ಆ್ಯಪ್ನಗರ

ಬಾಗಿಲು ಕಾಯೋದೇ ಕಾಯಕ

ನೆಟ್‌ವರ್ಕ್ ಕೈಕೊಡುತ್ತಿರುವ ಪರಿಣಾಮ ಪಟ್ಟಣದ ಪಡಿತರ ಚೀಟಿ ನೋಂದಣೆ ಕಚೇರಿಗೆ ಬರುವ ಫಲಾನುಭವಿಗಳಿಗೆ ಕಚೇರಿ ಬಾಗಿಲು ಕಾಯುವುದೇ ಕಾಯಕವಾಗಿದೆ.

ವಿಕ ಸುದ್ದಿಲೋಕ 30 Sep 2016, 6:45 am
ಲಿಂಗಸುಗೂರು; ನೆಟ್‌ವರ್ಕ್ ಕೈಕೊಡುತ್ತಿರುವ ಪರಿಣಾಮ ಪಟ್ಟಣದ ಪಡಿತರ ಚೀಟಿ ನೋಂದಣೆ ಕಚೇರಿಗೆ ಬರುವ ಫಲಾನುಭವಿಗಳಿಗೆ ಕಚೇರಿ ಬಾಗಿಲು ಕಾಯುವುದೇ ಕಾಯಕವಾಗಿದೆ.
Vijaya Karnataka Web
ಬಾಗಿಲು ಕಾಯೋದೇ ಕಾಯಕ


ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯಲ್ಲಿ ಪಡಿತರ ಚೀಟಿ ನೋಂದಣಿ, ತಿದ್ದುಪಡಿ, ಆಧಾರ್ ಕಾರ್ಡ್ ಮ್ಯಾಪಿಂಗ್, ಹೆಸರು, ವಿಳಾಸ ಬದಲಾವಣೆ... ಹೀಗೆ ನಾನಾ ಕೆಲಸಗಳಿಗೆಂದು ನಿತ್ಯ ಹತ್ತಾರು ಜನ ಕಚೇರಿಗೆ ಬರುತ್ತಲೇ ಇರುತ್ತಾರೆ. ಸಕಾಲಕ್ಕೆ ಕೆಲಸವಾಗದೇ ಒಂದು ದಿನದ ಕೂಲಿಯೂ ಹೊಯ್ತು, ಕೆಲಸವೂ ಆಗಲಿಲ್ಲವೆಂದು ಗೊಣಗುತ್ತ ಮನೆಯತ್ತ ತೆರಳುವುದು ಮಾಮೂಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ಪಡಿತರ ಚೀಟಿ ವಿತರಣೆ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ಲೆಕ್ಕಪತ್ರ ಒಪ್ಪಿಸುತ್ತಾರೆ. ಆದರೆ, ವಾಸ್ತವವಾಗಿ ಪ್ರತಿದಿನ ಕಾರ್ಡ್‌ಗಾಗಿ ಮಹಿಳೆಯರು, ಮಕ್ಕಳು, ವದ್ಧರಾದಿಯಾಗಿ ಕಚೇರಿಗೆ ಅಲೆದಾಡುವ ಅನಿವಾರ್ಯತೆ ಇದೆ. ಇತ್ತ ಕಚೇರಿಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಿಬ್ಬಂದಿ ಕೊರತೆಯೂ ಇದೆ. ಅಲ್ಲದೇ, ನೂರಾರು ಜನಕ್ಕೆ ಎರಡೇ ಕಂಪ್ಯೂಟರ್‌ಗಳಲ್ಲಿ ಫೀಡ್ ಮಾಡಲಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಂಡು ಇನ್ನಷ್ಟು ಕಂಪ್ಯೂಟರ್‌ಗಳ ಮೂಲಕ ಪಡಿತರ ಕಾರ್ಡ್‌ಗಳ ಸರಾಗ ಹಂಚಿಕೆಗೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

----
ಬೆಳಗಿನಿಂದಲೇ ಪಾಳಿ ಹಚ್ಚಿ ಬಂದು ಕೂತೀನ್ರಿ. ಅದೇನೋ ಸರ್ವರ್ ಡೌನ್ ಅನ್ನಾಕತ್ಯಾರ. ಯಾರ‌್ದೂ ಕೆಲಸ ಆಗವಲ್ದು. ಬಡವರಿಗೆ ಟೈಮ್ ಟೈಮಿಗೆ ರೇಷನ್ ಕೊಡತೀವಂತ ಟೀವ್ಯಾಗ ಹೇಳ್ತಾರ. ಇಲ್ಲಿ ನೋಡಿದ್ರ ಕಾರ್ಡ್ ಮಾಡಸಾಕ ತಿರುಗಿ ತಿರುಗಿ ಸಾಕಾಗೈತಿ.

-ಬಸವರಾಜಪ್ಪ ಆನೆಹೊಸೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ