ಸಿಂಧನೂರು (ರಾಯಚೂರು): ಸಾಲಬಾಧೆ ತಾಳದ, ತಾಲೂಕಿನ ಆರ್.ಎಚ್.ನಂ.4 ಕ್ಯಾಂಪಿನ ರೈತ ಅಮರಕುಮಾರ್ ಭದ್ರ (45), ವಿಷ ಕುಡಿದು ಬುಧವಾರ ಆತ್ಮಹತ್ಯೆಮಾಡಿಕೊಂಡಿದ್ದಾರೆ.
ನಗರದ ವಿಎಸ್ಎಸ್ಎಸ್ಎನ್ ಬ್ಯಾಂಕಿನಲ್ಲಿ 1.35 ಲಕ್ಷ ರೂ. ಮತ್ತು ಎಲ್ ಆ್ಯಂಡ್ ಟಿ ಫೈನಾನ್ಸ್ನಲ್ಲಿ 10 ಲಕ್ಷ ರೂ. ಹಾಗೂ ಸುಕೋ ಬ್ಯಾಂಕಿನಲ್ಲಿ 35 ಸಾವಿರ ರೂ. ಹಾಗೂ ಖಾಸಗಿಯಾಗಿಯೂ ಸಾಲಮಾಡಿದ್ದರು. ಸಾಲ ತೀರಿಸಲಾಗದ ಚಿಂತೆ ಅವರನ್ನು ಕಾಡುತ್ತಿತ್ತು. ಅತ್ತೆ ರಾಣಿಬಾಲಾ ಅವರ ಜಮೀನು ಸಾಗುವಳಿಯಲ್ಲೂ ನಷ್ಟ ಅನುಭವಿಸಿದ್ದರು. ಜಮೀನಿನಲ್ಲಿ ವಿಷ ಕುಡಿದು ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವಿಎಸ್ಎಸ್ಎಸ್ಎನ್ ಬ್ಯಾಂಕಿನಲ್ಲಿ 1.35 ಲಕ್ಷ ರೂ. ಮತ್ತು ಎಲ್ ಆ್ಯಂಡ್ ಟಿ ಫೈನಾನ್ಸ್ನಲ್ಲಿ 10 ಲಕ್ಷ ರೂ. ಹಾಗೂ ಸುಕೋ ಬ್ಯಾಂಕಿನಲ್ಲಿ 35 ಸಾವಿರ ರೂ. ಹಾಗೂ ಖಾಸಗಿಯಾಗಿಯೂ ಸಾಲಮಾಡಿದ್ದರು. ಸಾಲ ತೀರಿಸಲಾಗದ ಚಿಂತೆ ಅವರನ್ನು ಕಾಡುತ್ತಿತ್ತು. ಅತ್ತೆ ರಾಣಿಬಾಲಾ ಅವರ ಜಮೀನು ಸಾಗುವಳಿಯಲ್ಲೂ ನಷ್ಟ ಅನುಭವಿಸಿದ್ದರು. ಜಮೀನಿನಲ್ಲಿ ವಿಷ ಕುಡಿದು ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.