ಲಿ ಗೆದ್ದವರು!


ಕವಿತಾಳ ಪ.ಪಂ. ವಾರ್ಡ್ ನಂ.1ರಿಂದ ಸ್ಪರ್ಧಿಸಿದ್ದ ಬಿಜೆಪಿಯ ಯಲ್ಲಮ್ಮ ಕರಿಯಪ್ಪ 136 ಹಾಗೂ ಕಾಂಗ್ರೆಸ್‌ನ ಮೋನಮ್ಮ 135 ಮತ ಪಡೆದರು. ಸಿರವಾರ ಪ.ಪಂ.ಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಹೇಮಲತಾ 139 ಹಾಗೂ ಕಾಂಗ್ರೆಸ್‌ನ ಬಸಮ್ಮ 138 ಮತ ಪಡೆದರು.

ಲಾಟರಿ ತಂದ ಗೆಲುವು: ಕವಿತಾಳ ಪ.ಪಂ.ನ ವಾರ್ಡ್ ನಂ.2ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮೌನೇಶ ಪೂಜಾರಿ ಹಾಗೂ ಪಕ್ಷೇತರ ಅಭ್ಯರ್ಥಿ ಶಿವಣ್ಣ ಅವರು ತಲಾ 288 ಮತ ಪಡೆದು ಸಮಬಲ ಸಾಧಿಸಿದರು. ನಂತರ ಲಾಟರಿ ಎತ್ತಿದಾಗ, ಕಾಂಗ್ರೆಸ್‌ನ ಮೌನೇಶ ಪೂಜಾರಿ ಗೆಲುವು ಸಾಧಿಸಿದರು.

ವೇಷಗಾರ ಕುಟುಂಬದ ಅಭ್ಯರ್ಥಿಗೆ ಗೆಲುವು: ಸಿರವಾರ ಪಟ್ಟಣ ಪಂಚಾಯಿತಿಯ 5 ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಷಗಾರ ಕುಟುಂಬದ ಎಂ.ಎಸ್. ಕಾಸೀಂ ಮೋತಿ ಗೆಲ್ಲುವ ಮೂಲಕ ಗಮನಸೆಳೆದಿದ್ದಾರೆ. 222 ಮತ ಪಡೆದ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿಯಿಂದ 86 ಮತಗಳ ಅಂತರದಿಂದ ಗೆದ್ದರು.

ಮಾವನ ವಿರುದ್ಧ ಗೆದ್ದ ಅಳಿಯ: ಸಿರವಾರ ಪ.ಪಂ. 6ನೇ ವಾರ್ಡ್ ಚುನಾವಣೆಯಲ್ಲಿ ಮಾವನ ವಿರುದ್ಧ ಅಳಿಯ ಗೆಲುವು ಸಾಧಿಸಿದ್ದಾರೆ. ಅಳಿಯ ಇಮಾಮುದ್ದೀನ್ ಜೆಡಿಎಸ್‌ನಿಂದ ಹಾಗೂ ಸ್ವಂತ ಅಕ್ಕನ ಪತಿ ಹಾಜಿ ಚೌದ್ರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಇಮಾಮುದ್ದೀನ್ 337 ಮತ ಪಡೆದು, ತಮ್ಮ ಮಾವನವರನ್ನು 77 ಮತಗಳ ಅಂತರದಿಂದ ಸೋಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ