ಆ್ಯಪ್ನಗರ

ಆರ್‌ಡಿಎಸ್ ಪ್ರದೇಶಕ್ಕೆ ಮಂತ್ರಾಲಯಂ ಶಾಸಕ ಭೇಟಿ

ಜಿಲ್ಲೆಯ ರಾಜೋಳಿ ಬಂಡಾ ತಿರುವು ಯೋಜನೆ ಅಣೆಕಟ್ಟೆ ಯ ಆಂಧ್ರಪ್ರದೇಶ ವ್ಯಾಪ್ತಿಯ ಸ್ಥಳಕ್ಕೆ ಮಂತ್ರಾಲಯಂ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಬಾಲನಾಗಿರೆಡ್ಡಿ ಅವರು, ನೂರಕ್ಕೂ ಹೆಚ್ಚು ರೈತರೊಂದಿಗೆ ಸೋಮವಾರ ಭೇಟಿನೀಡಿ ಪರಿಶೀಲಿಸಿದರು.

ವಿಕ ಸುದ್ದಿಲೋಕ 24 May 2016, 8:38 am
ರಾಯಚೂರು; ಜಿಲ್ಲೆಯ ರಾಜೋಳಿ ಬಂಡಾ ತಿರುವು ಯೋಜನೆ ಅಣೆಕಟ್ಟೆ ಯ ಆಂಧ್ರಪ್ರದೇಶ ವ್ಯಾಪ್ತಿಯ ಸ್ಥಳಕ್ಕೆ ಮಂತ್ರಾಲಯಂ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಬಾಲನಾಗಿರೆಡ್ಡಿ ಅವರು, ನೂರಕ್ಕೂ ಹೆಚ್ಚು ರೈತರೊಂದಿಗೆ ಸೋಮವಾರ ಭೇಟಿನೀಡಿ ಪರಿಶೀಲಿಸಿದರು.
Vijaya Karnataka Web
ಆರ್‌ಡಿಎಸ್ ಪ್ರದೇಶಕ್ಕೆ ಮಂತ್ರಾಲಯಂ ಶಾಸಕ ಭೇಟಿ


ಅಣೆಕಟ್ಟೆಯ ಆಧುನೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸರಕಾರಗಳು ಕರ್ನಾಟಕಕ್ಕೆ ಈಗಾಗಲೇ ಮನವಿ ಮಾಡಿವೆ. ‘‘ಅಣೆಕಟ್ಟೆಯ ಆಧುನೀಕರಣ ಕಾಮಗಾರಿಯಿಂದ ಕರ್ನೂಲು ಜಿಲ್ಲೆಯ ಹಲವು ಗ್ರಾಮಗಳಿಗೆ ನೀರಿನ ಕೊರತೆಯಾಗಲಿದೆ’’ ಎಂದು ಬಾಲನಾಗಿರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ‘‘ಅಣೆಕಟ್ಟೆಯ ಆಧುನೀಕರಣಕ್ಕೆ ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ. ಹೋರಾಟ ತೀವ್ರಗೊಳಿಸುತ್ತೇವೆ’’ ಎಂದು ರೈತರು ಎಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.

ಸಮಸ್ಯೆಯಿಲ್ಲ: ಈ ಕುರಿತು ರಾಯಚೂರು ಎಸ್ಪಿ ಡಾ.ಚೇತನ್‌ಸಿಂಗ್ ರಾಥೋರ್ ಪ್ರತಿಕ್ರಿಯಿಸಿ, ‘‘ಜಿಲ್ಲೆಯ ಗಡಿಯಲ್ಲಿರುವ ಆರ್‌ಡಿಎಸ್ ಅಣೆಕಟ್ಟೆಯ ಸ್ಥಳದ ಆಚೆಯ ದಡದಲ್ಲಿ ಮಂತ್ರಾಲಯಂ ಕ್ಷೇತ್ರದ ಶಾಸಕರು ಭೇಟಿನೀಡಿದ್ದಾರೆ. ಆದರೆ, ಅದರಿಂದ ಕರ್ನಾಟಕ ಭಾಗದಲ್ಲಿ ಯಾವುದೇ ಸಮಸ್ಯೆಯಾಗದು. ಜಿಲ್ಲೆ ವ್ಯಾಪ್ತಿಯಲ್ಲಿ ಅಣೆಕಟ್ಟೆ ಪ್ರದೇಶದ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ